ಮಣಿಪಾಲದಲ್ಲಿ ಕರ್ನಾಟಕದ 2ನೇ ತಾರಾಲಯ
ಮಣಿಪಾಲ : ಇಲ್ಲಿ ನಿರ್ಮಾಣವಾಗಿರುವ ರಾಜ್ಯದ ಎರಡನೇ ತಾರಾಲಯ (ಪ್ಲಾನಟೋರಿಯಂ) ವನ್ನು ಇನ್ಫೋಸಿಸ್ ಅಧ್ಯಕ್ಷ ನಾರಾಯಣ ಮೂರ್ತಿ ಶನಿವಾರ ಉದ್ಘಾಟಿಸಿದರು.
ಡಾ.ಟಿ.ಎಂ.ಎ.ಪೈ ಸ್ಮರಣಾಥ ನಿರ್ಮಿಸಲಾಗಿರುವ ಈ ತಾರಾಲಯ ಖಗೋಲ ಶಾಸ್ತ್ರದ ಬಗೆಗೆ ದೃಶ್ಯಾವಳಿಗಳ ಸಹಿತ ಮಾಹಿತಿ ನೀಡಲಿದೆ. ಬೆಂಗಳೂರಿನ ನೆಹರು ತಾರಾಲಯ ಬಿಟ್ಟರೆ ಕರ್ನಾಟಕದಲ್ಲಿ ತಲೆ ಎತ್ತಿರುವ ಮೊದಲ ತಾರಾಲಯ ಇದಾಗಿದ್ದು, ಜರ್ಮನ್ ತಂತ್ರಜ್ಞಾನದಲ್ಲಿ ನಿರ್ಮಿತವಾಗಿದೆ.
ಮತ್ತೊಂದು ಡಾಕ್ಟರೇಟ್ : ಭಾನುವಾರ ಸಂಜೆ ಮಣಿಪಾಲದ ಹೊಟೇಲ್ ವ್ಯಾಲಿವ್ಯೂನಲ್ಲಿ ನಡೆದ ಮಣಿಪಾಲ ಅಕಾಡೆಮಿ ಆಫ್ ಹೈಯರ್ಎಜುಕೆಶನ್ (ಮಾಹೆ) ನ ಘಟಿಕೋತ್ಸವದಲ್ಲಿ ನಾರಾಯಣ ಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಬಂಡವಾಳ ಶಾಹಿ ದೇಶದ ಪಿಡುಗಲ್ಲ, ಅದನ್ನು ಸಾಮಾಜಿಕ ಪ್ರಗತಿಗೆ ಬಳಸಲು ಸಾಧ್ಯ, ಧನಬಲ ದಾನಬಲ ಹೆಚ್ಚಿಸುತ್ತದೆ ಎಂಬುದನ್ನು ಕಂಪನಿ ರುಜುವಾತು ಮಾಡಿದೆ ಎಂದು ನಾರಾಯಣ ಮೂರ್ತಿ ಹೇಳಿದರು.
ಸಮಾಜವಾದಕ್ಕೆ ಹೊಸ ವ್ಯಾಖ್ಯಾನ ಕೊಟ್ಟ ವ್ಯಕ್ತಿ ನಾರಾಯಣ ಮೂರ್ತಿ. ಅವರಂಥವರು ಹೆಚ್ಚಲಿ ಎಂದು ಡಾಕ್ಟರೇಟ್ ನೀಡಿ ಗೌರವಿಸಿದ ಮಾಹೆ ಕುಲಪತಿ ಡಾ.ರಾಮದಾಸ ಎಂ. ಪೈ ಹೊಗಳಿದರು.
( ಮಂಗಳೂರು ಪ್ರತಿನಿಧಿಯಿಂದ)