Get Updates
Get notified of breaking news, exclusive insights, and must-see stories!

ದ್ರಾವಿಡ್‌ ನಾಯಕತ್ವದ ಮೊದಲ ಪಂದ್ಯದಲ್ಲೇ ಭಾರತಕ್ಕೆ ಜಯ

ರಾಜ್‌ಕೋಟ್‌ : ಕರ್ನಾಟಕದ ಹುಡುಗನ ನಾಯಕತ್ವದಲ್ಲಿ ಭಾರತ ಕ್ರಿಕೆಟ್‌ ತಂಡ ಮೊದಲ ಒಂದು ದಿನದ ಪಂದ್ಯ ಗೆಲ್ಲುವ ಮೂಲಕ ಜಿಂಬಾಬ್ವೆ ವಿರುದ್ಧದ ಪೆಪ್ಸಿ ಕಪ್‌ ಸರಣಿ ಯನ್ನು 4-1ರಲ್ಲಿ ಗೆದ್ದುಕೊಂಡಿತು.

302 ರನ್‌ಗಳ ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಜಿಂಬಾಬ್ವೆ ಉತ್ತಮ ಆರಂಭ ನೀಡಿತಾದರೂ, ದೊಡ್ಡ ದಾರಿಯ ನಡು ನಡುವೆ ವಿಕೆಟ್‌ ಕಳೆದುಕೊಂಡಿತು. ಕೊನೆಗೆ ಅದು ಮುಟ್ಟಲಾಗಿದ್ದು 262 ರನ್‌ಗಳನ್ನು . ಪರಿಣಾಮ ಭಾರತಕ್ಕೆ 39 ರನ್‌ಗಳ ಜಯ.

ಭಾರತದ ಪರ ದಾಖಲೆ ಆಟವಾಡಿದ ಅಜಿತ್‌ ಅಗರ್ಕರ್‌ (25 ಎಸೆತಗಳಲ್ಲಿ 67 ರನ್‌) 3 ವಿಕೆಟ್‌ಗಳನ್ನೂ ಕಿತ್ತು ಪಂದ್ಯ ಪುರುಷೋತ್ತಮ ಹಾಗೂ ಟೂರ್ನಿಯ ಅತ್ಯಂತ ಪ್ರಮುಖ ಆಟಗಾರ ಗೌರವಗಳಿಗೆ ಪಾತ್ರರಾದರು. ಈ ಪಂದ್ಯದಿಂದ ಅಮಾನತುಗೊಂಡಿದ್ದ ಸೌರವ್‌ ಗಂಗೂಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಜಿಂಬಾಬ್ವೆ ಪರ ಮೆಡಾಂಡೋ 70 ಎಸೆತಗಳಲ್ಲಿ 71 (10 ಬೌಂಡರಿ, 1 ಸಿಕ್ಸರ್‌), ಮ್ಯಾರಿಲಿಯರ್‌ 38, ಕ್ಯಾಂಬೆಲ್‌ 23 ಹಾಗೂ ಆ್ಯಂಡಿ ಫ್ಲಾವರ್‌ 19 ರನ್‌ ಗಳಿಸಿದರು. ಭಾರತದ ಪರ ಅಗರ್ಕರ್‌ಗೆ 3, ಶ್ರೀರಾಮ್‌- ಸೋದಿ- ಸೆಹವಾಗ್‌ಗೆ ತಲಾ 2 ಹಾಗೂ ಪ್ರಸಾದ್‌ಗೆ 1 ವಿಕೆಟ್‌ ಸಿಕ್ಕಿತು.

(ಇನ್ಫೋ ವಾರ್ತೆ)

ಮುಖಪುಟ / ಆಟದ ಅಂಗಳ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+