Get Updates
Get notified of breaking news, exclusive insights, and must-see stories!

ವೀರಪ್ಪನ್‌ ಕಾರ್ಯಾಚರಣೆಯೂ ಮಲ್ಲಿಕಾರ್ಜುನ ಖರ್ಗೆ ಸುದ್ದಿಗೋಷ್ಠಿಯೂ

ಮೈಸೂರು : ವೀರಪ್ಪನ್‌ನ ಡಿಜಿಟಲ್‌ ಡೈರಿ ಸಿಕ್ಕಿರುವ ಬಗೆಗಾಗಲೀ, ಕಾಡುಗಳ್ಳನ ಚಲನವಲನದ ಭಯದ ಕಾರಣಕ್ಕೆ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರಿಗೆ ನಿಷೇಧ ಹೇರಿರುವ ವಿಷಯದ ಕುರಿತಾಗಲೀ ಈವರೆಗೆ ನಮಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಜಿಲ್ಲಾ ಪೊಲೀಸ್‌ ಇಲಾಖೆಯ ಕಾರ್ಯ ಪರಿಶೀಲನೆ ನಡೆಸಿದ ರಾಜ್ಯ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಸುದ್ದಿಗಾರರಿಗೆ ಹೇಳಿದ ಮಾತಿವು.

ಸುದ್ದಿಗಾರರು ಹಿಡಿ ಪ್ರಶ್ನೆಗಳನ್ನು ಎಸೆದರೆ, ಮಂತ್ರಿಗಳು ಒಂದೊಂದಕ್ಕೂ ಉತ್ತರ- ವಿವರಣೆ ಕೊಟ್ಟರು...

  • ಕಾಡುಗಳ್ಳನ ಹಿಡಿಯ ಹೊರಟಿರುವ ತಮಿಳುನಾಡು ಹಾಗೂ ಕರ್ನಾಟಕದ ವಿಶೇಷ ಕಾರ್ಯ ಪಡೆಗಳ ಈವರೆಗಿನ ಕಾರ್ಯಾಚರಣೆ ತೃಪ್ತಿಕರವಾಗಿದೆ
  • ಜಂಟಿ ಕಾರ್ಯಾಚರಣೆ ಪಡೆಗೆ ಮುಕ್ತ ಅವಕಾಶ ಕೊಡಲಾಗಿದ್ದು, ಯಾವುದೇ ಇತರ ಶಕ್ತಿಗಳ ಹಸ್ತಕ್ಷೇಪ ಇದರಲ್ಲಿಲ್ಲ
  • ಎಸ್‌ಟಿಎಫ್‌ ಕಾರ್ಯಾಚರಣೆಯಲ್ಲಿ ಸಹಕಾರದ ವಿಷಯದಲ್ಲಿ ತೊಡಕಾಗಿರುವ ಬಗೆಗೆ ಈವರೆಗೆ ಯಾವುದೇ ದೂರು ಬಂದಿಲ್ಲ
  • ಬಂಡೀಪುರ ಅಭಯಾರಣ್ಯದಲ್ಲಿ ಪ್ರವೇಶ ನಿಷೇಧಿಸಿರುವ ಬಗ್ಗೆ ನನಗೇನೂ ಗೊತ್ತಿಲ್ಲ. ಕೆಲ ಮಾಧ್ಯಮಗಳು ಆರೀತಿ ವರದಿ ಮಾಡಿವೆ. ಅನಗತ್ಯ ಭಯವನ್ನು ಹುಟ್ಟು ಹಾಕುವಂತಹ ನಿರ್ಣಯಗಳಿಗೆ ಸರ್ಕಾರ ಒತ್ತು ಕೊಡುವುದಿಲ್ಲ. ಈ ವಿಷಯದ ಬಗ್ಗೆ ಅಪರ ಪೊಲೀಸ್‌ ಮಹಾ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಎಂ.ಡಿ.ಸಿಂಗ್‌ ಅವರನ್ನು ವಿಚಾರಿಸುತ್ತೇನೆ
  • ವೀರಪ್ಪನ್‌ ಭಯವೊಡ್ಡಿ ಬಂಡೀಪುರ ಅರಣ್ಯಕ್ಕೆ ಪ್ರವಾಸ ಹೋಗಬೇಡಿ ಅನ್ನುವುದು ನನ್ನ ಮಟ್ಟಿಗೆ ಸರಿಯಲ್ಲ
  • ಪೊಲೀಸ್‌ ಇಲಾಖೆಯ ಕಾರ್ಯದಲ್ಲಿ ರಾಜಕೀಯ ಹಸ್ತಕ್ಷೇಪ ಇದೆ ಎಂಬ ಆರೋಪವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಆ ವಿಚಾರವಾಗಿ ತಕ್ಕ ಪರಿಶೀಲನೆ ನಡೆದಿದೆ
  • ಜನಪ್ರತಿನಿಧಿಗಳ ಮಾತನ್ನು ನಾವು ಅಲ್ಲಗಳೆಯುವಂತಿಲ್ಲ. ಜನಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಪೊಲೀಸ್‌ ಇಲಾಖೆಯನ್ನು ಸುಧಾರಿಸುತ್ತೇವೆ
  • ವೀರಪ್ಪನ್‌ನ ಡಿಜಿಟಲ್‌ ಡೈರಿ ಸಿಕ್ಕಿರುವ ವಿಷಯ ನನಗೆ ಗೊತ್ತಿಲ್ಲ. ಒಂದು ವೇಳೆ ಸಿಕ್ಕಿದ್ದರೆ, ತಮಿಳುನಾಡು ಮುಖ್ಯಮಂತ್ರಿ ಅಥವಾ ಗೃಹಸಚಿವ ನನಗೆ ಅಥವಾ ಮುಖ್ಯಮಂತ್ರಿ ಕೃಷ್ಣಗೆ ತಿಳಿಸಬೇಕಿತ್ತು. ಆದರೆ ಈವರೆಗೆ ಅವರಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ
(ಯುಎನ್‌ಐ)
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+