Get Updates
Get notified of breaking news, exclusive insights, and must-see stories!

ಕೃಷಿ ಹೆಜ್ಜೆ : ಶ್ವೇತಪತ್ರ ಹೊರಡಿಸಲುಕೇಂದ್ರಕ್ಕೆ ರಮಾದೇವಿ ಆಗ್ರಹ

ಬೆಂಗಳೂರು : ಕೃಷಿ ಸಂಬಂಧಿ ಚಟುವಟಿಕೆ ಕುರಿತು ತಕ್ಷಣವೇ ಶ್ವೇತ ಪತ್ರ ಹೊರಡಿಸಬೇಕು ಮತ್ತು ರಾಷ್ಟ್ರೀಯ ಅಭಿವೃದಿ ್ಧ ಮಂಡಳಿಯ ಸಭೆಯನ್ನು ಕೇಂದ್ರ ಸರ್ಕಾರ ಕರೆಯಬೇಕು ಎಂದು ರಾಜ್ಯ ಸರ್ಕಾರ ಸೋಮವಾರ ಒತ್ತಾಯಿಸಿದೆ.

ವಿಧಾನಮಂಡಲದ ಉಭಯ ಸದನಗಳ ಜಂಟಿ ಅಧಿವೇಶವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರಾದ ವಿ.ಎಸ್‌.ರಮಾದೇವಿ, ಕೇಂದ್ರ ಸರ್ಕಾರದ ಆಮದು ನೀತಿಯಿಂದ ವಿದೇಶಗಳ ಅಗ್ಗ ಬೆಲೆಯ ಕೃಷ್ಯುತ್ಪನ್ನಗಳು ದೇಶದ ಮಾರುಕಟ್ಟೆ ತುಂಬುತ್ತಿವೆ. ಬರುವ ಏಪ್ರಿಲ್‌ನಿಂದ ಆಮದಾಗುವ ಸರಕಿನ ಪ್ರಮಾಣದ ಮೇಲಿನ ನಿಯಂತ್ರಣವನ್ನು ಇನ್ನಷ್ಟು ಸಡಿಲಿಸುವ ಇರಾದೆಯನ್ನೂ ಕೇಂದ್ರ ಸರ್ಕಾರ ಹೊಂದಿದ್ದು, ಅಂಥ ಪೋಟಿಯನ್ನು ಎದುರಿಸಲು ನಮ್ಮ ಬಡ ರೈತರು ಪರದಾಡಬೇಕಾದೀತು ಎಂದರು.

ತಕ್ಷಣವೇ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಸಭೆಯನ್ನು ಕರೆದು, ಕೇಂದ್ರ ಸರ್ಕಾರ ಒಂದು ಸಮಗ್ರ ಕೃಷಿ ನೀತಿ ರೂಪಿಸಬೇಕು. ದೇಶದ ವಿವಿಧರಾಜ್ಯಗಳ ಮುಖ್ಯಮಂತ್ರಿಗಳ ಸಲಹೆಗಳ ಮೊತ್ತವಾಗಿ ಈ ನೀತಿ ಹೊಮ್ಮಬೇಕು. ಆಗ ಮಾತ್ರ ಸ್ಥಳೀಯ ರೈತರ ಹಿತಾಸಕ್ತಿಗೆ ಪೂರಕವಾದ ನೀತಿ ರೂಪಿಸಲು ಸಾಧ್ಯ. ಅಂತರರಾಷ್ಟ್ರೀಯ ಉದ್ದಿಮೆಗಳನ್ನು ಸಮವರ್ತಿ ಪಟ್ಟಿಯಲ್ಲಿ ಸೇರಿಸಬೇಕು ಅಥವಾ ವಿಶ್ವ ವಾಣಿಜ್ಯ ಒಪ್ಪಂದಗಳ ಕುರಿತಂತೆ ನೀತಿಗಳನ್ನು ರೂಪಿಸುವಾಗ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಬೇಕು ಎಂದು ರಾಜ್ಯಪಾಲರು ಕೇಂದ್ರವನ್ನು ಆಗ್ರಹಿಸಿದರು.

ಇನ್ನು ಸರಿ ಸುಮಾರು 4 ವಾರಗಳಲ್ಲಿ ಕೃಷ್ಣ ಸರ್ಕಾರ ಆಯವ್ಯಯ ಪತ್ರ ಮಂಡಿಸಲಿದ್ದು, ಅದರಲ್ಲಿ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೆಲವು ಕಾರ್ಯಕ್ರಮಗಳಿಗೂ ಒತ್ತು ಕೊಡಲಾಗುವುದು. ವಿದೇಶೀ ಕೃಷ್ಯುತ್ಪನ್ನಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿ, ನಮ್ಮ ರೈತರೂ ಉಸಿರಾಡುವಂತೆ ಮಾಡಬೇಕೆಂದು ಕೇಂದ್ರ ಸರ್ಕಾರವನ್ನು ಈಗಾಗಲೇ ಮನವಿ ಮಾಡಲಾಗಿದೆ ಎಂದರು.

ಮೂವತ್ತೊಂದು ಪುಟಗಳ ರಾಜ್ಯಪಾಲರ ಭಾಷಣದ ಮುಖ್ಯಾಂಶಗಳು

ಕಳೆದೊಂದು ವರ್ಷದಲ್ಲಿ ಕೃಷ್ಣ ನೇತೃತ್ವದ ಸರ್ಕಾರ ಸಾಕಷ್ಟು ಸಾಧನೆಗಳನ್ನು ಮಾಡಿದೆ. ಇನ್ನಷ್ಟು ಸಾಧನೆಗಾಗಿ ಉತ್ತಮ ಯೋಜನೆಗಳನ್ನು ರೂಪಿಸಿದೆ

  • ವಿದ್ಯಾಭ್ಯಾಸ ಮೊಟಕಾಗದಿರಲೆಂದು ಮಾಧ್ಯಮಿಕ ಶಾಲೆಯ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ
  • ಅತಿ ಕಡಿಮೆ ಸಾಕ್ಷರತಾ ಜಾಗೆಗಳಲ್ಲಿ ಪರಿಶಿಷ್ಟ ಪಂಗಡದ ನಿರಕ್ಷರಕುಕ್ಷಿ ಜನರಿಗೆ ವಿದ್ಯಾಭ್ಯಾಸ ಮಾಡಿಸಲು ಶೈಕ್ಷಣಿಕ ಸಂಕೀರ್ಣಗಳ ನಿರ್ಮಾಣ
  • ಆದಿವಾಸಿಗಳು ಹಾಗೂ ಮೂಲವಾಸಿಗಳ ಆರ್ಥಿಕ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳು
  • ವಿಶ್ವಬ್ಯಾಂಕ್‌ನ 12 ಸಾವಿರ ಕೋಟಿ ರುಪಾಯಿ ನೆರವಿನಿಂದ ಆರ್ಥಿಕ, ವಿದ್ಯುತ್‌ ಹಾಗೂ ರಾಜ್ಯಾಡಳಿತ ಕ್ಷೇತ್ರಗಳ ಅಭಿವೃದ್ಧಿಗೆ ವಿವಿಧ ಯೋಜನೆಗಳು
  • 2001 ರಿಂದ 2004-05ರ ಅವಧಿಗೆ ಮಧ್ಯಂತರ ಹಣಕಾಸು ಯೋಜನೆಯನ್ನು ವಿಧಾನಮಂಡಲದಲ್ಲಿ ಮಂಡಿಸಲಾಗುವುದು
  • ಗಡಿ ವಿವಾದ ಕುರಿತಂತೆ ಮಹಾರಾಷ್ಟ್ರ ಸರ್ಕಾರದೊಂದಿಗೆ ಚರ್ಚಿಸಿ, ಮಹಾಜನ್‌ ವರದಿಯ ಶಿಫಾರಸುಗಳನ್ನು ಜಾರಿಗೆ ತಂದು, ವಿವಾದಕ್ಕೆ ಪೂರ್ಣವಿರಾಮ ಹಾಕಬೇಕು.
  • ತಮಿಳುನಾಡಿನೊಂದಿಗೆ ಕಾವೇರಿ ನದಿ ನೀರು ಹಂಚಿಕೆ ವಿವಾದ ಕುರಿತಂತೆ ನ್ಯಾಯಾಧೀಕರಣದ ವಿಚಾರಣೆ ಪ್ರಗತಿಯ ಹಂತದಲ್ಲಿದ್ದು, ಕಾವೇರಿ ಜಲಾನಯನದ ರೈತರ ಹಿತಾಸಕ್ತಿ ರಕ್ಷಿಸಲು ಸರ್ಕಾರ ಕಂಕಣ ಬದ್ಧವಾಗಿದೆ.
  • ರಾಜ್ಯಕ್ಕೆ ಹರಿದುಬರುತ್ತಿರುವ ಕೃಷ್ಣಾ ನದಿ ನೀರಿನ ಸಂಪೂರ್ಣ ಬಳಕೆಗಾಗಿ ಸರ್ಕಾರ ಶತಾಯಗತಾಯ ಯತ್ನಿಸುತ್ತಿದ್ದು, ಈಗಾಗಲೇ ಕೇಂದ್ರ ಸರ್ಕಾರ ಮಂಜೂರು ಮಾಡಿರುವ ಎರಡು ಹಂತದ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಮಗಾರಿಗೆ ಕೇಂದ್ರದ ಇನ್ನಷ್ಟು ನೆರವನ್ನು ಯಾಚಿಸಲಾಗಿದೆ.
  • ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಉತ್ತಮವಾಗಿದೆ. ರಾಜ್‌ಕುಮಾರ್‌ ಅಪಹರಣದ ವೇಳೆ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಕರ್ನಾಟಕ ಮತ್ತು ತಮಿಳುನಾಡು ಪೊಲೀಸರಿಗೆ ರಾಜ್ಯಪಾಲರು ಧನ್ಯವಾದ ಅರ್ಪಿಸಿದರು.
(ಯುಎನ್‌ಐ)
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+