ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ್‌ ಪೆಟ್ರೋಲಿಯಂ ಅಧಿಕಾರಿಗಳಿಬ್ಬರು ನೀರುಪಾಲು

By Staff
|
Google Oneindia Kannada News

ಮಂಗಳೂರು : ಭಾನುವಾರದ ರಜೆಯನ್ನು ಆನಂದವಾಗಿ ಕಳೆಯಲು ವಿಹಾರಕ್ಕೆ ಹೋಗಿದ್ದ ಭಾರತ್‌ ಪೆಟ್ರೋಲಿಯಂ ಸಿಬ್ಬಂದಿಯ ಪೈಕಿ ಇಬ್ಬರು ಅಧಿಕಾರಿಗಳು ಗುಂಡ್ಯದ ಬಳಿ ನೇತ್ರಾವತಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಈಜಲು ಹೋಗಿ ನೀರು ಪಾಲಾದ ಈ ಇಬ್ಬರು ಅಧಿಕಾರಿಗಳನ್ನು ಮೈಸೂರು ಕಚೇರಿಯ ಮಾರಾಟ ವಿಭಾಗದ ಅಧಿಕಾರಿ ಪಿ. ಶಕ್ತಿ (32) ಹಾಗೂ ಮಂಗಳೂರು ವಿಭಾಗೀಯ ಮ್ಯಾನೇಜರ್‌ ಕೆ. ಸುಂದರೇಶನ್‌ ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಭಾರತ್‌ ಪೆಟ್ರೋಲಿಯಂನ ಒಟ್ಟು 40 ಉದ್ಯೋಗಿಗಳು ವಿಹಾರಕ್ಕೆ ತೆರಳಿದ್ದರು.

ಮೈಸೂರು ಕಚೇರಿಯ ಕೆಲವರು ಕೂಡ ಮಂಗಳೂರಿಗೆ ಆಗಮಿಸಿ, ಅಲ್ಲಿಂದ ಪ್ರವಾಸ ಕೈಗೊಂಡಿದ್ದರು. ಪ್ರವಾಸದ ಮಧ್ಯದಲ್ಲಿ ಗುಂಡ್ಯದ ಬಳಿ ಈಜಲು ನೇತ್ರಾವತಿ ನದಿಗಿಳಿದ ಈ ಇಬ್ಬರು ಅಧಿಕಾರಿಗಳು ನಿಯಂತ್ರಣ ಕಳೆದುಕೊಂಡು ನೀರಿನಲ್ಲಿ ಮುಳುಗಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

(ಮಂಗಳೂರು ಪ್ರತಿನಿಧಿಯಿಂದ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X