ಕುದುರೆಮುಖ ಅದಿರು ಕಂಪನಿಗೆ ಐಎಸ್ಓ 14001 ಪ್ರಮಾಣ ಪತ್ರ
ಬೆಂಗಳೂರು : ಬಾಗಿಲು ಹಾಕೋ ಪರಿಸ್ಥಿತಿ ಬಂದೊದಗಿ, ಈಗ ಒಂದು ವರ್ಷದ ಗುತ್ತಿಗೆ ವಿಸ್ತರಣೆಯ ಕೃತಕ ಆಮ್ಲಜನಕದಿಂದ ಉಸಿರಾಡುತ್ತಿರುವ ಸಾರ್ವಜನಿಕ ವಲಯದ ಕುದುರೆಮುಖ ಕಬ್ಬಿಣದ ಅದಿರು ಕಂಪನಿ (ಕೆಐಓಸಿಎಲ್) ಗೆ ಐಎಸ್ಓ 14001 ಪ್ರಮಾಣ ಪತ್ರ ದೊರೆತಿದೆ. ಪರಿಸರ ತಜ್ಞರು ಕಂಪನಿ ಬಗ್ಗೆ ಚಕಾರ ಎತ್ತುತ್ತಿದ್ದರೂ ಪರಿಸರ ನಿರ್ವಹಣಾ ವ್ಯವಸ್ಥೆಯೇ ಈ ಪ್ರಮಾಣ ಪತ್ರ ನೀಡಿರುವುದು ವಿಚಿತ್ರವೋ, ವಿಶೇಷವೋ ತಿಳಿಯುತ್ತಿಲ್ಲ.
ಪರಿಸರ ಸಂರಕ್ಷಣೆಗೆ ಒತ್ತು ಕೊಟ್ಟು, ಕೈಗೊಳ್ಳಬೇಕಾದ ಅಗತ್ಯ ಕ್ರಮಗಳು, ಉತ್ಪಾದನಾ ವ್ಯವಸ್ಥೆ ಯಲ್ಲಿ ಸುಧಾರಣೆ ಮೊದಲಾದ ವಿಷಯಗಳಿಗೆ ಕಂಪನಿ ಉತ್ತಮ ರೀತಿಯಲ್ಲಿ ಗಮನ ವಹಿಸಿದ್ದಕ್ಕೇ ಈ ಪ್ರಮಾಣ ಪತ್ರ ಸಂದಿದೆ. ನೆದರ್ಲ್ಯಾಂಡ್ಸ್ನ ಆರ್ವಿಎ ಈ ಪ್ರಮಾಣ ಪತ್ರವನ್ನು ಪ್ರಕಟಿಸಿದೆ ಎಂದು ಅಲ್ಲಿನ ಪ್ರಶಸ್ತಿ ಆಯ್ಕೆ ಸಮಿತಿಯ ಡೆಟ್ ನಾರ್ಸ್ಕೆ ವೆರಿಟಾಸ್ ತಿಳಿಸಿದ್ದಾರೆ.
ಅಂದ ಹಾಗೆ ಪರಿಸರ ಸಮಿತಿ ಕಂಪನಿಗೆ ಒಲಿಯುತ್ತಿರುವುದು ಇದೇ ಮೊದಲಲ್ಲ. 1999- 2000ನೇ ಸಾಲಿನ ಪರಿಸರ ಪ್ರಶಸ್ತಿಯೂ ಇದೇ ಕಂಪನಿಗೆ ಲಭಿಸಿತ್ತು.
(ಇನ್ಫೋ ವಾರ್ತೆ/ಯುಎನ್ಐ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...