ಮನೆ ಇರುವ ನದಿಯ ದೋಣಿಗಳೂರಿನಲ್ಲಿ ರಜೆ ಕಳೆಯಲು ಬಂದ ಪ್ರಧಾನಿ
ನವದೆಹಲಿ : ರಾಮ ದೇಗುಲ ನಿರ್ಮಾಣದ ಬಗೆಗಿನ ವಿವಾದಾಸ್ಪದ ಹೇಳಿಕೆಯಿಂದ ಸಂಸತ್ತಿನಲ್ಲಿ ತೀವ್ರ ಪ್ರತಿರೋಧ ಎದುರಿಸಿದ್ದ ಪ್ರಧಾನಿ ವಾಜಪೇಯಿ ಪ್ರಸ್ತುತ, ಕೇರಳದ ಹರಿದ್ವರ್ಣದ ತವರು ಕುಮಾರಕೊಮ್ಗೆ ಒಂದು ವಾರ ಕಾಲ ರಜೆ ಅನುಭವಿಸಲು ತೆರಳಿದ್ದಾರೆ.
ಕೆಲವು ಅಧಿಕಾರಿಗಳು ಹಾಗೂ ಖಾಸಗಿ ಸಿಬ್ಬಂದಿಯಾಂದಿಗೆ ವಿಶೇಷ ವಿಮಾನದಲ್ಲಿ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಪ್ರಧಾನಿ ಕೊಚ್ಚಿನ್ನಿಂದ 80 ಕಿಮೀ ದೂರದಲ್ಲಿರುವ ವೆಂಬನಾಡ್ ಸರೋವರದ ತಟದ ಕುಮಾರಕೊಮ್ಗೆ ಬಂದಿಳಿದರು. ಮನೆ ಇರುವ ನದಿಯ ದೋಣಿಗಳಿಗೆ ಹಾಗೂ ಆಯುರ್ವೇದ ಚಿಕಿತ್ಸೆಗೆ ಕುಮಾರಕೊಮ್ ಪ್ರಸಿದ್ಧವಾಗಿದೆ.
ಅಕ್ಟೋಬರ್ನಲ್ಲಿ ಮೊಣಕಾಲು ಶಸ್ತ್ರ ಚಿಕಿತ್ಸೆಯ ನಂತರ ವಾಜಪೇಯಿ ಅವರು ಪಡೆಯುತ್ತಿರುವ ಮೊದಲ ಬಿಡುವು ಇದಾಗಿದೆ. ಬಿಡುವಿನ ಕಾಲದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಾಂದನ್ನು ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮವನ್ನು ಉಳಿದು ಬೇರೆ ಯಾವ ಕಾರ್ಯಕ್ರಮಗಳನ್ನೂ ವಾಜಪೇಯಿ ಹೊಂದಿಲ್ಲ . ಕಾರ್ಯಕ್ರಮ ಪಟ್ಟಿಯ ಪ್ರಕಾರ ಹೊಸ ವರ್ಷದ ಮೊದಲ ದಿನ (ಜನವರಿ 1) ದೆಹಲಿಗೆ ವಾಪಸ್ಸಾಗುವರು.
(ಯುಎನ್ಐ)