ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾಪು ಸುತ್ತಮುತ್ತಲ 100 ಮಂದಿಗೆ ಮಲೇರಿಯಾ
ಉಡುಪಿ : ಜಿಲ್ಲೆಯ ಕಾಪು ವಿಧಾನ ಸಭಾ ಕ್ಷೇತ್ರದ ಪಡುಬೆಳೆ, ಕುಂಜಾರುಗಿರಿ, ಪಾಂಬೂರು ಪ್ರದೇಶಗಳ ಸುಮಾರು 100 ಮಂದಿ ಮಲೇರಿಯಾದಿಂದ ಬಳಲುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಶಾಸಕ ವಸಂತ ಸಾಲಿಯಾನ ಭಾನುವಾರ ಹೇಳಿದ್ದಾರೆ.
ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಅವರು, 2 ತಿಂಗಳಿಂದ ಈ ಪ್ರದೇಶಗಳಲ್ಲಿ ಮಲೇರಿಯಾ ತಲೆ ಎತ್ತಿದ್ದು, ಮೂವರನ್ನು ಬಲಿ ತೆಗೆದುಕೊಂಡಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆಪಾದಿಸಿದ್ದಾರೆ.
( ಮಂಗಳೂರು ಪ್ರತಿನಿಧಿಯಿಂದ)
Comments
Story first published: Sunday, December 24, 2000, 5:30 [IST]