ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಬ್‌ಸೈಟ್‌ವಿಷಯಾಧಾರಿತ ಅಪಪ್ರಚಾರಕ್ಕೆ ನೆಡುಮಾರನ್‌ ಕಿಡಿ

By Staff
|
Google Oneindia Kannada News

ಚನ್ನೈ: ಅಸ್ತಿತ್ವದಲ್ಲಿಲ್ಲದ ತಮಿಳುನಾಡು ವಿಮೋಚನಾರಂಗದ ಹೆಸರಿನಲ್ಲಿರುವ ವೆಬ್‌ ಸೈಟ್‌ಗಳ ಸುದ್ದಿ ಆಧರಿಸಿ ತಮಿಳು ರಾಷ್ಟ್ರೀಯತೆಯ ಭಾವನೆಯನ್ನು ಹಗುರವಾಗಿ ಕಾಣಲಾಗುತ್ತಿದೆ ಎಂದು ತಮಿಳು ರಾಷ್ಟ್ರೀಯವಾದಿ ಚಳುವಳಿಯ ನಾಯಕ ಪಿ. ನೆಡುಮಾರನ್‌ ಸೋಮವಾರ ಕಿಡಿ ಕಾರಿದ್ದಾರೆ.

ಈ ಸಂಬಂಧ ಎಐಎಡಿಎಂಕೆ ಮತ್ತು ಕಾಂಗ್ರೆಸ್‌ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿರುವ ನೆಡುಮಾರನ್‌, ವೀರಪ್ಪನ್‌ ಜೊತೆಗೆ ಕೈಜೋಡಿಸಿರುವುದು ತಮಿಳುನಾಡು ವಿಮೋಚನಾ ಸೇನೆಯೇ ಹೊರತು, ವೈಬ್‌ ಸೈಟಗಳನ್ನು ಆರಂಭಿಸಿರುವ ತಮಿಳುನಾಡು ವಿಮೋಚನಾ ರಂಗ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹುರುಳಿಲ್ಲ : ಕೇರಳ ಹಾಗೂ ಕರ್ನಾಟಕದ ಪ್ರದೇಶಗಳನ್ನೊಳಗೊಂಡ ವಿಶೇಷ ತಮಿಳುನಾಡಿಗಾಗಿ ತಮಿಳು ಪ್ರತ್ಯೇಕತಾವಾದಿಗಳು ಹೋರಾಡುತ್ತಿದ್ದಾರೆ ಎಂದು ಎಐಎಡಿಎಂಕೆ ನಾಯಕಿ ಜಯಲಲಿತಾ ಮತ್ತು ಕಾಂಗ್ರೆಸ್‌ ನಾಯಕ ಇ.ವಿ.ಕೆ.ಎಸ್‌ ಇಳಾಂಗೋವನ್‌ ತೊಡಗಿದ್ದಾರೆಂದು ನೆಡುಮಾರನ್‌ ಆಪಾದಿಸಿದ್ದಾರೆ. ದ್ರಾವಿಡ ಮತ್ತು ದಲಿತ ಪಕ್ಷಗಳಿಗೆ ಮತ ನೀಡಬೇಕೆಂದು ದಲಿತಸ್ಥಾನ್‌ ವೆಬ್‌ ಪೇಜ್‌ ಕರೆ ನೀಡಿದೆ, ಇದು ತಮಿಳು ತಂಡದ ಹೆಸರಿನಲ್ಲಿ ಇಲ್ಲ. ಹೀಗಿದ್ದರೂ ಡಿಎಂಕೆಗೆ ಮತ ಹಾಕಬೇಕೆಂದು ವೆಬ್‌ಸೈಟ್‌ನಲ್ಲಿ ಪ್ರಚಾರ ಮಾಡಲಾಗುತ್ತಿದೆ ಎಂಬ ಅಪಪ್ರಚಾರದಲ್ಲಿ ಎಐಎಡಿಎಂಕೆ ಮತ್ತು ಕಾಂಗ್ರೆಸ್‌ ಪಕ್ಷಗಳು ತೊಡಗಿವೆ. ಆ ವೆಬ್‌ಸೈಟ್‌ಗಳಲ್ಲಿ ಪ್ರಕಟವಾಗಿರುವ ಗೆರಿಲ್ಲಾ ಯುದ್ದತಂತ್ರ ಮುಂತಾದ ವಿಚಾರಗಳು ತಮಿಳು ತಂಡಗಳಿಗೆ ಸಂಬಂಧಿಸಿಲ್ಲ ಎಂದು ನೆಡುಮಾರನ್‌ ಹೇಳಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X