ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಂಧಿ ಕನಸ ನನಸಾಗಿಸೋಯತ್ನದ ಅನ್ನಾನ್‌ಗೆ ಮಿಲೆನಿಯಂ ಪ್ರಶಸ್ತಿ

By Staff
|
Google Oneindia Kannada News

ನವದೆಹಲಿ : ಅಹಿಂಸೆ ಮೂಲಕ ವಿಶ್ವ ಶಾಂತಿಗೆ ಯತ್ನಿಸುತ್ತಿರುವ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್‌ ಅವರಿಗೆ ಸಹಸ್ರಮಾನದ ಶಾಂತಿ ಪ್ರಶಸ್ತಿ ನೀಡಲು ಭಗವಾನ್‌ ಮಹಾವೀರ ಜನ್ಮ ಕಲ್ಯಾಣ ಮಹೋತ್ಸವ ಸಮಿತಿ ನಿರ್ಧರಿಸಿದೆ.

ಪ್ರಶಸ್ತಿಯು ಒಂದು ಮಿಲಿಯನ್‌ ರೂಪಾಯಿ ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ. 2001ನೇ ಸಾಲಿನ ಏಪ್ರಿಲ್‌ 5ರಂದು ಭಗವಾನ್‌ ಮಹಾವೀರರ 2,600ನೇ ಜಯಂತಿಯ ಅಂಗವಾಗಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಕೋಫಿ ಅನ್ನಾನ್‌ ಅವರಿಗೆ ಬರೆದ ಪತ್ರದಲ್ಲಿ ಸಮಿತಿಯ ಅಧ್ಯಕ್ಷ ರಿಖಬ್‌ ಸಿ. ಜೈನ್‌ ಹೇಳಿದ್ದಾರೆ.

ಕೋಫಿ ಅನ್ನಾನ್‌ ಅವರಿಗೆ ಈ ಪ್ರಶಸ್ತಿ ನೀಡುತ್ತಿರುವುದರಿಂದ ಮಹಾವೀರರ ವಿಶ್ವ ಶಾಂತಿ ಸಂದೇಶ ವಿಶ್ವಾದ್ಯಂತ ಪಸರಿಸಿದಂತಾಗುತ್ತದೆ ಎಂದು ಅಧ್ಯಕ್ಷರು ಹೇಳಿದರು. ಮಹಾವೀರರ ಅನೇಕತಾ ವಾದದಿಂದ ಎಲ್ಲ ಮತ ಧರ್ಮಗಳ ಸಂದೇಶವೂ ಒಂದೇ ಎಂಬ ತತ್ವವನ್ನು ಜೈನ ಪಂಥವು ಸಾರುತ್ತದೆ. ಗಾಂಧಿ ಕೂಡ ಇದೇ ತತ್ವದ ಅನುಯಾಯಿಯಾಗಿದ್ದರು ಎಂದು ಜೈನ್‌ ಪತ್ರದಲ್ಲಿ ಹೇಳಿದ್ದಾರೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X