29ರಂದು ಮೈಸೂರಿನಲ್ಲಿ ಡಾ.ರಾಜ್ ‘ಧನ್ಯಮಿಲನ’ ಕಾರ್ಯಕ್ರಮ
ಮೈಸೂರು : ಕಾಡುಗಳ್ಳ ವೀರಪ್ಪನ್ ಒತ್ತೆಯಿಂದ ಸುರಕ್ಷಿತವಾಗಿ ನಾಡಿಗೆ ಹಿಂತಿರುಗಿದ ಕನ್ನಡದ ವರನಟ ಡಾ. ರಾಜ್ಕುಮಾರ್ ಅವರನ್ನು ಸನ್ಮಾನಿಸಲು ಮೈಸೂರು ಈಗ ಸಜ್ಜಾಗುತ್ತಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಧನ್ಯಮಿಲನ ಕಾರ್ಯಕ್ರಮದ ಮಾದರಿಯ ಮತ್ತೊಂದು ಕಾರ್ಯಕ್ರಮಕ್ಕೆ ಚಾಮುಂಡಿ ವಿಹಾರ ಕ್ರೀಡಾಂಗಣ ಅಣಿಯಾಗುತ್ತಿದೆ.
ರಾಜ್ ಅವರು, 29ರಂದು ಮೈಸೂರಿಗೆ ಆಗಮಿಸಲಿದ್ದು, ಅಭಿಮಾನಿಗಳು ‘ಧನ್ಯಮಿಲನ’ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅಂದು ಸಂಜೆ 5.30ಕ್ಕೆ ರಾಜ್ ಅವರನ್ನು ಸನ್ಮಾನಿಸಲಾಗುವುದು ಎಂದು ಅಖಿಲ ಕರ್ನಾಟಕ ಡಾ. ರಾಜ್ಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ದೇಶಿಗೌಡ ಹಾಗೂ ಸಂಚಾಲಕ ಮಲ್ಲರಾಜ ಅರಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುತ್ತೂರು ಮಠದಲ್ಲಿ : ಪಿರಿಯಾಪಟ್ಟಣದ ಸುತ್ತೂರು ಮಠದಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಭಗವತ್ಪಾದರ 1041ನೇ ಜಯಂತಿ ನಡೆಯುತ್ತಿದ್ದು. 30ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಡಾ.ರಾಜ್ಕುಮಾರ್ ಸಹ ಭಾಗವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಜ್ ಅವರನ್ನು ಸನ್ಮಾನಿಸುವ ಕಾರ್ಯಕ್ರಮವೂ ಇದೆ.
ಮುಖಪುಟ / ಇವತ್ತು... ಈ ಹೊತ್ತು...