ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಕೋಟ್ ಪಂದ್ಯದಿಂದ ಸೌರವ್ ಗಂಗೂಲಿ ಅಮಾನತು
ರಾಜ್ಕೋಟ್ : ಗುರುವಾರ ಇಲ್ಲಿ ನಡೆಯುವ ಪೆಪ್ಸಿ ಕಪ್ನ ಜಿಂಬಾಬ್ವೆ ವಿರುದ್ಧದ 5ನೇ ಹಾಗೂ ಕೊನೆಯ ಪಂದ್ಯದಲ್ಲಿ ಗಂಗೂಲಿ ಆಡುವಂತಿಲ್ಲ. ಕಾನ್ಪುರದಲ್ಲಿ ನಡೆದ ಕಳೆದ ಪಂದ್ಯದಲ್ಲಿ ಅಂಪೈರ್ ತೀರ್ಪಿಗೆ ಬದ್ಧರಾಗದೆ, ಅತಿಯಾಗಿ ವರ್ತಿಸಿದ್ದಕ್ಕೆ ಪಂದ್ಯದ ರೆಫರಿ ಬ್ಯಾರಿ ಜರ್ಮನ್ ಗಂಗೂಲಿ ಅವರನ್ನು ಒಂದು ಪಂದ್ಯದಿಂದ ಅಮಾನತ್ತುಗೊಳಿಸಿದ್ದಾರೆ.
ಸೋಮವಾರ ನಡೆದ ಪಂದ್ಯದ ವೇಳೆ ಅಂಪೈರ್ ನಿರ್ಣಯ ಕುರಿತು ಸೊಲ್ಲೆತ್ತಿ ತೀವ್ರ ಪ್ರತಿಭಟನೆ ಪ್ರಕಟಪಡಿಸಿದ್ದ ಗಂಗೂಲಿ ಹಾಗೂ ವಿಕೆಟ್ ಕೀಪರ್ ದಾಹಿಯಾ ಅವರ ವಿಚಾರಣೆ ನಡೆಸಿದ ಐಸಿಸಿಐ ನೇಮಿಸಿರುವ ಆಸ್ಟ್ರೇಲಿಯಾದ ಜರ್ಮನ್ ಮಂಗಳವಾರ ಈ ನಿರ್ಣಯವನ್ನು ತಿಳಿಸಿದ್ದಾರೆ. ಗಂಗೂಲಿ ಅವರಷ್ಟು ತೀವ್ರ ತೆರನಾಗಿ ಪ್ರತಿಭಟನೆ ವ್ಯಕ್ತಪಡಿಸದ ಕಾರಣ ದಾಹಿಯಾ ಅವರನ್ನು ಕ್ಷಮಿಸಿದ್ದಾರೆ.
(ಇನ್ಫೋ ವಾರ್ತೆ)
Comments
Story first published: Sunday, December 24, 2000, 5:30 [IST]