ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಆರ್ಥಿಕ ವಿಷಯದಲ್ಲಿ ಹಿನ್ನಡೆ ಇದೆ. ಹೊಸ ವೃತ್ತಿಯಲ್ಲಿ ಅಪಜಯದ ಭೀತಿಯೂ ಇದೆ. ದೇವರನ್ನು ನಂಬಿದರೆ ಸಂಕಷ್ಟ ಪರಿಹಾರ.ವೃಷಭ : ಪ್ರಯಾಣ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ. ಬಾಸ್ ನಿಮ್ಮ ಬಗ್ಗೆ ಮುನಿಸಿಕೊಂಡಿದ್ದಾರೆಂಬ ಶಂಕೆ ಬೇಡ. ನಿಮ್ಮ ಮಾತು ಹಿತವಾಗಿದ್ದರೆ, ಜಗವನ್ನೇ ಗೆಲ್ಲುತ್ತೀರಿ.
ಮಿಥುನ : ಕೈತುಂಬ ಕೆಲಸ ಇದೆ. ಮನಸ್ಸಿಗೆ ನೆಮ್ಮದಿಯಿಲ್ಲ. ಹಣವೇ ಮುಖ್ಯವಲ್ಲ ಎಂದು ನಿಮಗನಿಸಿದೆ. ವಿಶ್ರಾಂತಿಗೆ ಮನಸ್ಸು ಹಾತೊರೆಯುತ್ತಿದೆ. ಎಲ್ಲ ಸಂತೋಷಗಳೂ ಒಮ್ಮೆಲೆ ಹರಿದು ಬರುತ್ತವೆ. ಹೃದಯವನ್ನು ಭದ್ರವಾಗಿಟ್ಟುಕೊಳ್ಳಿ.
ಕಟಕ : ಹಿರಿಯರ ನಿಂದಿಸುವ ಸಾಹಸ ಮಾಡಬೇಡಿ. ಪಿತ್ರಾರ್ಜಿತ ಆಸ್ತಿ ನಿಮ್ಮನ್ನೇ ಹುಡುಕಿಕೊಂಡು ಬರುತ್ತಿದೆ. ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಳ್ಳದೆ, ಕಾರ್ಯ ಪ್ರವೃತ್ತರಾಗಿ. ವ್ಯಾಪಾರದಲ್ಲಿ ಅಖಂಡ ಸೌಭಾಗ್ಯವಿದೆ.
ಸಿಂಹ : ಅಲಸ್ಯಪಟ್ಟರೆ ಅಮೃತವೂ ವಿಷವಾಗುತ್ತದೆ. ಜಡತ್ವ ಮರೆತು, ಮನಸ್ಸು ಚುರುಕು ಮಾಡಿದರೆ, ಬಡ್ತಿಗೆ ಮೋಸವಿಲ್ಲ. ನಿಮ್ಮ ಕೆಲಸವನ್ನು ಎಲ್ಲರೂ ಗಮನಿಸುತ್ತಿದ್ದಾರೆ. ಸ್ನೇಹಿತರೇ ದ್ರೋಹ ಮಾಡುವ ಹುನ್ನಾರ ನಡೆಸಿದ್ದಾರೆ. ಎಚ್ಚರಿಕೆಯಿಂದಿರಿ.
ಕನ್ಯಾ :ಮೃದು ಮಾತು ಮೂರು ಲೋಕವನ್ನೂ ಗೆಲ್ಲುತ್ತದೆ. ನಿಮ್ಮ ನಾಲಿಗೆಗೆ ಕೊಂಚ ಕಡಿವಾಣ ಹಾಕಿದರೆ, ನಿಮಗಿಂತ ದೊಡ್ಡವರು ಮತ್ತೊಬ್ಬರಿಲ್ಲ. ಪ್ರೀತಿಯಿಂದ ಜಗವ ಗೆಲ್ಲಲು ಅಡ್ಡಿಯಿಲ್ಲ. ದ್ವೇಷ ಬಿಟ್ಟ ಹೊರತು ನಿಮಗೆ ಜಯವಿಲ್ಲ. ಹಿರಿಯರಿಗೆ, ಅವರ ಅನುಭವಕ್ಕೆ ಗೌರವ ಕೊಡಿ.
ತುಲಾ : ತಕ್ಕಡಿಗೆ ಕಬ್ಬಿಣವೂ ಹತ್ತಿಯೂ ಎರಡೂ ಒಂದೇ. ಅದು ತೋರುವುದು ತೂಕ ಮಾತ್ರ. ನಿಮ್ಮ ಮನಸ್ಸಿನ ತಕ್ಕಡಿ ಈಗ ವಾಲಿದೆ. ಮನಸ್ಸನ್ನು ನಿಯಂತ್ರಿಸಿದರೆ ಒಳಿತು. ಹೊಸ ವ್ಯಾಪಾರಕ್ಕೆ ಕೈ ಹಾಕಬೇಡಿ. ಕೌಟುಂಬಿಕ ತೊಂದರೆ ನಿಭಾಯಿಸಲು ಸಜ್ಜಾಗಿ.
ವೃಶ್ಚಿಕ : ಚಳಿಯಿದೆ ಎಂದು ಕಂಪಿಸುತ್ತಾ ಕುಳಿತರೆ ಹೇಗೆ. ಬೆಚ್ಚನೆಯ ಬಟ್ಟೆ ತೊಟ್ಟು ಹೊರಗೆ ನಡೆಯಿರಿ. ಧೈರ್ಯವಿದ್ದಲ್ಲಿ ಜಯ ಇದ್ದೇ ಇದೆ. ಷೇರು, ಕೋರ್ಟ್ ವ್ಯವಹಾರ ನಿಮ್ಮ ಪರವಾಗೇ ಇದೆ. ಅನಿರೀಕ್ಷಿತ ಧನ ಲಾಭವೂ ಇದೆ.
ಧನಸ್ಸು : ಕೆಲಸ ಮಾಡುವೆಡೆ ಅನುಕೂಲಕರ ವಾತಾವರಣ ಇದೆ. ಅಸಮಾಧಾನ, ಆತಂಕ ಬೇಡ. ಕಾಣುವ ಕತ್ತಲು, ಬೆಳಕಿಗೆ ಹೆದರೇ ತೀರುತ್ತದೆ. ಹೃದಯಾಂತರಾಳದ ಜ್ಯೋತಿ ಬೆಳಗಿಸಿ, ನೀವು ಉಜ್ವಲವಾಗಿ ಬೆಳಗುತ್ತೀರಿ. ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ ಕಾಯುತ್ತಿದೆ.
ಮಕರ : ಉತ್ತಮ ಅವಕಾಶಗಳು ನಿಮಗಾಗಿ ಕಾಯುತ್ತಿವೆ. ನಿಮ್ಮ ಶಕ್ತಿ ಸಾಮರ್ಥ್ಯ ತೋರಲು ಇದು ಸಕಾಲ. ಎನಗಿಂತ ಕಿರಿಯರಿಲ್ಲ ಎಂಬ ವಿಶಾಲ ಮನೋಭಾವ ನಿಮ್ಮದು. ನಿಮ್ಮ ಒಳ್ಳೆಯತನವೇ ನಿಮ್ಮ ಯಶಸ್ಸಿನ ಗುಟ್ಟು. ಆರೋಗ್ಯಕ್ಕಿಂತ ಮಿಗಿಲಾದ ಭಾಗ್ಯ ಮತ್ತೊಂದಿಲ್ಲ ಎಂಬುದನ್ನು ಮರೆಯದಿರಿ.
ಕುಂಭ : ಕಾರ್ಯಕ್ಷೇತ್ರದಲ್ಲಿ ತೊಡಕುಗಳಿವೆ. ನಿಮ್ಮನ್ನು ಅನುಮಾನಿಸುವವರೂ ಇದ್ದಾರೆ. ನಿಮ್ಮ ಇತಿ ಮಿತಿ ನಿಮಗೇ ಗೊತ್ತಿದೆ. ಯಾರೊಂದಿಗೂ ಸಂಘರ್ಷ ಬೇಡ ಎಂದು ಸುಮ್ಮನಿದ್ದರೂ ಕಾಲ್ಕೆರೆದು ಬರುವವರ ದೂರವಿಡಿ.
ಮೀನ : ನಿಮ್ಮ ಯಶಸ್ಸಿನ ಬಗ್ಗೆ ಕರುಬುವವರನ್ನು ಕಡೆಗಣಿಸಿ, ಅಲ್ಪವಾದ್ದನ್ನು ತ್ಯಜಿಸಿ, ಭೂಮವಾದ್ದು ಮುಂದಿದೆ. ಗಗನ ಕುಸುಮಕ್ಕೆ ಕೈ ಚಾಚುವವರು ನೀವಲ್ಲ. ನೀವು ಯಾರೊಂದಿಗೂ ರಾಜಿ ಮಾಡಿಕೊಳ್ಳುವ ಅಗತ್ಯ ಇಲ್ಲ. ಅವರೇ ಪಶ್ಚಾತ್ತಾಪ ಪಟ್ಟು ನಿಮ್ಮಲ್ಲಿಗೆ ಬರುವ ಕಾಲ ದೂರವಿಲ್ಲ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications