ಬಂಟ್ವಾಳದಲ್ಲಿ ಕಣಿವೆಗೆ ಬಸ್ಸು ಬಿದ್ದು ಆರು ಸಾವು
ಬಂಟ್ವಾಳ : ಇಲ್ಲಿನ ಬೆಂಜನಪದವಿಗೆ ಸಮೀಪದ ಅಮ್ಮುಂಜೆ ಕಲೈ ಎಂಬಲ್ಲಿ ಭಾನುವಾರದಂದು ಖಾಸಗಿ ಬಸ್ಸೊಂದು 50 ಅಡಿ ಆಳದ ಕಣಿವೆಗೆ ಉರುಳಿ ಬಿದ್ದುದರಿಂದ ಆರು ಮಂದಿ ಮೃಪಟ್ಟಿದ್ದು 30 ಮಂದಿಗೆ ಗಾಯವಾಗಿದೆ.
ಈ ದುರ್ಘಟನೆಯಲ್ಲಿ ಮೃತರಾದವರನ್ನು ಶರೀಫಾ (35), ಕಲಾಯಿಯ ಇಬ್ರಾಹಿಂ (56), ದೆಮ್ಮಲೆಯ ಆದಂ ಬ್ಯಾರಿ(35), ಗರಡಿ ಮನೆ ಶೌಕತ್ ಅಲಿ( 20), ಮಲ್ಲೂರು ಇಬ್ರಾಹಿಂ(70) ಮತ್ತು ಮಲ್ಲೂರಿನ ಅಬೂಶಿಯಾ (35) ಎಂದು ಗುರುತಿಸಲಾಗಿದೆ.
ಗಾಯಗೊಂಡವರಲ್ಲಿ ಎಂಟು ಮಂದಿಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿದೆ. ಬಸ್ಸಿನ ಚಾಲಕ ಬೆಂಜನಪದವಿನ ಸೋಮಪ್ಪ (45) ಮತ್ತು ನಿರ್ವಾಹಕ ಹರೀಶ್ (25) ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನೀರು ಮಾರ್ಗ ಮೂಲಕ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಬಸ್ಸು ತಾಳಿಪಾಡಿ ಸಮೀಪದ ಅಪಾಯಕರ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಉರುಳಿ ಬಿದ್ದಿದೆ. ಸಂಜೆ ಹೊತ್ತು ಶಾಲಾ ಮಕ್ಕಳನ್ನು ಕೊಂಡೊಯ್ಯುವ ಖಾಯಂ ಬಸ್ಸು ಇದಾಗಿದ್ದು, ಭಾನುವರದಂದು ಅಪಫಾತ ಘಟಿಸಿರುವುದರಿಂದ ಸಂಭಾವ್ಯ ಭಾರೀ ಅನಾಹುತ ತಪ್ಪಿದೆ.
(ಇನ್ಫೋ ವಾರ್ತೆ)