For Daily Alerts
ರಾಣಿ ಚೆನ್ನಮ್ಮ ಎಕ್ಸ್ಪ್ರೆಸ್ ರೈಲ್ನಲ್ಲಿದ್ದುದು ಹುಲ್ಲು ಕಡ್ಡಿ , ಹಾವಲ್ಲ
ಬೆಂಗಳೂರು : ರಾಣಿ ಚೆನ್ನಮ್ಮ ಎಕ್ಸ್ಪ್ರೆಸ್ ರೈಲ್ನಲ್ಲಿದ್ದುದು ಸ್ಪೋಟಕ ವಸ್ತು ಅಲ್ಲವೆನ್ನುವುದು ಪ್ರಾಥಮಿಕ ತನಿಖೆಯಿಂದ ದೃಢ ಪಟ್ಟಿದೆ ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಈ ವಿಷಯವನ್ನು -ಫೊರೆನ್ಸಿಕ್ ಸೈನ್ಸ್ ಲ್ಯಾಬೊರೆಟರಿ ಸರ್ಕಾರಕ್ಕೆ ತಿಳಿಸಿದೆ ಎಂದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಖರ್ಗೆ ಹೇಳಿದರು . ಆದರೆ, ಪ್ರಯೋಗಾಲಯದ ಅಂತಿಮ ಹಾಗೂ ಅಧಿಕೃತ ವರದಿ ಸರ್ಕಾರಕ್ಕೆ ಇನ್ನೂ ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಡಿಸೆಂಬರ್ 24 ರಂದು ಮೀರಜ್ನಿಂದ ಬರುತ್ತಿದ್ದ ಚೆನ್ನಮ್ಮ ಎಕ್ಸ್ಪ್ರೆಸ್ ರೈಲಿನ ಶೌಚಾಲಯದಲ್ಲಿ ಕಂಡು ಬಂದ ವಸ್ತುವೊಂದನ್ನು ಟೈಂ ಬಾಂಬ್ ಎಂದು ನಂಬಲಾಗಿತ್ತು ಹಾಗೂ ಪ್ರಕರಣವನ್ನು ಐಎಸ್ಐ ಕೈವಾಡ ಎಂದು ಶಂಕಿಸಲಾಗಿತ್ತು . ಅದೇ ರೈಲಿನಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಹಾಗೂ ಭಾರೀ ನೀರಾವರಿ ಸಚಿವ ಎಚ್.ಕೆ. ಪಾಟೀಲ್ ಪ್ರಯಾಣಿಸುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದು.
(ಯುಎನ್ಐ)
ಮುಖಪುಟ / ಇವತ್ತು... ಈ ಹೊತ್ತು...
Story first published: Sunday, December 24, 2000, 5:30 [IST]