ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರ್ಥಕ ಪೊಲೀಸ್‌ ಸೇವೆಯಿಂದ ಎಲ್‌. ರೇವಣಸಿದ್ಧಯ್ಯ ನಿವೃತ್ತಿ

By Staff
|
Google Oneindia Kannada News

ಬೆಂಗಳೂರು - ಕೊನೆಯ ಉಸಿರು ಇರುವ ತನಕ ಸಮಾಜ ಸೇವೆ ಮಾಡುವುದಕ್ಕೆ ನಾನು ಸಿದ್ಧ ಎಂದು ನಿವೃತ್ತ ರಾಜ್ಯ ಬಂಧೀಖಾನೆ ಪೊಲೀಸ್‌ ಮಹಾನಿರ್ದೇಶಕ ಎಲ್‌. ರೇವಣ ಸಿದ್ಧಯ್ಯ ಹೇಳಿದ್ದಾರೆ.

ಶನಿವಾರ, ಬಂಧೀಖಾನೆ ಕಚೇರಿ ಆವರಣದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸೇವೆಯಿಂದ ನಿವೃತ್ತರಾದ ರೇವಣಸಿದ್ಧಯ್ಯ ಅವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು. ಈವರೆಗೆ ನಾನು ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಆದರೆ, ಇನ್ನು ಮುಂದೆ ಪೊಲೀಸ್‌ ಪದ ಹೋಗಿ ಬರೇ ಸೇವೆ ಮಾತ್ರ ಉಳಿದುಕೊಳ್ಳುತ್ತದೆ ಎಂದು ರೇವಣ್ಣ ಸಿದ್ಧಯ್ಯ ಹೇಳಿದರು.

ಇದೇ ಸಂದರ್ಭದಲ್ಲಿ ನಿಟ್ಟೂರು ಶ್ರೀನಿವಾಸ ಮೂರ್ತಿ ಅವರು ಸಂಘ ಸಂಸ್ಥೆಗಳ ಪರವಾಗಿ ರೇವಣ್ಣ ಸಿದ್ಧಯ್ಯ ಅವರಿಗೆ ಪುಷ್ಪ ಮಾಲೆ ಮತ್ತು ನೆನಪಿನ ಕಾಣಿಕೆ ಅರ್ಪಿಸಿದರು. ಹಿರಿಯ ಶಿಕ್ಷಣ ತಜ್ಞ ಎಚ್‌. ನರಸಿಂಹಯ್ಯ ಅವರು ಮಾತನಾಡಿ ರೇವಣ್ಣ ಅವರು ಹಿರಿಯ ನಾಗರಿಕರ ಬಗ್ಗೆ ಅತ್ಯಂತ ಕಾಳಜಿ ಇರುವ ವ್ಯಕ್ತಿ ಎಂದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X