ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯ ಭವಿಷ್ಯ

By Staff
|
Google Oneindia Kannada News

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ಪ್ರಯಾಣ ಸಂಭವ. ಅನಿರೀಕ್ಷಿತ ಖರ್ಚಿದೆ. ಹಗ್ಗವೇ ಹಾವಾಗಿ ಬುಸುಗುಟ್ಟುತ್ತದೆ. ಒಪ್ಪಂದ - ಒಡಂಬಡಿಕೆ ಮಾಡಿಕೊಳ್ಳುವ ಮುನ್ನ ನಾಲ್ಕು ಬಾರಿ ಚಿಂತಿಸಿ.

ವೃಷಭ : ಶತ್ರುಗಳಿಗಿಂತ, ನಿಮಗೆ ಹಿತಶತ್ರುಗಳೇ ಹೆಚ್ಚಾಗಿದ್ದಾರೆ. ನಯವಂಚಕರ ಬಗ್ಗೆ ಎಚ್ಚರಿಕೆ ಅಗತ್ಯ. ಭೂಮಿ ಖರೀದಿಯಲ್ಲಿ ಲಾಭವಿದೆ. ನ್ಯಾಯ ನಿಮ್ಮ ಕಡೆ ವಾಲಿದೆ.

ಮಿಥುನ : ಕಷ್ಟಗಳೆಲ್ಲಾ ಕೊನೆಗೊಳ್ಳುವ ಕಾಲ ಇದು. ಸಂತಸ ಕ್ಷೀರ ಸಾಗರದಂತೆ ಹರಿದು ಬರುತ್ತದೆ. ಕುಲದೇವರ ಅರ್ಚನೆಯಿಂದ ಎಲ್ಲ ವ್ಯವಹಾರದಲ್ಲೂ ಜಯವಿದೆ.

ಕಟಕ : ನೀವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚೇ ಸಾಧಿಸಿದ್ದೀರಿ. ಸಂಗಾತಿಯಾಂದಿಗೆ ಸುಂದರ ದಿನ. ಅಪರೂಪದ ಜನರ ಭೇಟಿ ಸಂಭವ. ಷೇರು ವ್ಯವಹಾರದಲ್ಲಿ ಪ್ರಗತಿ.

ಸಿಂಹ : ಆರೋಗ್ಯಕ್ಕಿಂತಲೂ ಬೇರೇ ಭಾಗ್ಯ ಇದೆಯೇ. ಏನಿದ್ದರೇನು, ನೆಮ್ಮದಿ ಇಲ್ಲದಿದ್ದ ಮೇಲೆ. ನಿಯಮಿತ ಆಹಾರ ಸೇವನೆಯಿಂದ ಆರೋಗ್ಯದ ವೃದ್ಧಿ. ವೈದ್ಯೋ ನಾರಾಯಣೋ ಹರಿಃ ಎನ್ನುವುದನ್ನು ಮರೆಯಬೇಡಿ.

ಕನ್ಯಾ :ಗೆಳೆಯರ ಮಾತಿಗೆ ಬೆಲೆ ಕೊಡುವವರು ನೀವಲ್ಲ. ಇಂದು ನಿಮ್ಮ ಗೆಳೆಯನ ಸಲಹೆ ಗೌರವಿಸಿದರೆ, ಪ್ರಗತಿ ಇದೆ. ಹೊಸ ಒಡಂಬಡಿಕೆಯಲ್ಲಿ ತೊಡಗುವ ಮುನ್ನ ಚಿಂತಿಸುವುದು ಅಗತ್ಯ.

ತುಲಾ : ಮನದಂತರಾಳದಲ್ಲಿ ಕುಟುಕುತ್ತಿರುವ ವಿಷಯಗಳನ್ನು ಕಿತ್ತು ಹೊರಗೆ ಹಾಕಿ. ಉಪ್ಪು ಅನ್ನ ತಿಂದರೂ ನೆಮ್ಮದಿ ಇರಬೇಕಲ್ಲವೇ. ಧನದೇವತೆ ಚಂಚಲೆ ಎಂಬುದನ್ನು ಮರೆಯಬೇಡಿ.

ವೃಶ್ಚಿಕ : ಹೊರಗೆ ಕೊರೆಯುತ್ತಿರುವ ಚಳಿ, ನಿಮ್ಮ ಮನಸ್ಸನ್ನೂ ಬಿಲ್ಲಿನಂತೆಯೇ ಬಾಗಿಸಿದೆ. ಹೆದೆಯೇರಿಸಲು ಇದು ಸಕಾಲ. ಮುಟ್ಟಿದ್ದೇಲ್ಲಾ ಚಿನ್ನ ಆಗುತ್ತದೆ. ತಡವೇಕೆ ಕಾರ್ಯಪ್ರವೃತ್ತರಾಗಿ.

ಧನಸ್ಸು : ಎಲ್ಲ ವ್ಯವಹಾರದಲ್ಲೂ ಅನುಕೂಲಕರ ವಾತಾವರಣ ಇದೆ. ವಾಹನ, ವಸ್ತು ಖರೀದಿ ಯೋಗವಿದೆ. ಆರ್ಥಿಕ ವಿಷಯದಲ್ಲಿ ತೃಪ್ತಿ. ಚೋರಭಯವಿದೆ ಎಚ್ಚರಿಕೆ.

ಮಕರ : ಧನಲಕ್ಷ್ಮೀ ಅನುಗ್ರಹ ಪ್ರಾಪ್ತವಾಗಿದೆ. ನಿಮಗರಿವಿಲ್ಲದೆ ನಿಮ್ಮಲ್ಲಿ ನವಚೈತನ್ಯ ಮೂಡಿದೆ. ಬಡ್ತಿಯ ಸಿಹಿ ಸುದ್ದಿಯೂ ಕೇಳಿ ಬರಲಿದೆ. ಕಾರ್ಯಕ್ಷೇತ್ರದಲ್ಲಿ ಭಾರಿ ಮನ್ನಣೆ ದೊರಕಲಿದೆ.

ಕುಂಭ : ರಾಜ ಯಾರಾದರೇನು, ರಾಗಿ ಬೀಸುವುದು ತಪ್ಪೀತೆ ಎನ್ನುವ ಭಾವನೆ ನಿಮ್ಮದು. ನಿಮ್ಮ ಶ್ರಮದ ಕಾಯಕಕ್ಕೆ ಬೆಲೆ ಬಂದೇ ತೀರುತ್ತದೆ. ಕೀಳರಿಮೆ ಬಿಟ್ಟರೆ ಜಯ ಖಂಡಿತ.

ಮೀನ : ಆದದ್ದೆಲ್ಲಾ ಒಳಿತೆ ಆಯಿತು. ಧೈರ್ಯವೇ ಸರ್ವತ್ರ ಸಾಧನ. ದೇವರನ್ನು ನಂಬಿದವರಿಗೆ ಸೋಲಿಲ್ಲ. ನಿಮಗೆ ಕೇಡು ಬಗೆಯುವವರಿಗೂ ನೀವು ಒಳ್ಳೆಯದನ್ನೇ ಬಯಸಿ. ಶತ್ರುವಿನ ಹೆಸರು ಮಗನಿಗಿಡಬೇಕು ಎಂಬುದನ್ನು ಕೇಳಿಲ್ಲವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X