ಭಾರತದ ಆನಂದ್ ಈಗ ಚೆಸ್ ‘ವಿಶ್ವನಾಥನ್’
ಟೆಹರಾನ್ : ಇಲ್ಲಿ ಈ ಖುಷಿಗೆ ಮೊದಲ ಬಾರಿಗೆ ಭಾರತದ ಧ್ವಜ ಮೆರೆಯಿತು.....
ಸ್ಪೇನ್ನ ಅಲೆಕ್ಸಿ ಶಿರೋವ್ ಅವರನ್ನು ಸೋಲಿಸುವ ಮೂಲಕ ರಷ್ಯಾದ ಪಾರುಪತ್ಯದಲ್ಲಿದ್ದ ವಿಶ್ವ ಚೆಸ್ ದೊರೆ ಪಟ್ಟವನ್ನು ಭಾರತದ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಭಾನುವಾರ ಕಸಿದುಕೊಂಡಿದ್ದಾರೆ.
ಫಿಡೆ ವಿಶ್ವ ಚೆಸ್ ಚಾಂಪಿಯನ್ಷಿಪ್ನ ಅಂತಿಮ ಸುತ್ತಿನ 4ನೇ ಪಂದ್ಯದಲ್ಲಿ ಶಿರೋವ್ ಅವರನ್ನು ಸೋಲಿಸುವ ಮೂಲಕ 3ನೇ ಜಯ ಸಾಧಿಸಿದ ಆನಂದ್, ಇನ್ನೂ 2 ಪಂದ್ಯಗಳಿರುವಂತೆಯೇ ವಿಶ್ವ ಚೆಸ್ ರಾಜನಾದರು. ಮೊದಲ ಪಂದ್ಯ ಡ್ರಾ ಮಾಡಿಕೊಂಡ ನಂತರ ಸತತ 3 ಜಯ ಸಾಧಿಸಿದ ಆನಂದ್ 3.5- 0.5 ರ ಮುನ್ನಡೆ ಪಡೆದು ವಿಶ್ವ ಚಾಂಪಿಯನ್ ಪಟ್ಟ ಗಿಟ್ಟಿಸಿದರು.
ಸಾಮಾನ್ಯವಾಗಿ ಅಂತಿಮ ಸುತ್ತಿನ ಹಣಾಹಣಿ ಟಂಗಾಟುಂಗಿಯದ್ದಾಗಿರುತ್ತದೆ. ಚಾಂಪಿಯನ್ ಆಗಲು ಕೊನೆ ಪಕ್ಷ 6ನೇ ಆಟದವರೆಗೂ ಆಡಬೇಕಾಗುವ ಪ್ರಸಂಗಗಳೇ ಹೆಚ್ಚು. ಅಂಥಾದರಲ್ಲಿ ಎದುರಾಳಿಯ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಪೂರ್ಣ ಪ್ರಮಾಣದಲ್ಲಿ ಮೇಲುಗೈ ಸಾಧಿಸಿದ ಆನಂದ್ 4ನೇ ಪಂದ್ಯದ 41ನೇ ನಡೆಯ ನಂತರ ಶಿರೋವ್ ಅವರನ್ನು ಪೇಚಿಗೆ ಸಿಕ್ಕಿಸಿದರು. ದಾರಿ ತೋರದ ಶಿರೋವ್ ಸೋಲೊಪ್ಪಿದರು.
ಈ ಅನಿರೀಕ್ಷಿತ ಫಲಿತಾಂಶ ಡಿಸೆಂಬರ್ 27ಕ್ಕೆ ನಿಗದಿಯಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಈಗ ಮುನ್ನವೇ ಆಯೋಜಿಸಲು ಎಡೆ ಮಾಡಿಕೊಟ್ಟಿದೆ. 1998ರಲ್ಲಿ ಫಿಡೆ ವಿಶ್ವ ಚೆಸ್ ಚಾಂಪಿಯನ್ಷಿಪ್ ಫೈನಲ್ಸ್ ಪ್ರವೇಶಿಸಿ ರಷ್ಯಾದ ಅನಾತೊಲಿ ಕಾರ್ಪೊವ್ ವಿರುದ್ಧ ಸೋತಿದ್ದರು. ಅಲ್ಲಿ ಕಳಕೊಂಡದ್ದನ್ನು ಆನಂದ್ ಭಾನುವಾರ ಸಂಪಾದಿಸಿದರು.
ಪ್ರಥಮ ಬಾರಿಗೆ ಚೆಸ್ ದೊರೆಯಾದ ಏಷ್ಯಾದ ಆಟಗಾರ, ತನ್ನ ಹೆಮ್ಮೆಯ ‘ವಿಶಿ’, ‘ಮದ್ರಾಸ್ ಹುಲಿ’ ಸ್ವಾಗತಕ್ಕೆ ಚೆನ್ನೈ ಸಜ್ಜಾಗುತ್ತಿದೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications