ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಳಗಾವಿ : ಕಲುಷಿತ ನೀರು ಕುಡಿದು ಒಂದು ಸಾವು, ನೂರಾರು ಜನ ಅಸ್ವಸ್ತ
ಬೆಳಗಾವಿ : ಕೃಷ್ಣಾ ನದಿಯ ಕಲುಷಿತ ನೀರು ಕುಡಿದು ಒಬ್ಬ ಸತ್ತು, ನೂರಾರು ಜನ ಅಸ್ವಸ್ತಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನಲ್ಲಿ ನಡೆದಿದೆ.
ತಾಲ್ಲೂಕಿನ ಎಕ್ಸಂಬಾ ಗ್ರಾಮದ 39 ಮಂದಿ ಹಾಗೂ ಖೋತವಾಡಿಯ 50 ಜನ ತೀವ್ರವಾಗಿ ಅಸ್ವಸ್ತರಾಗಿದ್ದಾರೆ. ಈ ಎರಡೂ ಗ್ರಾಮಗಳಲ್ಲಿ ಕಳೆದ ಒಂದು ವಾರದಿಂದ ಜನರು ಅಸ್ವಸ್ತಗೊಳ್ಳುತ್ತಿದ್ದು, ಎಕ್ಸಂಬಾ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. 38 ಜನ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ತಿಳಿದು ಬಂದಿದೆ.
ತಾಲ್ಲೂಕಿನ ಕಲ್ಲೋಳ ಹತ್ತಿರ ಬ್ಯಾರೇಜ್ ನಿರ್ಮಿಸಿ ದೂದಗಂಗಾ ನದಿಗೆ ನೀರು ಪೂರೈಸಲಾಗುತ್ತಿದೆ. ಬ್ಯಾರೇಜೀನಲ್ಲಿ ಒಂದು ತಿಂಗಳಿನಿಂದ ಸಂಗ್ರಹಿಸಲಾದ ನೀರನ್ನು ಎಕ್ಸಂಬಾ ಗ್ರಾಮಕ್ಕೆ ಕುಡಿಯಲು ಪೂರೈಸಲಾಗುತ್ತಿದೆ. ಅಂಕಲಿ ಹತ್ತಿರದ ಖೋತವಾಡಿಯಲ್ಲಿಯೂ ಕೂಡಾ ಸುಮಾರು 50 ಜನ ಅಸ್ವಸ್ತಗೊಂಡಿದ್ದಾರೆ.
Comments
Story first published: Sunday, December 24, 2000, 5:30 [IST]