ಫೆ. 27ರಂದು ಬೆಂಗಳೂರಲ್ಲಿ ಸಿಐಐ ಗುಣಾಧಿಕ್ಯ ಕೇಂದ್ರದ ಉದ್ಘಾಟನೆ
ಬೆಂಗಳೂರು : ಹೈಟೆಕ್ ನಗರಿಗೆ ಮತ್ತೊಂದು ಗರಿ. ಕೈಗಾರಿಕಾ ಗುಣಮಟ್ಟ ವರ್ಧನೆ ಸೇವೆಗೆ ಮತ್ತೊಂದು ಸುಸಜ್ಜಿತ ಬೃಹತ್ ಕಟ್ಟಡ ಸಿದ್ಧವಾಗಿದೆ. ಅದೇ ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ದ ಗುಣಾಧಿಕ್ಯ ಕೇಂದ್ರ. ಇದೇ ಫೆಬ್ರವರಿ 27ರಂದು ಈ ಕಟ್ಟಡ ಉದ್ಘಾಟನೆಯಾಗಲಿದ್ದು, ಗುಣಮಟ್ಟ ಸಮಸ್ಯೆ ನಿವಾರಣೆಗಳ ಮೆಕ್ಕಾ ಎನಿಸಲಿದೆ.
ನಗರದ ಹೊರವಲಯದ ಪಶ್ಚಿಮ ಭಾಗದ ಎತ್ತರ ಪ್ರದೇಶದಲ್ಲಿ ನಾಲ್ಕು ಎಕರೆ ವಿಶಾಲ ಜಾಗೆಯ ಮಧ್ಯೆ ಚೆಂದದ ವಿನ್ಯಾಸದ ಕಟ್ಟಡ ಎದ್ದು ನಿಂತಿದೆ. ವಿದ್ಯುತ್ ವಲಯದ ಬಹುರಾಷ್ಟ್ರೀಯ ಸಂಸ್ಥೆ ಎಬಿಬಿ ಹಾಗೂ ಸಿಐಐ ನಡುವಣ ಒಪ್ಪಂದದ ಫಲವೇ ಈ ಕೇಂದ್ರ. 1997ರಲ್ಲಿ, ಅಂದಿನ ವಿತ್ತ ಸಚಿವರು ಶಂಕುಸ್ಥಾಪನೆ ಮಾಡಿದ್ದ ಕಟ್ಟಡ ಇಂದು ಸುಸಜ್ಜಿತ ಕೇಂದ್ರ. ಕೈಗಾರಿಕಾ ಗುಣಮಟ್ಟದ ಬಗೆಗೆ ತುಡಿತವಿರುವವರಿಗೆ ಇದೊಂದು ಪ್ರಮುಖ ಪ್ರವಾಸೀ ತಾಣವಾಗಲಿದೆ ಎಂಬುದು ಕೈಗಾರಿಕಾ ಪಂಡಿತರ ಲೆಕ್ಕಾಚಾರ.
ಫೆಬ್ರವರಿ 27ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಇನ್ಫೋಸಿಸ್ ಅಧ್ಯಕ್ಷ ಎನ್.ಆರ್. ನಾರಾಯಣ ಮೂರ್ತಿ ಹಾಗೂ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ನಿರ್ದೇಶಕ ಆರ್.ಎ.ಮಶೇಲ್ಕರ್ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.
ಬ್ಯಾಂಕಿಂಗ್, ಉತ್ಪಾದನೆ, ಸಾರ್ವಜನಿಕ ಸೇವೆ, ಸರ್ಕಾರಿ ಸಂಸ್ಥೆಗಳು., ಆರೋಗ್ಯ ರಕ್ಷಣೆ, ಹಡಗು ಉದ್ಯಮ, ವಿಮೆ ಮೊದಲಾದ ಕ್ಷೇತ್ರಗಳ ಸೇವಾ ನಿರ್ವಹಣಾ ಗುಣಮಟ್ಟದ ಬಗ್ಗೆ ಸಮಗ್ರ ತರಪೇತಿ ಕಾರ್ಯಕ್ರಮಗಳನ್ನು ಕೇಂದ್ರ ಆಯೋಜಿಸಲಿದೆ.
ಕೇಂದ್ರದ ಉದ್ಘಾಟನೆಯ ದಿನದಂದೇ ‘ಕೆಲಸದ ಖುಷಿ’ (ಜಾಯ್ ಆಫ್ ವರ್ಕ್) ಎಂಬ ವಿಷಯ ಕುರಿತ ಮೂರು ದಿನಗಳ ಕಮ್ಮಟವನ್ನು ಜಪಾನಿನ ಪ್ರೊ.ಕೊಸಾಕು ಯೋಶಿದಾ ಉದ್ಘಾಟಿಸಿ, ನಿರ್ವಹಿಸಲಿದ್ದಾರೆ.
(ಯುಎನ್ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications