ಕನ್ನಡ ಮರೆಯಾಗಲು ಬಿಡಬೇಡಿ : ಸಿ.ಆರ್. ಸಿಂಹ
ಕೋಲಾರ : ಸಂಸ್ಕೃತ ಒಂದು ಶ್ರೀಮಂತ ಭಾಷೆ. ಎಲ್ಲ ಭಾಷೆಗಳಿಗೂ ಸಂಸ್ಕೃತವೇ ಮೂಲ ಎನ್ನುತ್ತಾರೆ ಪಂಡಿತರು. ವ್ಯಾಸ, ವಾಲ್ಮೀಕಿ, ಕಾಳಿದಾಸ, ಭಾಸ, ಬಾಣ, ಭಾರವಿಯೇ ಮೊದಲಾದ ಕವಿರತ್ನರ ಕೃತಿಗಳಿಂದ ಸಂಪದ್ಭರಿತವಾದ ಸಂಸ್ಕೃತ ಇಂದು ಜನಮಾನಸದಿಂದ ಮರೆಯಾಗಿ ಹೋಗಿದೆ. ಮುಂದೊಂದು ದಿನ ಕನ್ನಡಕ್ಕೂ ಇದೇ ಸ್ಥಿತಿ ಬರುತ್ತದೆಯೇ ಎಂಬ ಭಯ ಕಾಡುತ್ತದೆ ಎಂದು ಚಿತ್ರನಟ ಸಿ.ಆರ್. ಸಿಂಹ ಹೇಳಿದ್ದಾರೆ.
ಇಲ್ಲಿನ ದೇವರಾಜ ಅರಸು ವೈದ್ಯಕೀಯ ವಿದ್ಯಾಲಯದಲ್ಲಿ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಸ್ಪಂದನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಮಮ್ಮಿ, ಡ್ಯಾಡಿ, ಹಾಯ್, ಹಲೋ, ವಾಟ್ ಯಾ, ನೋ ಯಾ ಎಂದ ಮಾತ್ರಕ್ಕೆ ನಾನು ಅಮೆರಿಕನ್ನರಾಗಲು ಸಾಧ್ಯವಿಲ್ಲ. ನಮ್ಮ ಭಾಷೆಗೂ ಒಂದು ಗತ್ತಿದೆ, ಸೊಗಡಿದೆ, ಪರಂಪರೆ ಇದೆ. ಇತಿಹಾಸ ಇದೆ. ಇದನ್ನು ಅರಿತು ನಾವು ನಮ್ಮ ಭಾಷೆಯನ್ನು ಬೆಳೆಸಬೇಕು ಎಂದರು.
ಕೆ.ವಿ. ಪುಟ್ಟಪ್ಪ, ದ.ರಾ. ಬೇಂದ್ರೇ, ಶಿವರಾಮ ಕಾರಂತ, ಮಾಸ್ತಿ, ಗೋಕಾಕ್, ಕಾರ್ನಾಡ್, ಅನಂತಮೂರ್ತಿ, ಡಿ.ವಿ.ಜಿ, ಪು.ತಿ.ನ ಮುಂತಾದ ದಿಗ್ಗಜರ ಸಾಹಿತ್ಯದಿಂದ ಶ್ರೀಮಂತವಾದ ಕನ್ನಡ ಭಾಷೆ. ಏಳು ಜ್ಞಾನಪೀಠ ಪ್ರಶಸ್ತಿ ಪಡೆದಿದೆ. ನಮ್ಮ ನಾಡು, ನುಡಿ, ಪರಂಪರೆಗೆ 1500 ವರ್ಷಗಳ ಇತಿಹಾಸ ಇದೆ ಎಂದು ಪಂಡಿತರು ಹೇಳಿದರೂ ನಮ್ಮ ಭಾಷೆ 5000 ವರ್ಷಗಳ ಇತಿಹಾಸಕ್ಕಿಂತಲೂ ಮೀರಿ ಬೆಳೆದಿದೆ, ಇತ್ತೀಚೆಗೆ ಹರಪ್ಪಾ, ಮೊಹಂಜದಾರೋನಲ್ಲಿ ಸಿಕ್ಕಿರುವ ಶಾಸನಗಳಲ್ಲಿರುವ ಲಿಪಿಗಳು ಕನ್ನಡ ಲಿಪಿಯನ್ನು ಹೋಲುತ್ತಿದ್ದು, ಕನ್ನಡ 5000 ವರ್ಷಗಳಷ್ಟು ಹಿಂದಿಯೇ ಬಳಕೆಯಲ್ಲಿತ್ತು ಎಂಬುದನ್ನು ಸಾಬೀತು ಪಡಿಸಲಿದೆ ಎಂದರು. ಈ ಕಾಲ ದೂರವಿಲ್ಲ ಎಂದರು.
ಉನ್ನತ ಶಿಕ್ಷಣಕ್ಕೆ ಇಂಗ್ಲಿಷ್ ಬೇಕು. ಒಪ್ಪೋಣ. ಆದರೆ, ನಮ್ಮ ಮನೆಯಲ್ಲಿ, ದೈನಂದಿನ ವ್ಯವಹಾರದಲ್ಲಿ ಕನ್ನಡ ಬಳಸಲು ಮನಸ್ಸು ಇರಬೇಕು ಎಂದೂ ಅವರೂ ಹೇಳಿದರು. ಕಾರ್ಯಕ್ರಮದಲ್ಲಿ ಡಾ. ಚಂದ್ರಪ್ಪ, ಕಿರುತೆರೆಯ ಕಲಾವಿದೆ ಮಾಳವವಿಕ, ಡಾ. ಶ್ರೀಕಂಠಯ್ಯ ಮೊದಲಾದವರು ಪಾಲ್ಗೊಂಡಿದ್ದರು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications