Get Updates
Get notified of breaking news, exclusive insights, and must-see stories!

ವೀರಪ್ಪನ್‌ ಪತ್ತೆಗೆ ಅರಣ್ಯ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ

ಕೊಯಮತ್ತೂರು : ವೀರಪ್ಪನ್‌ ಬೇಟೆ ಕಾರ್ಯಾಚರಣೆ ಭರದಿಂದ ಸಾಗಿದೆ. ಕೊಯಮತ್ತೂರು ಹಾಗೂ ನೀಲಗಿರಿ ಪ್ರದೇಶದ ಸುಮಾರು 200 ಕಿ.ಮೀಟರ್‌ ವ್ಯಾಪ್ತಿಯಲ್ಲಿ ವೀರಪ್ಪನ್‌ಗಾಗಿ ವೈಮಾನಿಕ ಸಮೀಕ್ಷೆ ನಡೆಸಲಾಗುತ್ತಿದೆ. ಈ ವಿಷಯವನ್ನು ಪೊಲೀಸ್‌ ಮೂಲಗಳು ದೃಢಪಡಿಸಿವೆ.

ಅತ್ಯಾಧುನಿಕ ಹಾಗೂ ಪ್ರಬಲ ಎಲೆಕ್ಟ್ರಾನಿಕ್‌ ಬೈನಾಕ್ಯುಲರ್‌ಗಳನ್ನು ಅಳವಡಿಸಲಾಗಿರುವ ಎರಡು ಪ್ರತ್ಯೇಕ ಹೆಲಿಕಾಪ್ಟರ್‌ಗಳಲ್ಲಿ ಈ ಸಮೀಕ್ಷಾ ಕಾರ್ಯ ಮುಂದುವರಿದಿದೆ. ಜರ್ಮನಿಯಿಂದ ತರಿಸಿಕೊಳ್ಳಲಾಗಿರುವ ಅತಿ ಹೆಚ್ಚು ಸಾಮರ್ಥ್ಯದ ದೂರದರ್ಶಕಗಳನ್ನೂ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಚಿನ್ನಪತ್ತಿ ಹಾಗೂ ಬಾರ್‌ಲಿಯಾರ್‌ ಅರಣ್ಯ ಪ್ರದೇಶದಲ್ಲಿ ಈ ವೈಮಾನಿಕ ಸಮೀಕ್ಷೆ ನಡೆಯುತ್ತಿದೆ.

ಬಿಎಸ್‌ಎಫ್‌ ಹಾಗೂ ಎಸ್‌ಟಿಎಫ್‌ನ ತುಕಡಿಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ನಾಲ್ಕು ಭಾಗಗಳಿಂದ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದೂ ತಿಳಿದುಬಂದಿದೆ. ಈ ಮಧ್ಯೆ ಕೊಯಮತ್ತೂರು ತಾಲೂಕಿನ ಆನೆಗಡ್ಡಿ ಅರಣ್ಯ ಪ್ರದೇಶದಲ್ಲಿ ಗುಂಪೊಂದು ಕಳೆದ ವಾರ ಸೆಸೋಲೆಯೂರು ಹಾಡಿಯ ವ್ಯಕ್ತಿಯಾಬ್ಬರ ಮೇಲೆ ಗುಂಡಿನ ಮಳೆಗರೆದಿರುವ ಹಿನ್ನೆಲೆಯಲ್ಲಿ ಇದು ವೀರಪ್ಪನ್‌ ಸಹಚರರ ಕೃತ್ಯ ಎಂದು ಶಂಕಿಸಲಾಗಿದ್ದು, ವೀರಪ್ಪನ್‌ ಇದೇ ಅರಣ್ಯ ಪ್ರದೇಶದಲ್ಲಿ ಇದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಮಧ್ಯೆ ವೀರಪ್ಪನ್‌ ಸಹಚರರಿಂದ ಅಪಾಯ ಒದಗಬಹುದು ಎಂಬ ಶಂಕೆಯಿಂದ ಊಟಿ- ಮೈಸೂರು ನಡುವಿನ ವಾಹನ ಸಂಚಾರವನ್ನು ರಾತ್ರಿ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಿಸಲಾಗಿದೆ. ಕಾಲಹಟ್ಟಿ ಘಾಟಿ ಹಾಗೂ ಮುಡುಮಲೈ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+