Get Updates
Get notified of breaking news, exclusive insights, and must-see stories!

ಛಲದಂಕ ಮಲ್ಲರಿಗೆ ದಕ್ಕುವ ಬದುಕು

ಬೆಂಗಳೂರಿನ ಬುಲ್‌ ಟೆಂಪಲ್‌ ರಸ್ತೆಯಲ್ಲಿ ನಿರ್ಮಲಾ ಎಂಬುದೊಂದು ಆರ್ಟ್‌ ಗ್ಯಾಲರಿ. ಅಲ್ಲೀಗ ನಡೆಯುತ್ತಿದೆ ಕುಶಾಲ್‌ ಕುಮಾರ್‌ ಎನ್ನುವ ಬಾಲಕನ ಚಿತ್ರಗಳ ಪ್ರದರ್ಶನ. ಕುಶಾಲ್‌ ಅಪ್ಪ ಪ.ಸ. ಕುಮಾರ್‌ ಪ್ರಸಿದ್ಧ ಕಲೆಗಾರ. ಮಗನಿಗೊ ಮೂತ್ರಪಿಂಡದ ತೊಂದರೆ. ಆಪರೇಷನ್‌ ಆಗಿದೆ. ದೈಹಿಕವಾಗಿ ಅಶಕ್ತತೆ. ಈ ಹಿನ್ನೆಲೆಯಲ್ಲಿ ಕುಶಾಲ್‌ ಅಂಟಿಸಿಕೊಂಡಿದ್ದು ಚಿತ್ರಕಲೆಯನ್ನು . ಧಾರೆಯೆರೆಯಲು ಅಪ್ಪ ಜೊತೆಯಲ್ಲೇ ಇದ್ದರು.

ಪ್ರದರ್ಶನವನ್ನು ನೋಡಿ ಬಂದವರ ಎದೆಯನ್ನು ಚಿತ್ರಗಳಿಗಿಂತಾ ಗಾಢವಾಗಿ ತಟ್ಟುವುದು- ಕಲ್ಪನೆಯ ಹಿಂದಿನ ಕಲಾವಿದ. ಅದ್ಯಾವ ಶಕ್ತಿ ಕುಶಾಲನಿಗೆ ಅದ್ಭುತ ಚೇತನವನ್ನು ತುಂಬಿದೆಯಾ ಅನ್ನುವ ಅಚ್ಚರಿ ಹಾಗೂ ಇಂಥಾ ಚೆಂದದ ಚಿತ್ರಗಳ ಹುಡುಗನ ಬಾಳಿನ ಗೆರೆಗಳು ಅಷ್ಟೇನೂ ನೆಟ್ಟಗಿಲ್ಲ ಅನ್ನುವ ವಿಷಾದ.

ಕುಶಾಲ ಮುಂದೆ ಏನೆಲ್ಲಾ ಹಂತಗಳನ್ನು ಮುಟ್ಟಬಹುದು. ಅವನ ಬದುಕುವ ಛಲ ಬಹಳ ಇಷ್ಟವಾಗುತ್ತದೆ. ಕುಶಾಲನ ಸೃಜನಶೀಲ ಬದುಕು ಬಹಳಷ್ಟು ಜನರಿಗೆ ಕಲಿಕೆಯ ದೀಪವಾಗಬೇಕು. ವೈಯಕ್ತಿಕ ದುರಂತಗಳನ್ನು ಮೆಟ್ಟಿ ನಿಲ್ಲುವ ಛಲವನ್ನು ರೂಢಿಸಿಕೊಳ್ಳುವವರಿಗಷ್ಟೇ ಏನನ್ನಾದರೂ ದಾಖಲಿಸಲು ಸಾಧ್ಯ. ಅಂಥಾ ಪ್ರಯತ್ನ ಕುಶಾಲನದು. ಅವನ ಪಥ ಇತರ ಪುಟ್ಟ ಪುಟ್ಟಿಯರಿಗೂ ಬೆಳಕ ತೋರಿಸಲಿ. ಸಾಧನೆಯ ಹಾದಿಯಲ್ಲಿ ಖಾಸಗಿ ಬದುಕಿನ ನೆರಳು ಕತ್ತಲಾಗಿ ಕಾಡದಿರಲಿ.

ಸೋಮವಾರದ ಬಿಸಿಲು- ಬಿಸಿ : ದಿನದ ಕನಿಷ್ಠ ತಾಪಮಾನ 13.7 ಡಿಗ್ರಿ ಸೆಲ್ಷಿಯಸ್‌ ಗುಲ್ಬರ್ಗಾದಲ್ಲಿ ದಾಖಲಾಗಿತ್ತು . ರಾಜ್ಯದಲ್ಲಿ ಒಣಹವೆಯದ್ದೇ ಮೇಲುಗೈ. ಕರಾವಳಿ ಹಾಗೂ ದಕ್ಷಿಣ ಕರ್ನಾಟಕದ ಒಳಭಾಗಗಳ ಕೆಲವು ಪ್ರದೇಶಗಳಲ್ಲಿ ದಿನದ ಕನಿಷ್ಠ ಉಷ್ಣಾಂಶದಲ್ಲಿ ಕುಸಿತ ಉಂಟಾಗಿತ್ತು .

ಮುಂದಿನ ಎರಡು ದಿನಗಳಲ್ಲೂ ಉಷ್ಣಾಂಶದಲ್ಲಿ ಕಣ್ಕುಕ್ಕುವ ಬದಲಾವಣೆಗಳೇನೂ ಇಲ್ಲ . ಬೆಂಗಳೂರಿನಲ್ಲೂ ಶುಭ್ರಾಕಾಶವಿದ್ದು , ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಷಿಯಸ್‌ ಆಸುಪಾಸಿನಲ್ಲಿರುತ್ತದೆ ಎಂದು ಹವಾಮಾನ ಇಲಾಖೆಯ ವರದಿಗಳು ತಿಳಿಸಿವೆ. ಸೂರ್ಯನಿಗೆ ಕೂಡ ಸುಡು ಬಿಸಿಲನ್ನು ನಿತ್ಯವೂ ಚೆಲ್ಲುವ ಛಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+