2000 ಶಾಲೆ ಮುಚ್ಚದಂತೆ 11 ವರ್ಷದಬಾಲಕನ ಏಕಾಂಗಿ ಹೋರಾಟ
ಬೆಂಗಳೂರು : ಬೆಂಗಳೂರಿನ ಗಾಂಧಿ ಪ್ರತಿಮೆ ಬಳಿ ವಿನೂತನವಾದ್ದೊಂದು ಪ್ರತಿಭಟನೆ. ಸ್ಕೂಲ್ ಈಸ್ ಅವರ್ ಟೆಂಪಲ್, ಡೋಂಟ್ ಕ್ಲೋಸ್ ಇಟ್, ನೋ ಟು ಸ್ಕೂಲ್ ಷೇಮ್ ಷೇಮ್, ಎಸ್ ಟಿ ಬಿಯರ್ ಬ್ಯಾಡ್ ಬ್ಯಾಡ್, ಶಾಲೆ ಮುಚ್ಚಿ ವಿದ್ಯಾರ್ಥಿಗಳನ್ನು ಬಲಿ ಕೊಡಬೇಡಿ ಎಂಬಿತ್ಯಾದಿ ಫಲಕಗಳ ನಡುವೆ ಪುಟ್ಟ ಬಾಲಕನೊಬ್ಬ ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿದ್ದ.
ವಿದ್ಯಾರ್ಥಿಗಳ ಕೊರತೆ ಇರುವ 2000 ಶಾಲೆಗಳನ್ನು ಮುಚ್ಚುವುದಾಗಿ ಮೊದಲು ಹೇಳಿಕೆ ನೀಡಿ ಆನಂತರ ವಿಲೀನದ ಮಾತನಾಡಿದ ರಾಜ್ಯದ ಶಿಕ್ಷಣ ಸಚಿವ ವಿಶ್ವನಾಥ್ ಹೇಳಿಕೆಯನ್ನು ಸೈನಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಟಿ.ಎಂ. ಸೋಮನಾಥ್ ಜೋಷಿ ಧರಣಿ ನಡೆಸುವ ಮೂಲಕ ಖಂಡಿಸಿದ. ಅಂಗಡಿಗಳಲ್ಲಿ ಬಿಯರ್ ಮಾರುವ ಸರಕಾರ ಶಾಲೆ ಮುಚ್ಚುವ ನಿರ್ಧಾರ ಕೈಗೊಂಡಿದ್ದು ಈ ಪುಟ್ಟ ಬಾಲಕನನ್ನೂ ರೊಚ್ಚಿಗೆಬ್ಬಿಸಿತ್ತು.
ಈ ಬಾಲಕನೇನೂ ಸಾಮಾನ್ಯನಲ್ಲ. ಅಮೆರಿಕದ ಈಗಿನ ಅಧ್ಯಕ್ಷರಾದ ಜಾರ್ಜ್ ಬುಷ್ರಿಗೇ ಚುನಾವಣೆ ಖರ್ಚಿಗೆ ಹಣ ಕೊಟ್ಟ ಭೂಪ, ಫ್ರಾನ್ಸ್ನಲ್ಲಿ ದೇವಾಲಯ ಕಟ್ಟಲು ಅನುಮತಿ ನೀಡಿದ ಫ್ರಾನ್ಸ್ ಅಧ್ಯಕ್ಷರಿಗೆ ಪತ್ರ ಬರೆದು ಅಭಿನಂದಿಸಿ, ಫ್ರಾನ್ಸ್ನಲ್ಲಿ ದೇಗುಲ ಕಟ್ಟುವ ಬದಲು, ಭಾರತದಲ್ಲಿ ಒಂದೆರಡು ಒಳ್ಳೆ ಶಾಲೆ ಕಟ್ಟುವಂತೆ ಅಲ್ಲಿನ ಭಾರತೀಯರಿಗೆ ಸಲಹೆಕೊಟ್ಟ ಶೂರ.
ಜಗತ್ತಿನ ಬಡತನಕ್ಕೆ ಅನಕ್ಷರತೆಯೇ ಕಾರಣ ಎಂಬ ತತ್ವವನ್ನು ವಿಶ್ವಸಂಸ್ಥೆ ಕಾರ್ಯದರ್ಶಿ ಕೋಫಿ ಅನ್ನಾನ್ರಿಗೇ ತಿಳಿಸಿಕೊಟ್ಟ ಧೀರ. ಎಲ್ಲ ರಾಷ್ಟ್ರಗಳಲ್ಲೂ ಎಲ್ಲರಿಗೂ ಮೂಲಭೂತ ಶಿಕ್ಷಣ ದೊರಕುವಂತೆ ನಿರ್ದೇಶನ ನೀಡಬೇಕು ಎಂದು ಅನ್ನಾನ್ರಿಗೇ ಪತ್ರ ಬರೆದು ಪ್ರಾರ್ಥಿಸಿದ ವಿಶ್ವದ ಕಳಕಳಿಯುಳ್ಳ ಪೋರ.
ಅಲಸೂರಿನ ಅನಿತಾ ಹಾಗೂ ನರಸಿಂಹ ಮೂರ್ತಿ ಅವರ ಮಗನಾದ ಸೋಮನಾಥ ಕಳೆದ ವರ್ಷ ಅಮೆರಿಕಾ ಚುನಾವಣೆಯ ಸಂದರ್ಭದಲ್ಲಿ ಜಾರ್ಜ್ ಬುಷ್ರ ಚುನಾವಣೆ ಖರ್ಚಿಗೆ 5 ಡಾಲರ್ ಕಳಿಸಿದ್ದ. ಬುಷ್ ಅವರು ತಮ್ಮ ಬಗ್ಗೆ ಇಟ್ಟಿರುವ ಕಾಳಜಿಗೆ ಬಾಲಕನನ್ನು ಅಭಿನಂದಿಸಿ, ಈ ಹಣವನ್ನು ಪುಸ್ತಕ ಕೊಳ್ಳಲು ಬಳಸು, ವಿದ್ಯಾಭ್ಯಾಸ ಮುಖ್ಯ ಎಂದು ಪತ್ರ ಬರೆದಿದ್ದರು. ಈಗ ಸೋಮನಾಥ ರಾಜ್ಯ ಸರಕಾರ 2000 ಶಾಲೆ ಮುಚ್ಚುವ ಸಂಬಂಧ ನೀಡಿರುವ ಹೇಳಿಕೆಯ ವಿರುದ್ಧ ಸಿಡಿದೆದ್ದು ನಿಂತಿದ್ದಾನೆ. ಹೋರಾಟದ ಹಾದಿ ಹಿಡಿದಿದ್ದಾನೆ.
ಹತ್ತಿರದಲ್ಲಿ ಶಾಲೆಗಳು ಇಲ್ಲದಿದ್ದರೆ, ಮತ್ತಷ್ಟು ಹುಡುಗರು ಶಾಲೆ ಬಿಡುತ್ತಾರೆ. ಹೀಗಾಗಿ ಸರಕಾರ ತನ್ನ ಈ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಎಂಬುದು ಈತನ ಆಗ್ರಹ. ವಿಜ್ಞಾನಿ ರಾಜಾ ರಾಮಣ್ಣ ಅವರ ವಿನಾ ಮತ್ತಾರೂ ಸರ್ಕಾರದ ಈ ನಿರ್ಧಾರವನ್ನು ಖಂಡಿಸಿಲ್ಲ. ವಸ್ತು ಸ್ಥಿತಿ ಹೀಗಿರುವಾಗ, ಬಾಲಕನ ಈ ಕಳಕಳಿ ಮೆಚ್ಚತಕ್ಕಂಥದ್ದೆ!
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications