ಪುಣೆಯಲ್ಲಿನ ಓಶೋ ಆಶ್ರಮಕ್ಕೆ ಶಿಷ್ಯರಪ್ರವೇಶ ನಿರ್ಬಂಧಕ್ಕೆ ಆಕ್ಷೇಪ
ನವದೆಹಲಿ : ಪುಣೆಯಲ್ಲಿನ ಓಶೋ ಆಶ್ರಮ ಪ್ರವೇಶಕ್ಕೆ ತಮಗೆ ನಿರ್ಬಂಧ ವಿಧಿಸಿರುವುದನ್ನು ಪ್ರತಿಭಟಿಸಿ ಕೆಲವು ಓಶೋ ಅನುಯಾಯಿಗಳು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.
ಓಶೋ ಜನ್ಮ ದಿನಾಚರಣೆ ಅಂಗವಾಗಿ ವಾರದಿಂದ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಓಶೋ ಜನ್ಮದಿನವಾದ ಸೋಮವಾರ (ಇಂದು) ಮುಕ್ತಾಯಗೊಳ್ಳಿದ್ದು, ಇದೇ ಸಂದರ್ಭದಲ್ಲಿ ಓಶೋ ಇಂಟರ್ನ್ಯಾಷನಲ್ ಫೌಂಡೇಶನ್ ವಿರುದ್ಧ ದೂರು ದಾಖಲಾಗಿದೆ. ಓಶೋ ಶ್ರಮದ ವಾರಸುದಾರರೆಂದು ಸ್ವತಃ ಕರೆದುಕೊಂಡಿರುವ ಆರು ಮಂದಿ ವ್ಯಕ್ತಿಗಳು ನ್ಯೂಯಾರ್ಕ್ನಿಂದ ಆಶ್ರಮವನ್ನು ನಿಯಂತ್ರಿಸುತ್ತಿದ್ದಾರೆ. ಅವರು ತಮಗೆ ಆಶ್ರಮ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದಾರೆ. ಇದನ್ನು ತಗೆಸಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.
ಭಾರತದಲ್ಲಿರುವ ಓಶೋ ಅಶ್ರಮಗಳನ್ನು, ನ್ಯೂಯಾರ್ಕ್ನಿಂದ ನಿಯಂತ್ರಿಸುತ್ತಿರುವ ಜ್ಯೂರಿಚ್ ಮೂಲದ ಓಶೋ ಇಂಟರ್ನ್ಯಾಷನಲ್ ಫೌಂಡೇಷನ್ ವಿರುದ್ಧ ಮಾಧ್ಯಮಗಳ ಮೂಲಕ ದ್ವನಿ ಎತ್ತಿದ್ದಕ್ಕಾಗಿ ಆಶ್ರಮ ಪ್ರವೇಶವನ್ನು ನಿರಾಕರಿಸಲಾಗಿದೆ ಎಂದು ಓಶೋ ಸನ್ಯಾಸಿ ಸ್ವಾಮಿ ಚೈತನ್ಯ ಕೀರ್ತಿ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಜೆ. ಎಸ್. ವರ್ಮಾ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಜುಲೈನಿಂದ ಪ್ರವೇಶ ನಿಷೇಧ : ತಾವು 1971ರಿಂದಲೂ ಓಶೋ ಅವರ ಅನುಯಾಯಿಯಾಗಿದ್ದು, ಆಶ್ರಮ ಪ್ರಾರಂಭವಾದಾಗಿನಿಂದಲೂ ಪುಣೆಯಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ ತತ್ವಗಳ ಪ್ರಸಾರಕ್ಕೆ ಸಂಬಂಧಿಸಿದಂತೆ ಪುಸ್ತಕಗಳ ಸಂಪಾದನೆ, ಪ್ರಕಟಣೆಗಳನ್ನು ನೋಡಿಕೊಳ್ಳಲು ಓಶೋ ಅವರೇ ತಮ್ಮನ್ನು ನೇಮಿಸಿದ್ದರು. ತಾವು ವಿದೇಶ ಪ್ರವಾಸದಿಂದ ವಾಪಸ್ಸಾದ ನಂತರ ಕಳೆದ ಜುಲೈನಿಂದ ತಮಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಚೈತನ್ಯ ಕೀರ್ತಿ ವಿವರಿಸಿದ್ದಾರೆ. 1987ರಲ್ಲಿ ಪುಣೆಯಲ್ಲಿ ಆಶ್ರಮ ಸ್ಥಾಪಿಸಿದ ಓಶೋ 1990 ಜನವರಿಯಲ್ಲಿ ಕೊನೆಯುಸಿರೆಳೆಯುವವರೆಗೆ ಅಲ್ಲಿಯೇ ವಾಸವಾಗಿದ್ದುದನ್ನು ಸ್ಮರಿಸಬಹುದು.
ಈ ಮಧ್ಯೆ ಜ್ಯೂರಿಚ್ ಮೂಲದ ಓಶೋ ಇಂಟರ್ನ್ಯಾಷನಲ್ ಫೌಂಡೇಷನ್ ಕೂಡಾ, ಭಾರತೀಯ ಮೂಲದ ಓಶೋ ಶಿಷ್ಯರು ಓಶೋವರ್ಲ್ಡ್ ಎಂಬ ವೆಬ್ ಸೈಟ್ ಮೂಲಕ ತನ್ನ ಮೇಲೆ ನಿಯಂತ್ರಣ ಸಾಧಿಸಲು ಯತ್ನಿಸುತ್ತಿದ್ದಾರೆ. ಓಶೋ ಬರೆದಿರುವ ಎಲ್ಲ ಪುಸ್ತಕಗಳ ಕಾಪಿರೈಟ್ ತನಗೆ ಸೇರಿದ್ದು ಎಂದು ಅಮೆರಿಕದಲ್ಲಿ ಮೊಕದ್ದಮೆ ದಾಖಲಿಸಿದೆ.
(ಯುಎನ್ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications