ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಪ್ರಯಾಣ ಸಂಭವ. ಅನಿರೀಕ್ಷಿತ ಖರ್ಚಿದೆ. ಹಗ್ಗವೇ ಹಾವಾಗಿ ಬುಸುಗುಟ್ಟುತ್ತದೆ. ಒಪ್ಪಂದ - ಒಡಂಬಡಿಕೆ ಮಾಡಿಕೊಳ್ಳುವ ಮುನ್ನ ನಾಲ್ಕು ಬಾರಿ ಚಿಂತಿಸಿ.ವೃಷಭ : ಶತ್ರುಗಳಿಗಿಂತ, ನಿಮಗೆ ಹಿತಶತ್ರುಗಳೇ ಹೆಚ್ಚಾಗಿದ್ದಾರೆ. ನಯವಂಚಕರ ಬಗ್ಗೆ ಎಚ್ಚರಿಕೆ ಅಗತ್ಯ. ಭೂಮಿ ಖರೀದಿಯಲ್ಲಿ ಲಾಭವಿದೆ. ನ್ಯಾಯ ನಿಮ್ಮ ಕಡೆ ವಾಲಿದೆ.
ಮಿಥುನ : ಕಷ್ಟಗಳೆಲ್ಲಾ ಕೊನೆಗೊಳ್ಳುವ ಕಾಲ ಇದು. ಸಂತಸ ಕ್ಷೀರ ಸಾಗರದಂತೆ ಹರಿದು ಬರುತ್ತದೆ. ಕುಲದೇವರ ಅರ್ಚನೆಯಿಂದ ಎಲ್ಲ ವ್ಯವಹಾರದಲ್ಲೂ ಜಯವಿದೆ.
ಕಟಕ : ನೀವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚೇ ಸಾಧಿಸಿದ್ದೀರಿ. ಸಂಗಾತಿಯಾಂದಿಗೆ ಸುಂದರ ದಿನ. ಅಪರೂಪದ ಜನರ ಭೇಟಿ ಸಂಭವ. ಷೇರು ವ್ಯವಹಾರದಲ್ಲಿ ಪ್ರಗತಿ.
ಸಿಂಹ : ಆರೋಗ್ಯಕ್ಕಿಂತಲೂ ಬೇರೇ ಭಾಗ್ಯ ಇದೆಯೇ. ಏನಿದ್ದರೇನು, ನೆಮ್ಮದಿ ಇಲ್ಲದಿದ್ದ ಮೇಲೆ. ನಿಯಮಿತ ಆಹಾರ ಸೇವನೆಯಿಂದ ಆರೋಗ್ಯದ ವೃದ್ಧಿ. ವೈದ್ಯೋ ನಾರಾಯಣೋ ಹರಿಃ ಎನ್ನುವುದನ್ನು ಮರೆಯಬೇಡಿ.
ಕನ್ಯಾ :ಗೆಳೆಯರ ಮಾತಿಗೆ ಬೆಲೆ ಕೊಡುವವರು ನೀವಲ್ಲ. ಇಂದು ನಿಮ್ಮ ಗೆಳೆಯನ ಸಲಹೆ ಗೌರವಿಸಿದರೆ, ಪ್ರಗತಿ ಇದೆ. ಹೊಸ ಒಡಂಬಡಿಕೆಯಲ್ಲಿ ತೊಡಗುವ ಮುನ್ನ ಚಿಂತಿಸುವುದು ಅಗತ್ಯ.
ತುಲಾ : ಮನದಂತರಾಳದಲ್ಲಿ ಕುಟುಕುತ್ತಿರುವ ವಿಷಯಗಳನ್ನು ಕಿತ್ತು ಹೊರಗೆ ಹಾಕಿ. ಉಪ್ಪು ಅನ್ನ ತಿಂದರೂ ನೆಮ್ಮದಿ ಇರಬೇಕಲ್ಲವೇ. ಧನದೇವತೆ ಚಂಚಲೆ ಎಂಬುದನ್ನು ಮರೆಯಬೇಡಿ.
ವೃಶ್ಚಿಕ : ಹೊರಗೆ ಕೊರೆಯುತ್ತಿರುವ ಚಳಿ, ನಿಮ್ಮ ಮನಸ್ಸನ್ನೂ ಬಿಲ್ಲಿನಂತೆಯೇ ಬಾಗಿಸಿದೆ. ಹೆದೆಯೇರಿಸಲು ಇದು ಸಕಾಲ. ಮುಟ್ಟಿದ್ದೇಲ್ಲಾ ಚಿನ್ನ ಆಗುತ್ತದೆ. ತಡವೇಕೆ ಕಾರ್ಯಪ್ರವೃತ್ತರಾಗಿ.
ಧನಸ್ಸು : ಎಲ್ಲ ವ್ಯವಹಾರದಲ್ಲೂ ಅನುಕೂಲಕರ ವಾತಾವರಣ ಇದೆ. ವಾಹನ, ವಸ್ತು ಖರೀದಿ ಯೋಗವಿದೆ. ಆರ್ಥಿಕ ವಿಷಯದಲ್ಲಿ ತೃಪ್ತಿ. ಚೋರಭಯವಿದೆ ಎಚ್ಚರಿಕೆ.
ಮಕರ : ಧನಲಕ್ಷ್ಮೀ ಅನುಗ್ರಹ ಪ್ರಾಪ್ತವಾಗಿದೆ. ನಿಮಗರಿವಿಲ್ಲದೆ ನಿಮ್ಮಲ್ಲಿ ನವಚೈತನ್ಯ ಮೂಡಿದೆ. ಬಡ್ತಿಯ ಸಿಹಿ ಸುದ್ದಿಯೂ ಕೇಳಿ ಬರಲಿದೆ. ಕಾರ್ಯಕ್ಷೇತ್ರದಲ್ಲಿ ಭಾರಿ ಮನ್ನಣೆ ದೊರಕಲಿದೆ.
ಕುಂಭ : ರಾಜ ಯಾರಾದರೇನು, ರಾಗಿ ಬೀಸುವುದು ತಪ್ಪೀತೆ ಎನ್ನುವ ಭಾವನೆ ನಿಮ್ಮದು. ನಿಮ್ಮ ಶ್ರಮದ ಕಾಯಕಕ್ಕೆ ಬೆಲೆ ಬಂದೇ ತೀರುತ್ತದೆ. ಕೀಳರಿಮೆ ಬಿಟ್ಟರೆ ಜಯ ಖಂಡಿತ.
ಮೀನ : ಆದದ್ದೆಲ್ಲಾ ಒಳಿತೆ ಆಯಿತು. ಧೈರ್ಯವೇ ಸರ್ವತ್ರ ಸಾಧನ. ದೇವರನ್ನು ನಂಬಿದವರಿಗೆ ಸೋಲಿಲ್ಲ. ನಿಮಗೆ ಕೇಡು ಬಗೆಯುವವರಿಗೂ ನೀವು ಒಳ್ಳೆಯದನ್ನೇ ಬಯಸಿ. ಶತ್ರುವಿನ ಹೆಸರು ಮಗನಿಗಿಡಬೇಕು ಎಂಬುದನ್ನು ಕೇಳಿಲ್ಲವೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications