ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ಗಂಗೂಲಿ- ನಗ್ಮಾ ಸ್ನೇಹಕ್ಕೂ, ಆಟಕ್ಕೂ ಬೆಸುಗೆ ಹಾಕೋದು ತರವಲ್ಲ’
ಮುಂಬಯಿ : ಮಾಧ್ಯಮದವರು ಆಟಕ್ಕೂ, ಖಾಸಗಿ ಜೀವನಕ್ಕೂ ಸಂಬಂಧ ಕಲ್ಪಿಸಿ ಬರೆಯುವುದು ತರವಲ್ಲ ಎಂದು ಗಂಗೂಲಿ- ನಗ್ಮಾ ಪ್ರಕರಣದ ಹಿನ್ನೆಲೆಯಲ್ಲಿ ಉಚ್ಚಾಟಿತ ಕ್ರಿಕೆಟಿಗ ಅಜಯ್ ಜಡೇಜ ಹೇಳಿದ್ದಾರೆ.
ದೆಹಲಿಯಿಂದ ಜಾಮ್ ನಗರಕ್ಕೆ ತೆರಳುವ ಮಾರ್ಗದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತಿಗೆ ಸಿಕ್ಕ ಜಡೇಜ ಮುಜುಗರ ಪಟ್ಟಿಕೊಳ್ಳದೆ ತಮ್ಮ ಅಭಿಪ್ರಾಯಗಳನ್ನು ಬಿಚ್ಚಿಟ್ಟರು...
- ಸಿನಿತಾರೆ ನಗ್ಮಾ ಜೊತೆ ಗಂಗೂಲಿ ಸ್ನೇಹಕ್ಕೂ, ಅವರ ಕ್ರಿಕೆಟ್ ನಾಯಕತ್ವಕ್ಕೂ ಯಾವ ಸಂಬಂಧವೂ ಇಲ್ಲ. ಹಾಗೆ ಸಂಬಂಧ ಕಲ್ಪಿಸಿ ಬರೆಯುವುದರಿಂದ ಆಟಗಾರನ ಮಾನಸಿಕ ಸಮತೋಲನದಲ್ಲಿ ಏರುಪೇರಾಗಿ, ಆಟದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ
- ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ತಂಡಗಳ ವಿರುದ್ಧ ಆಡಿದ ಫಾರ್ಮ್ನಲ್ಲಿದ್ದ ಆಟಗಾರರನ್ನು ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಆಯದಿರಲು ಕಾರಣವೇನು? ಐದು ಬದಲಾವಣೆಯ ಅಗತ್ಯವಾದರೂ ಏನಿತ್ತು?
- ಕರ್ನಾಟಕದ ಸುನಿಲ್ ಜೋಷಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಾಮರ್ಥ್ಯ ತೋರಿದ್ದರೂ, ಅವರ ಬದಲಿಗೆ ಸಾಂಘ್ವಿಯನ್ನು ಆರಿಸಿದ್ದು ಸರಿಯಲ್ಲ. ಸಾಂಘ್ವಿ ಯಾವ ಮ್ಯಾಜಿಕ್ಕನ್ನೂ ಮಾಡಲೇ ಇಲ್ಲ !
- ನಾನು ರಾಷ್ಟ್ರೀಯ ತಂಡಕ್ಕೆ ಮರಳುವುದು ಕನಸಿನ ಮಾತು. ನನ್ನ ಮೇಲಿನ ನಿಷೇಧ ಸಾಕಷ್ಟು ಬೇಸರ ತಂದಿದೆ.
(ಇನ್ಫೋ ವಾರ್ತೆ)
Story first published: Monday, March 5, 2001, 5:30 [IST]