ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವರನ್ನೂ ಕಾಡಿದ ಜೇನು ನೊಣಗಳು...

By Staff
|
Google Oneindia Kannada News

ಪಿರಿಯಾಪಟ್ಟಣ : ಜೇನು ತಿನ್ನಲು ಅತಿ ಮಧುರ. ಜೇನು ನೊಣ ಕಚ್ಚಿದರೆ..... ಹಿಂಡು ಜೇನು ಅಟ್ಟಸಿಕೊಂಡು ಬಂದರಂತೂ ಮುಗಿದೇ ಹೋಯಿತು. ಜೇನು ಗೂಡಿಗೆ ಕಲ್ಲೆಸೆದು ಬದುಕುವವರುಂಟೇ...

ಬುಧವಾರ ತಾಲೂಕಿನ ಕಂಪಲಾಪುರದಲ್ಲಿ ಜೇನು ಕೆಲಕಾಲ ರಾಜ್ಯದ ಸಚಿವರುಗಳನ್ನೂ ಕಾಡಿತು. ಕಾರಿಂದ ಇಳಿದು ನಿಂತಿದ್ದ ಸಚಿವರುಗಳುಗಳನ್ನು ಕಾರಿನತ್ತಲೇ ಓಡುವಂತೆ ಮಾಡಿತು. ಕಂಪಲಾಪುರದ ಹೆಲಿಪ್ಯಾಡ್‌ನಲ್ಲಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರನ್ನು ಸ್ವಾಗತಿಸಲು ಕಾದಿದ್ದ ಸಚಿವರುಗಳಾದ ಎಚ್‌. ವಿಶ್ವನಾಥ್‌ ಹಾಗೂ ಟಿ.ಬಿ. ಜಯಚಂದ್ರ ಅವರುಗಳ ಮೇಲೆ ಜೇನುಗಳು ದಾಳಿ ಮಾಡಿದವು.

ದಾರಿಕಾಣದೆ ಸಚಿವರುಗಳು ಕಾರಿನ ಕಡೆ ಕಂಬಿ ಕಿತ್ತರು. ಕಾರನ್ನು ಹೊಕ್ಕು ಬಾಗಿಲು ಮುಚ್ಚಿ, ಕಿಟಕಿಯ ಗಾಜುಗಳನ್ನು ಮೇಲೆಳೆದರು. ಸಚಿವರಿಗೇನೋ ಕಾರಿತ್ತು, ಸಚಿವರ ಬೆಂಬಲಿಗರಿಗೆ... ಹಿಂಬಾಲಕರಿಗೆ? ವಿಧಿ ಇಲ್ಲದೆ ಕಾರ್ಯಕರ್ತರು, ಹಿಂಬಾಲಕರು, ಬೆಂಬಲಿಗರು ನೆಲಕ್ಕೆ ಮುಖವಿಟ್ಟು ಬೋರಲಾಗಿ ಮಲಗಿದರು. ಅಷ್ಟು ಹೊತ್ತಿಗಾಗಲೇ ಕೆಲವರು ಜೇನು ಕಡಿತದ ರುಚಿಯನ್ನು ಸವಿದಾಗಿತ್ತು.

ವಾರ್ತಾ ಸಂಚಯ
ಮುಖಪುಟ / ಊರು ಕೇರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X