ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಕ್ಕಿ ಆಲೂರು ಗಲಭೆ : 30 ಮಂದಿ ಬಂಧನ
ಹುಬ್ಬಳ್ಳಿ : ಜಿಲ್ಲೆಯ ಅಕ್ಕಿ ಆಲೂರು ಗ್ರಾಮದಲ್ಲಿ ಕೋಮು ಘರ್ಷಣೆ ತಂದಿರುವ ಪ್ರಕ್ಷುಬ್ಧ ಪರಿಸ್ಥಿತಿ ಗುರುವಾರವೂ ಮುಂದುವರೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 30 ಜನರನ್ನು ಬಂಧಿಸಿದ್ದಾರೆ.
ಗಲಭೆಯಲ್ಲಿ ಮೃತನಾದ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಕೊಡುವಂತೆ ಕೆಲ ದಲಿತ ಚಳವಳಿಕಾರರು ಧರಣಿ ನಡೆಸಿದ ರು. ಸ್ಮಶಾನ ಭೂಮಿ ಕುರಿತಂತೆ ಎರಡು ಕೋಮುಗಳ ನಡುವಿನ ಸಂಘರ್ಷಣೆ ಒಬ್ಬನನ್ನು ಬಲಿ ತೆಗೆದುಕೊಂಡಿದ್ದು, ಪೊಲೀಸರು ಸೇರಿದಂತೆ ಸುಮಾರು ಮಂದಿಗೆ ಗಾಯಗಳಾಗಿವೆ. ಗ್ರಾಮದಲ್ಲಿ ಡಿಸೆಂಬರ್ 31ರವರೆಗೆ 144ನೇ ವಿಧಿಯನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
(ಯುಎನ್ಐ)
ಮುಖಪುಟ / ಊರು ಕೇರಿ
Comments
Story first published: Sunday, December 24, 2000, 5:30 [IST]