ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಳೆಯ ಹರಳು ಖರೀದಿ ನೆಪವೊಡ್ಡಿ ಟೋಪಿ ಹಾಕುತ್ತಿದ್ದ ನಾಲ್ವರ ಬಂಧನ
ಬೆಂಗಳೂರು : ಹಳೆಯ ಕಾಲದ ಬೆಲೆ ಬಾಳುವ ಹರಳುಗಳನ್ನು ಖರೀದಿಸುವ ನೆಪದಲ್ಲಿ ಕೋಟ್ಯಂತರ ರೂಪಾಯಿ ವಂಚನೆ ನಡೆಸುತ್ತಿದ್ದರೆಂಬ ಆಪಾದನೆ ಮೇಲೆ ಕಲ್ಕತ್ತಾದ ಕಂಪೆನಿಯಾಂದರ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ.
ಮೋಡಸ್ ಒಪರಾಂಡಿ ಆಫ್ನ ಓಂ ಅಂಡ್ ಕಂಪೆನಿಯು ಪತ್ರಿಕೆಗಳಲ್ಲಿ ಹಳೆ ಕಾಲದ ತಾಮ್ರದ ನಾಣ್ಯ, ಗಜಮುತ್ತು, ನಾಗಮಣಿ ಹರಳುಗಳನ್ನು ಖರೀದಿಸುವುದಾಗಿ ಜಾಹೀರಾತು ನೀಡಿತ್ತು. ಬಂಧಿತರಾದ ನಾಲ್ಕು ಮಂದಿ ಕಂಪೆನಿಯ ಹೆಸರು ಹೇಳಿ, ಪರೀಕ್ಷಿಸುವ ನೆಪದಲ್ಲಿ ಫೀಸು ಸಮೇತ ಹರಳುಗಳನ್ನು ತೆಗೆದುಕೊಂಡು ಮೋಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಕಂಪೆನಿಯು ಬಾಂಗ್ಲಾ ದೇಶ, ನೇಪಾಳ ಮತ್ತು ಬರ್ಮಾದಲ್ಲಿ ತಮ್ಮ ಏಜೆಂಟರನ್ನು ನೇಮಿಸಿದೆ. ಬೆಂಗಳೂರಿನ ಸೈಯ್ಯದ್ ಇಮ್ತಿಯಾಜ್ ಸುಮಾರು 18 ಲಕ್ಷ ರೂಪಾಯಿ ಮೌಲ್ಯದ ಹರಳುಗಳನ್ನು ಪರೀಕ್ಷೆಗೆಂದು ಆರೋಪಿಗಳಿಗೆ ನೀಡಿ ಮೋಸ ಹೋದ ನಂತರ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರನ್ನೂ ಬಂಧಿಸಿದ್ದಾರೆ.
(ಯುಎನ್ಐ)
Story first published: Sunday, December 24, 2000, 5:30 [IST]