ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯುಟಿಐನ ರಾಜ್ಲಕ್ಷ್ಮಿ ಯೋಜನೆಯಡಿ ತೊಡಗಿಸಿರುವ ಹಣ ವರ್ಗಾವಣೆಗೆ ಅವಕಾಶ
ನವದೆಹಲಿ : ಯುನಿಟ್ ಟ್ರಸ್ಟ್ ಆಫ್ ಇಂಡಿಯಾದ ರಾಜ್ಲಕ್ಷ್ಮಿ ಘಟಕ ಯೋಜನೆ ಅಡಿಯಲ್ಲಿ 1992ರಲ್ಲಿ ಹಣ ತೊಡಗಿಸಿದ್ದವರಿಗೆ ಇತರ ಯೋಜನೆಗಳಿಗೆ ಬಂಡವಾಳ ವರ್ಗಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಕೇಂದ್ರದ ಹಣಕಾಸು ರಾಜ್ಯ ಸಚಿವ ಬಾಳಾಸಾಹೇಬ್ ವಿ. ಪಾಟೀಲ್ ತಿಳಿಸಿದ್ದಾರೆ.
ಮಂಗಳವಾರ ರಾಜ್ಯಸಭೆಯಲ್ಲಿ ಪ್ರಶ್ನೆಯಾಂದಕ್ಕೆ ಉತ್ತರಿಸುತ್ತಿದ್ದ ಅವರು, ರಾಜ್ಲಕ್ಷ್ಮಿ ಘಟಕ ಯೋಜನೆ ಅಡಿಯಲ್ಲಿ ಕರ್ನಾಟಕದಲ್ಲಿ 18 ಸಾವಿರದ 885ಕ್ಕೂ ಹೆಚ್ಚು ಜನ, 75 ಸಾವಿರದ 358 ಅಕೌಂಟ್ಗಳಲ್ಲಿ ಹಣ ತೊಡಗಿಸಿದ್ದಾರೆ. ಯೋಜನೆಯನ್ನು ಕಳೆದ ಸೆಪ್ಟಂಬರ್ 30ರಿಂದ ಸ್ಥಗಿತಗೊಳಿಸಲಾಗಿದ್ದು, ಹಣವನ್ನು ಇತರ ಯೋಜನೆಗಳಿಗೆ ಪರಿವರ್ತಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದ್ದಾರೆ.
(ಯುಎನ್ಐ)
Comments
Story first published: Sunday, December 24, 2000, 5:30 [IST]