Get Updates
Get notified of breaking news, exclusive insights, and must-see stories!

ಉಮಾಭಾರತಿ ಹೇಳಿಕೆಯೇ ಅಂತಿಮವಲ್ಲ : ಜಹೀದ್‌ ನೂರಾನಿ

ದುಬೈ : ಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹಿಸಲು ಭಾರತ ಷಾರ್ಜಾದಲ್ಲಷ್ಟೇ ಅಲ್ಲ, ಯಾವುದೇ ದೇಶದಲ್ಲೂ ಪಾಕ್‌ ವಿರುದ್ಧ ಕ್ರಿಕೆಟ್‌ ಆಡುವ ಅಗತ್ಯವಿಲ್ಲ ಎಂದು ಕೇಂದ್ರ ಕ್ರೀಡಾ ಸಚಿವೆ ಉಮಾಭಾರತಿ ಹೇಳಿದ್ದರೂ, ಷಾರ್ಜಾದಲ್ಲಿ ಈ ಟೂರ್ನಿಯ ಸಿದ್ಧತೆಗಳು ಭರದಿಂದ ಸಾಗಿವೆ.

ಗುಜರಾತ್‌ನಲ್ಲಿ ಭೂಕಂಪದಿಂದ ಹೊಡೆತ ತಿಂದವರ ಪರಿಹಾರಕ್ಕೆ ನಿಧಿ ಎತ್ತಲು ಕ್ರಿಕೆಟರ್ಸ್‌ ಬೆನಿಫಿಟ್‌ ಫಂಡ್‌ ಸೀರೀಸ್‌ (ಸಿಬಿಎಫ್‌ಎಸ್‌), ಬರುವ ಫೆಬ್ರವರಿ 8ರಿಂದ 11ರವರೆಗೆ ಭಾರತ- ಪಾಕ್‌- ಬಾಂಗ್ಲಾ ನಡುವೆ ಷಾರ್ಜಾದಲ್ಲಿ ತ್ರಿಕೋನ ಸರಣಿಯನ್ನು ಆಯೋಜಿಸಿದ್ದು, ಅದರ ಸಿದ್ಧತೆಗಳೂ ಭರದಿಂದ ನಡೆದಿವೆ. ಏಷ್ಯನ್‌ ಕ್ರಿಕೆಟ್‌ ಫೌಂಡೇಷನ್‌ (ಎಸಿಎಫ್‌) ಮತ್ತು ಸಿಬಿಎಫ್‌ಎಸ್‌ ಜಂಟಿಯಾಗಿ ಈ ಟೂರ್ನಿಯನ್ನು ಒಂದು ಒಳ್ಳೆ ಕೆಲಸಕ್ಕಾಗಿ ಆಯೋಜಿಸಿದೆ. ಭಾರತ ಇದರಲ್ಲಿ ಆಡುವುದೋ ಇಲ್ಲವೋ ಎಂಬುದರ ಅಂತಿಮ ಹೇಳಿಕೆ ಕೊಡಬೇಕಾದವರು ಏಷ್ಯನ್‌ ಕ್ರಿಕೆಟ್‌ ಫೌಂಡೇಷನ್‌ ಅಧ್ಯಕ್ಷ ಜಗನ್ಮೋಹನ ದಾಲ್ಮಿಯಾ. ಅವರು ಹೇಳೋವರೆಗೆ ನಾವು ಈ ವಿಷಯದಲ್ಲಿ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎನ್ನುತ್ತಾರೆ ಸಿಬಿಎಫ್‌ಸಿಯ ಮುಖ್ಯ ವ್ಯವಸ್ಥಾಪಕ ಜಹಿದ್‌ ನೂರಾನಿ.

ನಮಗೆ ತಿಳಿದಿರುವ ಮಟ್ಟಿಗೆ ಎಸಿಎಫ್‌ ನಿಗದಿ ಪಡಿಸಿರುವಂತೆ ಮೂರೂ ತಂಡಗಳು ಟೂರ್ನಿಯಲ್ಲಿ ಭಾಗವಹಿಸುವುದರ ಬಗ್ಗೆ ಯಾವುದೇ ಅನುಮಾನಗಳಿಲ್ಲ. ಈ ಕಾರಣದಿಂದಲೇ ನಾವು ಟೂರ್ನಿಯ ಸಿದ್ಧತೆಗಳನ್ನು ನಡೆಸಿರುವುದು ಎಂದು ನೂರಾನಿ ಹೇಳಿದ್ದಾರೆ.

(ಯುಎನ್‌ಐ)

ವಾರ್ತಾಸಂಚಯ
ಮುಖಪುಟ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+