ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹೆಣ್ಣು ಕತ್ತಲಿಂದ ಬೆಳಕಿಗೆ ಬರಲು ಮೀಸಲಾತಿಯೇ ಏಕೈಕ ವೇದಿಕೆ- ಶಬಾನ
ಬೆಂಗಳೂರು : ಹೆಣ್ಣು ಸಮಾಜದಲ್ಲಿ ಮುಕ್ತ ನಿರ್ಣಯ ಕೈಗೊಳ್ಳಲು ಮೀಸಲಾತಿಯೇ ವೇದಿಕೆಯಾಗಬಲ್ಲುದು ಎಂದು ಹಿಂದಿ ಚಿತ್ರ ನಟಿ ಮತ್ತು ರಾಜ್ಯಸಭಾ ಸದಸ್ಯೆ ಶಬಾನ ಆಜ್ಮಿ ಅಭಿಪ್ರಾಯ ಪಟ್ಟಿದ್ದಾರೆ.
ರಾಷ್ಟ್ರೀಯ ನವ ನಿರ್ಮಾಣ ವೇದಿಕೆ ಶುಕ್ರವಾರ ಆಯೋಜಿಸಿದ್ದ ಸಮಕಾಲೀನ ಭಾರತದಲ್ಲಿ ಮಹಿಳೆ ಎಂಬ
ವಿಚಾರ ಸಂಕಿರಣದಲ್ಲಿ ಅವರು ಮಾತಾಡುತ್ತಿದ್ದರು. ಚುನಾವಣೆಗಳಲ್ಲಿ ಹಾಗೂ ಪಂಚಾಯಿತಿ ಕ್ಷೇತ್ರದಲ್ಲಿ ಮಹಿಳೆಯ ಪಾತ್ರದ ವಿಷಯದಲ್ಲಿ ಸದ್ದಿಲ್ಲದೆ ಕ್ರಾಂತಿಯಾಗುತ್ತಿದೆ. ಆದರೂ ಪ್ರಸ್ತುತ ಪರಿಸ್ಥಿತಿ ಹುಡುಗರಿಗೆ ನಗೆಗಡಲಾದರೆ, ಹುಡುಗಿಗೆ ಕಣ್ಣೀರ ಸಮುದ್ರ ಎಂಬಂತಿದೆ ಎಂದರು.
ನಮ್ಮ ಕಾನೂನುಗಳೂ ಪುರುಷ ಪ್ರಾಧಾನ್ಯತೆಗೆ ಹೇಳಿ ಮಾಡಿಸಿದಂತಿವೆ. ಶಿಕ್ಷಣವೂ ಪುರುಷ ಕೇಂದ್ರೀಕೃತವಾದದ್ದಾಗಿದೆ. ಇವೆಲ್ಲದರಲ್ಲೂ ಬದಲಾವಣೆಯಾಗಿ ಸ್ತ್ರೀ- ಪುರುಷನ ನಡುವಿನ ದೊಡ್ಡ ಕಂದಕ ಮುಚ್ಚಿಹೋಗಿ, ಹೊಂದಾಣಿಕೆ ತಲೆದೋರಿದಲ್ಲಿ ಮಾತ್ರ ಹೆಣ್ಣು ಮೇಲೇರಲು ಸಾಧ್ಯ ಎಂದು ಹೇಳಿದರು.
(ಯುಎನ್ಐ)
Comments
Story first published: Sunday, December 24, 2000, 5:30 [IST]