ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಕ್ಕಿ ಆಲೂರು : ಮತ್ತೆ ಹತ್ತುರಿದ ದಳ್ಳುರಿ, ಶಾಲೆಗೆ ರಜೆ
ಹಾನಗಲ್ : ಅಕ್ಕಿ ಆಲೂರು ಗ್ರಾಮದಲ್ಲಿ ಸ್ಮಶಾನ ಭೂಮಿ ಕುರಿತಂತೆ ಎರಡು ಕೋಮುಗಳ ನಡುವೆ ಹತ್ತುರಿದ ದಳ್ಳುರಿ ಇನ್ನೇನು ತಣ್ಣಗಾಯಿತು ಅನ್ನು ವಷ್ಟರಲ್ಲಿ ಶುಕ್ರವಾರ ಪರಿಸ್ಥಿತಿ ಮತ್ತೆ ಉದ್ವಿಗ್ನಗೊಂಡಿತು.
ಎರಡು ಮನೆಗಳು, ಒಂದು ಕಮ್ಮಾರ ಕುಲುಮೆ, 5 ಡಬ್ಬಿ ಅಂಗಡಿಗಳು ಹಾಗೂ ಒಂದು ಹುಲ್ಲಿನ ಬಣವೆಗೆ ಶುಕ್ರವಾರ ಬೆಳಗ್ಗೆ 9 ಗಂಟೆಯ ಸುಮಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ಗ್ರಾಮದ ಜನ ಭಯಭೀತರಾದರು. ಅಂಗಡಿ ಮುಂಗಟ್ಟುಗಳು ಮುಚ್ಚಿದವು. ಜನ ಮನೆ ಬಿಟ್ಟು ಹೊರಗೆ ಬರಲೇ ಇಲ್ಲ. 144ನೇ ವಿಧಿಯನ್ವಯ ಭಾನುವಾರದವರೆಗೆ ನಿಷೇಧಾಜ್ಞೆ ಜಾರಿಯಲ್ಲಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಬೆಂಕಿ ಇಡುವ ಕಾರ್ಯದಲ್ಲಿ ನಿರತರಾಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹಿರಿಯ ಪೊಲೀಸರ ನೇತೃತ್ವದಲ್ಲಿ ಪೊಲೀಸರು ಊರ ತುಂಬಾ ಗಸ್ತು ತಿರುಗುತ್ತಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಊರು
ಕೇರಿ
Comments
Story first published: Sunday, December 24, 2000, 5:30 [IST]