ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶೋಲಾಪುರ್ ಸೇತುವೆಯಿಂದ ಬಸ್ ಉರುಳಿ 5 ಪ್ರಯಾಣಿಕರ ಸಾವು
ಬೆಂಗಳೂರು : ಮುಂಬೈ ಮೂಲದ ಖಾಸಗಿ ಲೆಕ್ಸುರಿ ಬಸ್ ಅಪಘಾತದಲ್ಲಿ ಓರ್ವ ಮಹಿಳೆಯೂ ಸೇರಿದಂತೆ ಒಟ್ಟು ಐದು ಮಂದಿ ಮೃತಪಟ್ಟು, ಇತರ 30 ಮಂದಿ ಗಾಯಗೊಂಡಿರುವ ಘಟನೆ ಶೋಲಾಪುರ್ ಬಳಿ ಸಂಭವಿಸಿದೆ.
ಹುಬ್ಬಳ್ಳಿ - ಮುಂಬೈ ನಡುವಿನ ರಾಷ್ಟ್ರೀಯ ಹೆದ್ದಾರಿಯ ಸಂಗೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಹುಬ್ಬಳ್ಳಿ ಜಿಲ್ಲೆಯ ಶೋಲಾಪುರ್ ಸೇತುವೆಯಿಂದ ಭಾನುವಾರ ಬೆಳಗಿನ ಜಾವ ಬಸ್ ಉರುಳಿ ಬಿದ್ದ ಪರಿಣಾಮವಾಗಿ ಈ ದುರಂತ ಸಂಭವಿಸಿದೆ.
ಪೊಲೀಸ್ ಕೇಂದ್ರ ಕಚೇರಿಗೆ ತಲುಪಿರುವ ವರದಿಗಳ ರೀತ್ಯ ಬೆಳಗಿನ ಜಾವ 3 ಗಂಟೆಯ ಸುಮಾರಿನಲ್ಲಿ ಈ ಅಪಘಾತ ಸಂಭವಿಸಿದ್ದು, ಗಾಯಾಳುಗಳನ್ನು ನಿಪ್ಪಾಣಿ, ಸಂಗೇಶ್ವರ ಹಾಗೂ ಹುಬ್ಬಳ್ಳಿಯ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. (ಯು.ಎನ್.ಐ)
Comments
Story first published: Sunday, December 24, 2000, 5:30 [IST]