ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ವೃಷಭ : ಶತ್ರುಗಳಿಗಿಂತ, ನಿಮಗೆ ಹಿತಶತ್ರುಗಳೇ ಹೆಚ್ಚಾಗಿದ್ದಾರೆ. ನಯವಂಚಕರ ಬಗ್ಗೆ ಎಚ್ಚರಿಕೆ ಅಗತ್ಯ. ಭೂಮಿ ಖರೀದಿಯಲ್ಲಿ ಲಾಭವಿದೆ. ನ್ಯಾಯ ನಿಮ್ಮ ಕಡೆ ವಾಲಿದೆ.
ಮಿಥುನ : ಕಷ್ಟಗಳೆಲ್ಲಾ ಕೊನೆಗೊಳ್ಳುವ ಕಾಲ ಇದು. ಸಂತಸ ಕ್ಷೀರ ಸಾಗರದಂತೆ ಹರಿದು ಬರುತ್ತದೆ. ಕುಲದೇವರ ಅರ್ಚನೆಯಿಂದ ಎಲ್ಲ ವ್ಯವಹಾರದಲ್ಲೂ ಜಯವಿದೆ.
ಕಟಕ : ನೀವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚೇ ಸಾಧಿಸಿದ್ದೀರಿ. ಸಂಗಾತಿಯಾಂದಿಗೆ ಸುಂದರ ದಿನ. ಅಪರೂಪದ ಜನರ ಭೇಟಿ ಸಂಭವ. ಷೇರು ವ್ಯವಹಾರದಲ್ಲಿ ಪ್ರಗತಿ.
ಸಿಂಹ : ಆರೋಗ್ಯಕ್ಕಿಂತಲೂ ಬೇರೇ ಭಾಗ್ಯ ಇದೆಯೇ. ಏನಿದ್ದರೇನು, ನೆಮ್ಮದಿ ಇಲ್ಲದಿದ್ದ ಮೇಲೆ. ನಿಯಮಿತ ಆಹಾರ ಸೇವನೆಯಿಂದ ಆರೋಗ್ಯದ ವೃದ್ಧಿ. ವೈದ್ಯೋ ನಾರಾಯಣೋ ಹರಿಃ ಎನ್ನುವುದನ್ನು ಮರೆಯಬೇಡಿ.
ಕನ್ಯಾ :ಗೆಳೆಯರ ಮಾತಿಗೆ ಬೆಲೆ ಕೊಡುವವರು ನೀವಲ್ಲ. ಇಂದು ನಿಮ್ಮ ಗೆಳೆಯನ ಸಲಹೆ ಗೌರವಿಸಿದರೆ, ಪ್ರಗತಿ ಇದೆ. ಹೊಸ ಒಡಂಬಡಿಕೆಯಲ್ಲಿ ತೊಡಗುವ ಮುನ್ನ ಚಿಂತಿಸುವುದು ಅಗತ್ಯ.
ತುಲಾ : ಮನದಂತರಾಳದಲ್ಲಿ ಕುಟುಕುತ್ತಿರುವ ವಿಷಯಗಳನ್ನು ಕಿತ್ತು ಹೊರಗೆ ಹಾಕಿ. ಉಪ್ಪು ಅನ್ನ ತಿಂದರೂ ನೆಮ್ಮದಿ ಇರಬೇಕಲ್ಲವೇ. ಧನದೇವತೆ ಚಂಚಲೆ ಎಂಬುದನ್ನು ಮರೆಯಬೇಡಿ.
ವೃಶ್ಚಿಕ : ಹೊರಗೆ ಕೊರೆಯುತ್ತಿರುವ ಚಳಿ, ನಿಮ್ಮ ಮನಸ್ಸನ್ನೂ ಬಿಲ್ಲಿನಂತೆಯೇ ಬಾಗಿಸಿದೆ. ಹೆದೆಯೇರಿಸಲು ಇದು ಸಕಾಲ. ಮುಟ್ಟಿದ್ದೇಲ್ಲಾ ಚಿನ್ನ ಆಗುತ್ತದೆ. ತಡವೇಕೆ ಕಾರ್ಯಪ್ರವೃತ್ತರಾಗಿ.
ಧನಸ್ಸು : ಎಲ್ಲ ವ್ಯವಹಾರದಲ್ಲೂ ಅನುಕೂಲಕರ ವಾತಾವರಣ ಇದೆ. ವಾಹನ, ವಸ್ತು ಖರೀದಿ ಯೋಗವಿದೆ. ಆರ್ಥಿಕ ವಿಷಯದಲ್ಲಿ ತೃಪ್ತಿ. ಚೋರಭಯವಿದೆ ಎಚ್ಚರಿಕೆ.
ಮಕರ : ಧನಲಕ್ಷ್ಮೀ ಅನುಗ್ರಹ ಪ್ರಾಪ್ತವಾಗಿದೆ. ನಿಮಗರಿವಿಲ್ಲದೆ ನಿಮ್ಮಲ್ಲಿ ನವಚೈತನ್ಯ ಮೂಡಿದೆ. ಬಡ್ತಿಯ ಸಿಹಿ ಸುದ್ದಿಯೂ ಕೇಳಿ ಬರಲಿದೆ. ಕಾರ್ಯಕ್ಷೇತ್ರದಲ್ಲಿ ಭಾರಿ ಮನ್ನಣೆ ದೊರಕಲಿದೆ.
ಕುಂಭ : ರಾಜ ಯಾರಾದರೇನು, ರಾಗಿ ಬೀಸುವುದು ತಪ್ಪೀತೆ ಎನ್ನುವ ಭಾವನೆ ನಿಮ್ಮದು. ನಿಮ್ಮ ಶ್ರಮದ ಕಾಯಕಕ್ಕೆ ಬೆಲೆ ಬಂದೇ ತೀರುತ್ತದೆ. ಕೀಳರಿಮೆ ಬಿಟ್ಟರೆ ಜಯ ಖಂಡಿತ.
ಮೀನ : ಆದದ್ದೆಲ್ಲಾ ಒಳಿತೆ ಆಯಿತು. ಧೈರ್ಯವೇ ಸರ್ವತ್ರ ಸಾಧನ. ದೇವರನ್ನು ನಂಬಿದವರಿಗೆ ಸೋಲಿಲ್ಲ. ನಿಮಗೆ ಕೇಡು ಬಗೆಯುವವರಿಗೂ ನೀವು ಒಳ್ಳೆಯದನ್ನೇ ಬಯಸಿ. ಶತ್ರುವಿನ ಹೆಸರು ಮಗನಿಗಿಡಬೇಕು ಎಂಬುದನ್ನು ಕೇಳಿಲ್ಲವೆ.