Get Updates
Get notified of breaking news, exclusive insights, and must-see stories!

ರಾಮ ಮಂದಿರ : ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಲು ಪ್ರಧಾನಿಗೆ ಟಿಡಿಪಿ ಗಡುವು

ಹೈದರಾಬಾದ್‌ : ರಾಮ ಮಂದಿರ ನಿರ್ಮಾಣದ ಕುರಿತು ಪ್ರಧಾನಿ ವಾಜಪೇಯಿಯವರು ತಮ್ಮ ಇತ್ತೀಚಿನ ವಿವಾದಾಸ್ಪದ ಹೇಳಿಕೆಯ ಬಗ್ಗೆ ಸೋಮವಾರದೊಳಗೆ ಸ್ಪಷ್ಟನೆ ನೀಡಬೇಕು ಎಂದು ಎನ್‌ಡಿಎಯ ಪ್ರಮುಖ ಪಾಲುದಾರ ಪಕ್ಷ ತೆಲುಗುದೇಶಂ(ಟಿಡಿಪಿ) ಸಂಸದೀಯ ಪಕ್ಷದ ಸಭೆ ಒತ್ತಾಯಿಸಿದೆ.

ರಾಮ ಮಂದಿರ ನಿರ್ಮಾಣದ ಕುರಿತು ರಾಷ್ಟ್ರೀಯ ಪ್ರಜಾ ಸತ್ತಾತ್ಮಕ ಒಕ್ಕೂಟದ(ಎನ್‌ಡಿಎ) ಸಾಮಾನ್ಯ ಕನಿಷ್ಠ ಕಾರ್ಯಕ್ರಮಕ್ಕೆ ವಿರುದ್ಧವಾಗಿ ನಡೆಯದಂತೆ ವಾಜಪೇಯಿ ಸರ್ಕಾರಕ್ಕೆ ತೆಲುಗುದೇಶಂ ಎಚ್ಚರಿಕೆ ನೀಡಿದೆ. ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಂಸದೀಯ ಪಕ್ಷದ ಸಭೆಯು ಈ ನಿರ್ಣಯ ಕೈಗೊಂಡಿದೆ. ವಿವಾದಿತ ಸ್ಥಳದಲ್ಲಿ ದೇಗುಲ ನಿರ್ಮಿಸುವ ಕುರಿತಂತೆ ಪ್ರಧಾನಿಯವರ ಹೇಳಿಕೆಗಳು ಗೊಂದಲ ಹುಟ್ಟಿಸುವಂತಿವೆ, ಅವರು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಸಭೆ ಒತ್ತಾಯಿಸಿತು.

ನಾವು ಎನ್‌ಡಿಎಯ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ನೀತಿಗೆ ಈಗಲೂ ಬದ್ಧರಾಗಿದ್ದೇವೆ. ಅದರ ವಿರುದ್ಧ ಸರ್ಕಾರ ವರ್ತಿಸುವುದು ಗಂಭೀರ ಪರಿಣಾಮಕ್ಕೆ ಎಡೆ ಮಾಡಿಕೊಡುತ್ತದೆ ಎಂದು ಸಭೆ ಒತ್ತಾಯಿಸಿತು. ದೇಗುಲ ನಿರ್ಮಾಣವು ರಾಷ್ಟ್ರೀಯತೆಯ ಪ್ರತೀಕ ಎನ್ನುವ ಪ್ರಧಾನಿಯವರ ಹೇಳಿಕೆ ತೀರಾ ಅನಗತ್ಯವಾದುದು ಎಂದು ಸಭೆ ಅಭಿಪ್ರಾಯಪಟ್ಟ ಸಭೆ, ಸಂಪುಟದಲ್ಲಿ ಭಾಗಿಯಾಗದೆ ಹೊರಗಿನಿಂದ ಬೆಂಬಲನೀಡುವ ತನ್ನ ನಿರ್ಧಾರವನ್ನು ಬದಲಿಸದಿರಲು ನಿರ್ಧರಿಸಿತು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+