ಶಬರಿಗಿರಿಯ ಅಯ್ಯಪ್ಪನಿಗಿಂತ ಹೆಚ್ಚು ಸುದ್ದಿಮಾಡಿದ ‘ಪ್ರಸಾದ’
ಶಬರಿಮಲೆ : ಈ ಬಾರಿಯಂತೂ ಶಬರಿಗಿರಿಯ ಸ್ವಾಮಿ ಶರಣಂ ಅಯ್ಯಪ್ಪನಿಗಿಂತ, ದೇವಾಲಯದಲ್ಲಿ ನೀಡುವ ಪ್ರಸಾದವೇ ಭಾರಿ ಸುದ್ದಿ ಮಾಡಿದೆ. ಭಕ್ತಾದಿಗಳಿಗೆ ನೀಡಲಾಗುವ ಆರವಣ ಪ್ರಸಾದದ ವಿವಾದ ನ್ಯಾಯಾಲಯ, ಪ್ರಯೋಗಾಲಯಗಳ ಮೆಟ್ಟಿಲೂ ಹತ್ತಿದೆ.
ಬೀಡಿಯ ತುಂಡುಗಳು, ಇಲಿಯ ಬಾಲ ಆರವಣ ಪ್ರಸಾದದಲ್ಲಿ ದೊರಕಿತ್ತು ಎಂಬ ಸುದ್ದಿ ಜನಮಾನಸದಿಂದ ಮರೆಯಾಗುವ ಮೊದಲೇ ಮತ್ತೆ ಪ್ರಸಾದದಲ್ಲಿ ಕತ್ತೆ, ಇಲಿ ಹಾಗೂ ಮನುಷ್ಯನ ಕೂದಲುಗಳು ದೊರಕಿವೆ. ಈ ಹಿನ್ನೆಲೆಯಲ್ಲಿ ಪ್ರಸಾದದ ಮಾದರಿಗಳನ್ನು ಪ್ರಾಥಮಿಕ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೂ ಕಳುಹಿಸಿಕೊಡುವಂತೆ ಕೇರಳದ ಹೈಕೋರ್ಟ್ ಆದೇಶ ನೀಡಿದೆ.
ಪ್ರಯೋಗಾಲಯ ಪ್ರಸಾದವನ್ನು ಪರೀಕ್ಷಿಸಿ ವರದಿ ನೀಡಿದ ನಂತರ ಕ್ರಮ. ಈ ವರದಿ ಬರಲು ಕನಿಷ್ಠ ಒಂದು ತಿಂಗಳಾದರೂ ಬೇಕು. ಅಷ್ಟು ಹೊತ್ತಿಗೆ ಮಕರ ಸಂಕ್ರಮಣ ಮುಗಿದು, ಅಯ್ಯಪ್ಪನ ಸೀಸನ್ ಮುಗಿದೇ ಹೋಗಿರುತ್ತದೆ. ಆದರೆ, ಪ್ರಸಾದದಲ್ಲಿ ಇಲಿಯ ಕೂದಲು ಸೇರಿದ ಬಗ್ಗೆ ಸುಳಿವು ದೊರಕಿಲ್ಲ ಎಂದು ಅಪರಾಧ ವಿಜ್ಞಾನ ಪ್ರಯೋಗಾಲಯದ ನಿರ್ದೇಶಕರು ನೀಡಿರುವ ಮಧ್ಯಂತರ ವರದಿ ತಿಳಿಸಿದೆ.
26ರಂದು ಮಂಡಲ ಪೂಜೆ : ಡಿಸೆಂಬರ್ 26ರಂದು ಮಧ್ಯಾಹ್ನ 12.30ಕ್ಕೆ ಶಬರಿಗಿರಿಯಲ್ಲಿ ಮಂಡಲಪೂಜೆ ನಡೆಯಲಿದೆ. ಅಂದು ಸ್ವಾಮಿಗೆ ತಂಗ ಅಂಗಿ ತೊಡಿಸಿ, ವಿಶೇಷ ಪೂಜೆ ಮಾಡಲಾಗುತ್ತದೆ. ಇದಕ್ಕಾಗಿಯೇ 24ರಂದೇ ಆರನ್ಮುಳ ಪಾರ್ಥಸಾರಥಿ ಕ್ಷೇತ್ರದಿಂದ ತಂಗ ಅಂಗಿಯನ್ನು ತರಲಾಗುತ್ತದೆ.
ಈ ಮಧ್ಯೆ ಶಬರಿಗಿರಿಗೆ ಬರುತ್ತಿರುವ ಅಯ್ಯಪ್ಪನ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಕಳೆದ ಒಂದು ವಾರದಿಂದ ದೇವರ ದರ್ಶನಕ್ಕಾಗಿ ಗಂಟೆಗಟ್ಟೆಲೆ ಸರದಿಯ ಸಾಲಿನಲ್ಲಿ ನಿಂತು ಭಕ್ತರು ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications