ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯ ಭವಿಷ್ಯ

By Staff
|
Google Oneindia Kannada News

ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ರಜಾಕಾಲದ ನಿರಾಶೆಯಿಂದ ಈ ದಿನವೂ ಮನಸ್ಸನ್ನು ಹಾಳು ಮಾಡಿಕೊಳ್ಳಬೇಡಿ. ಯಾರೂ ಸಂತೋಷವನ್ನು ನಿಮಗಾಗಿ ಧಾರೆಯೆರೆವುದಿಲ್ಲ . ಹೊರಗೆ ಹೋಗಿ, ಹೊಸ ಗೆಳೆಯರನ್ನು ಕಂಡುಕೊಳ್ಳಿ.

ವೃಷಭ : ನೀವೀಗ ಚಾಲಕನ ಸ್ಥಾನದಲ್ಲಿದ್ದೀರಿ. ಎಲ್ಲರೂ ನಿಮ್ಮ ತಾಳಕ್ಕೆ ಕುಣಿಯುವುದು ಅನಿವಾರ್ಯ. ಜೀವನವೊಂದು ಚಕ್ರವಾದುದರಿಂದ ಈಗ ದುಡುಕಿದರೆ ಮುಂದೆ ಪಶ್ಚತ್ತಾಪ ಪಡುವುದು ನಿಶ್ಚಿತ.

ಮಿಥುನ : ಹೇಳುವುದು ಒಂದು ಮಾಡುವುದು ಇನ್ನೊಂದು ಅನ್ನುವ ಗುಂಪಿಗೆ ಸೇರುತ್ತಿದ್ದೀರಿ. ನೀವು ಮಾಡುತ್ತಿರುವುದು ಸರಿಯೇ ಅನ್ನುವುದನ್ನು ಮತ್ತೊಮ್ಮೆ ಯೋಚಿಸಿ.

ಕಟಕ : ಇವರು ಹೋದರು ಎಂದು ನಿಟ್ಟುಸಿರು ಬಿಡುವ ಹೊತ್ತಿಗೇನೆ ಹೊಸ ಅತಿಥಿಗಳ ಆಗಮನ. ಖರ್ಚು ಹೆಚ್ಚುತ್ತಿದೆಯಾದರೂ ನೀವು ಏನೂ ಮಾಡುವಂತಿಲ್ಲ . ವರ್ಷಾಂತ್ಯದ ರಜೆ ನಿಮ್ಮ ಪಾಲಿಗೆ ಸಜೆಯೇ ಸರಿ.

ಸಿಂಹ : ಅವರೊಂದಿಗಿನ ಜಗಳದಿಂದ ನಿಮಗೇನೂ ಗಿಟ್ಟುವುದಿಲ್ಲ . ಗುದ್ದಾಡಿದರೂ ಗಂಧದವರೊಡನೆ ಗುದ್ದಾಡಬೇಕು ಅನ್ನುವುದು ನಿಮಗೆ ಗೊತ್ತಿಲ್ಲದ್ದೇನೂ ಅಲ್ಲವಲ್ಲ.

ಕನ್ಯಾ : ವಿದ್ಯಾಭ್ಯಾಸದಲ್ಲಿ ಪ್ರಗತಿ. ಧನಲಾಭ. ಹೊಸ ವಸ್ತ್ರ ಧರಿಸುವ ಅವಕಾಶ. ಎಲ್ಲವೂ ಸರಿ, ಆದರೆ, ನೀವು ಒಲ್ಲದ ಪ್ರಯಾಣ ನಿಮಗಾಗಿ ಕಾದಿದೆ.

ತುಲಾ : ಸಾಕಪ್ಪಾ ಸಾಕು ಈ ಕೆಲಸ ! ಎಂದಿರಾ. ಹಾಗೆಂದರೆ ಹೇಗೆ, ಇಷ್ಟ ಎಂದು ಅಪ್ಪಿಕೊಂಡ ಮೇಲೆ ಅನುಭವಿಸಲೇ ಬೇಕಲ್ಲವೆ. ಬಡ್ತಿ ಹತ್ತಿರದಲ್ಲೇ ಇರುವುದರಿಂದ ತಾಳ್ಮೆಯಿಂದಿರಿ.

ವೃಶ್ಚಿಕ : ಜಗವೇ ಒಂದು ರಣರಂಗ ಎಂದು ಹೇಳುತ್ತಿರುವಿರಾದರೂ, ಯಾವತ್ತಾದರೂ ಕತ್ತಿ ಹಿಡಿದಿದ್ದೀರಾ! ಈ ದಿನ ನಿಮ್ಮ ಪಾಲಿಗೆ ಹೇಗೆ ಅನ್ನುವುದು ನೀವು ನಿರ್ಧರಿಸಿದಂತೆಯೇ.

ಧನಸ್ಸು: ನೆನೆಗುದಿಗೆ ಬಿದ್ದ ಪ್ರಣಯ ಮತ್ತೆ ಜೀವಗೊಳ್ಳಲಿದೆ. ಎರಡು ದೋಣಿಯ ಮೇಲೆ ಕಾಲಿಡುವ ಚಾಳಿಯನ್ನು ಮತ್ತೆ ಶುರು ಮಾಡುವ ಹುಂಬತನ ಬೇಡ.

ಮಕರ : ಈ ಪಾಟಿ ಮರೆವಾದರೆ ಹೇಗೆ. ನಿಮ್ಮ ಬೇಜಾರಿಗೆ ಕಾರಣ ಹೇಳುತ್ತೇನೆ ಎಂದು ಹೇಳಿದ್ದ ನಿಮ್ಮ ಮಾತನ್ನು ಅವರಿನ್ನೂ ಮರೆತಿಲ್ಲ . ಮಾತು ಉಳಿಸಿಕೊಳ್ಳಿ ಅಥವಾ ಕಡ್ಡಿ ಮುರಿದಂತೆ ಅಧಿಕ ಪ್ರಸಂಗ ಮಾಡದಿರಲು ಸೂಚಿಸಿ.

ಕುಂಭ : ಒಂದು ಚಿತ್ರ ಸಾವಿರ ಪದಗಳಿಗಿಂತಲೂ ಹೆಚ್ಚು ಪ್ರಭಾವ ಶಾಲಿ ಅನ್ನುವುದು ನಿಜ. ಆದರೆ, ಕೆಲವು ಚಿತ್ರಗಳು ಮರೆ ಮಾಚುವುದೇ ಹೆಚ್ಚು . ನಿಮ್ಮ ಜಾಗ್ರತೆಯಲ್ಲಿ ನೀವಿರಿ.

ಮೀನ : ಒಡ ಹುಟ್ಟಿದವರು ನಿಮ್ಮಿಂದ ನೆರವು ಕೋರಲು ಹಿಂಜರಿಯುತ್ತಿದ್ದಾರೆ. ಅವರಿಗೆ ನೆರವಾಗುವ ಸ್ಥಿತಿಯಲ್ಲಿ ನೀವಿದ್ದೀರಾದ್ದರಿಂದ ನೆರವಿಗೆ ನೀವೇ ಮುಂದಾಗಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X