ತ್ವರಿತ ಅಲರ್ಟ್ ಗಳಿಗಾಗಿ
For Daily Alerts
25ರಂದು ನಗರದಲ್ಲಿ ಹಾಸ್ಯೋತ್ಸವ 2ಕೆ
ಬೆಂಗಳೂರು : ಕನ್ನಡದ ಧೀಮಂತ ಹಾಸ್ಯ ಸಾಹಿತಿಗಳಾದ ಪಾ.ವೆಂ. ಆಚಾರ್ಯ (ಲಾಂಗೂಲಾಚಾರ್ಯ) ಹಾಗೂ ನಾಡಿಗೇರ್ಕೃಷ್ಣರಾಯರ ಸಂಸ್ಮರಣಾರ್ಥವಾಗಿ ಡಿಸೆಂಬರ್ 25ರಂದು ಜಯನಗರದ ಎಚ್.ಎನ್. ಕಲಾಕ್ಷೇತ್ರದಲ್ಲಿ ಹಾಸ್ಯೋತ್ಸವ 2 ಕೆ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೃಷ್ಣರಾಯರು ಹಾಗೂ ಲಾಂಗೂಲಾಚಾರ್ಯರು ನೀಡಿದ ಕೊಡುಗೆಯ ಬಗ್ಗೆ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಜರುಗಲಿದೆ. ಕಾರ್ಯಕ್ರಮವನ್ನು ಖ್ಯಾತ ಹಾಸ್ಯ ಸಾಹಿತಿ ಅ.ರಾ. ಮಿತ್ರ ನಿರೂಪಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಚಂದ್ರು, ಬಿ.ಎಸ್. ರಾಮಮೂರ್ತಿ, ಶಂಕರ್ ಬಿಲ್ಲೆಮನೆ ಮೊದಲಾದವರು ಪಾಲ್ಗೊಳ್ಳುತ್ತಿದ್ದಾರೆ.
ಹಾಸ್ಯಗೀತೆಗಳ ಗಾಯನ, ಕಾರ್ಟೂನ್ ರಚನೆ, ಹಾಸ್ಯ ರಂಜನೆ ಗಾನ ವಿನೋದಿನಿ, ಹಾಸ್ಯ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟವೂ ಇದೆ.
Comments
Story first published: Sunday, December 24, 2000, 5:30 [IST]