ತಿರುಪತಿ, ಕೊಲ್ಲಾಪುರಕ್ಕೆ ಕೆಎಸ್ಸಾರ್ಟಿಸಿ ಹೈಟೆಕ್ ಬಸ್ಸಂಚಾರ ಆರಂಭ
ಬೆಂಗಳೂರು : ಬೆಂಗಳೂರಿನಿಂದ ತಿರುಪತಿ ಹಾಗೂ ಕೊಲ್ಲಾಪುರ ನಡುವೆ ಕರ್ನಾಟಕ ರಾಜ್ಯ ಸಾರಿಗೆ ನಿಗಮದ ಪಿ -5000 ಮಾದರಿಯ ಅಲ್ಟ್ರಾ ಡಿಲಕ್ಸ್ ಬಸ್ಗಳ ಸಂಚಾರ ಆರಂಭವಾಗಿದೆ.
ದೂರ ಪ್ರಯಾಣದಲ್ಲಿ ಪ್ರಯಾಣಿಕರಿಗೆ ತೊಂದರೆ ಆಗದಂತೆ ವಿಶೇಷ ವ್ಯವಸ್ಥೆಗಳಿರುವ ಈ ಬಸ್ಗಳಲ್ಲಿ ಆರಾಮವಾಗಿ ಕುಳಿತುಕೊಳ್ಳಲು ಹಾಗೂ ಕಾಲು ಚಾಚಲು ಸೂಕ್ತ ಸ್ಥಳಾವಕಾಶ ಕಲ್ಪಿಸಲಾಗಿದೆ. ಬೆಂಗಳೂರಿನಿಂದ ಕೊಲ್ಲಾಪುರಕ್ಕೆ ಹೊರಡುವ ಈ ಬಸ್ ದಾವಣಗೆರೆ, ಹುಬ್ಬಳ್ಳಿ ಮತ್ತು ಬೆಳಗಾವಿ ಮಾರ್ಗವಾಗಿ ಕೊಲ್ಲಾಪುರ ತಲುಪಲಿದೆ.
ಬೆಂಗಳೂರಿನಿಂದ ರಾತ್ರಿ 8-15ಕ್ಕೆ ಹೊರಡುವ ಬಸ್ ಕೊಲ್ಲಾಪುರವನ್ನು ಬೆಳಗ್ಗೆ 9-15ಕ್ಕೆ ತಲುಪುತ್ತದೆ. ಮತ್ತೆ ಕೊಲ್ಲಾಪುರದಿಂದ ಮಧ್ಯಾಹ್ನ 3-45ಕ್ಕೆ ಬಿಡುವ ಬಸ್ ಬೆಂಗಳೂರಿಗೆ ಬೆಳಗ್ಗೆ 5-15ಕ್ಕೆ ತಲುಪಲಿದೆ. ಪ್ರಯಾಣ ದರ 326 ರುಪಾಯಿಗಳು.
ಬೆಂಗಳೂರು ಹಾಗೂ ತಿರುಪತಿ ಮಾರ್ಗದಲ್ಲಿ ಸಂಚರಿಸುವ ಬಸ್ ಕೋಲಾರ, ಮುಳಬಾಗಲು ಹಾಗೂ ಚಿತ್ತೂರು ಮಾರ್ಗವಾಗಿ ತಿರುಪತಿ ತಿಮ್ಮಪ್ಪನ ಊರಿಗೆ ಸಾಗುತ್ತದೆ. ಬೆಂಗಳೂರಿನಿಂದ ಬೆಳಗ್ಗೆ 7-30ಕ್ಕೆ ಹೊರಡುವ ಬಸ್ ಮಧ್ಯಾಹ್ನ 12.45ಕ್ಕೆ ತಿರುಪತಿ ತಲುಪಿದರೆ, ಬೆಳಗ್ಗೆ 10 ಗಂಟೆಗೆ ಬೆಂಗಳೂರು ಬಿಡುವ ಬಸ್ ಮಧ್ಯಾಹ್ನ 3-15ಕ್ಕೆ ತಿರುಪತಿ ತಲುಪಲಿದೆ.
ಅಂತೆಯೇ ಮಧ್ಯಾಹ್ನ 12ಕ್ಕೆ ತಿರುಪತಿಯಿಂದ ಹೊರಡುವ ಬಸ್ ಸಂಜೆ 5ಕ್ಕೂ ಹಾಗೂ ಸಂಜೆ 5 ಗಂಟೆಗೆ ಹೊರಡುವ ಬಸ್ ರಾತ್ರಿ 10-15ಕ್ಕೂ ಬೆಂಗಳೂರಿಗೆ ಮರಳಲಿದೆ. ಪ್ರಯಾಣ ದರ 133 ರುಪಾಯಿಗಳು.
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...