ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯ ಭವಿಷ್ಯ

By Staff
|
Google Oneindia Kannada News

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ಇರುವುದೆಲ್ಲವ ಬಿಟ್ಟು ಇರುದುದರೆಡೆಗೆ ತುಡಿವುದೆ ಜೀವನ ಅನ್ನುವ ಮಾತು ನಿಮಗೆ ಗೊತ್ತಿಲ್ಲದ್ದೇನೂ ಅಲ್ಲ . ನೆಮ್ಮದಿಯ ನಾಳೆಗಾಗಿ ನೀವು ಆಕಾಶಕ್ಕೆ ಕೈ ಚಾಚಬೇಕಾದ ಅಗತ್ಯವೇನೂ ಇಲ್ಲ .

ವೃಷಭ : ಖುಷಿಯ ಲಹರಿ ಮುಂದುವರಿಯಲಿದೆ. ಒಲಿದ ಜೀವ ಜೊತೆಯಲಿರಲು ಬಾಳು ಸುಂದರ ಅನ್ನುವಂತೆ ನೀವು ಜೋಡಿಯಾಗುವ ಕಾಲದ ಶುಭ ಸೂಚನೆ ಇಂದು ಕಾಣುತ್ತೀರಿ.

ಮಿಥುನ : ನೀನೆ ನನ್ನ ಜೀವ ಎಂದು ನೀವು ನಂಬಿರುವುದು ನಿಮ್ಮ ಪ್ರೀತಿಯ ನಿರ್ಮಲತೆಯನ್ನು ಸೂಚಿಸುತ್ತದೆ. ಆದರೆ, ಅವರೂ ನಿಮ್ಮಂತೆ ಏನಲ್ಲ . ಕೆಂಪು ಗುಲಾಬಿಗೆ ಕೈ ಒಡ್ಡುವ ಮುನ್ನ ಯೋಚಿಸಿ.

ಕಟಕ : ಆರೋಗ್ಯ ಮತ್ತೆ ಕೈ ಕೊಡುತ್ತಿದೆ. ದೇಹಸ್ಥಿತಿಗೂ ಗ್ರಹಗತಿಗೂ ಗಂಟು ಹಾಕುವುದು ಬೇಡ. ದೇಹವೇ ದೇಗುಲ ಎನ್ನುವುದನ್ನು ಇನ್ನಾದರೂ ಅರ್ಥ ಮಾಡಿಕೊಂಡಲ್ಲಿ ಆಸ್ಪತ್ರೆಯಿಂದ ದೂರವಿರುತ್ತೀರಿ.

ಸಿಂಹ : ಸಂಜೆ ಷಾಪಿಂಗ್‌ ಹವೆ ನಿಮ್ಮೀ ದಿನದಲ್ಲಿದೆ. ದಣಿದ ಮನಸ್ಸನ್ನು ಹಗುರಾಗಿಸಿಕೊಳ್ಳಲು ಸದ್ಯಕ್ಕೆ ಇದಕ್ಕಿಂಥಾ ಉತ್ತಮ ಅವಕಾಶ ನಿಮಗೆ ಸಿಕ್ಕುವುದು ಕಷ್ಟ.

ಕನ್ಯಾ : ಸರಸ್ವತಿಯಾಗುವ ಸಮಯ ಸನ್ನಿಹಿತವಾಗಿದೆ. ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವವರು ನೀವಲ್ಲವಾದ್ದರಿಂದ ಸುಮ್ಮನೆ ಉದ್ವೇಗ ಬೇಡ. ಈ ದಿನ ನಿಮ್ಮ ಎಲ್ಲಾ ಪ್ರಯತ್ನಗಳು ಯಶಸ್ವಿಯಾಗುತ್ತವೆ.

ತುಲಾ : ಮಾತು ಬಂಗಾರ ಜಾತಿಯವರು ನೀವು. ಅವರು ನಿಮ್ಮನ್ನು ಅರ್ಥ ಮಾಡಿಕೊಳ್ಳದಿರುವುದಕ್ಕೆ ಇದೂ ಪ್ರಮುಖ ಕಾರಣವಿದ್ದೀತು. ಈ ದಿನ ನಿಮ್ಮ ಮನಸ್ಸನ್ನು ಅವರಲ್ಲಿ ಹಂಚಿಕೊಳ್ಳಬಾರದೇಕೆ.

ವೃಶ್ಚಿಕ : ಮನೆ ಮಂದಿಯನ್ನು ನೆನಪಿಸಿಕೊಳ್ಳುವ ಮುಹೂರ್ತ ಕೂಡಿ ಬಂದಿದೆ. ನೀವು ಬಿಜಿಯಾಗಿದ್ದೀರಿ ಅನ್ನುವುದು ಪೂರ್ಣಸತ್ಯವೇನಲ್ಲ , ಅಲ್ಲವೇ?

ಧನಸ್ಸು : ನೀವು ಹೆತ್ತವರನ್ನು ದೂರುವಂತೆ ನಿಮ್ಮ ಮಕ್ಕಳು ನಿಮ್ಮನ್ನು ದೂರಬಾರದಲ್ಲವೆ ! ಉಳಿತಾಯದ ಯೋಜನೆಗಳನ್ನು ಪಕ್ಕಕ್ಕಿರಿಸಬೇಡಿ. ಈ ಸಂಬಂಧ ಮನದನ್ನೆ ನೀಡುವ ಸಲಹೆಗಳನ್ನು ಮಾನ್ಯ ಮಾಡುವುದು ಒಳ್ಳೆಯದು.

ಮಕರ : ಮತ್ತೆ ಕಾಲಿಗೆ ಚಕ್ರ ಕಟ್ಟಿಕೊಳ್ಳುವ ಹೊತ್ತು ಬಂದಿದೆ. ಇಂದಿನ ತಿರುಗಾಟದಲ್ಲಿ ನಿಮ್ಮ ಸ್ವ ಹಿತಾಸಕ್ತಿಯೂ ಅಡಗಿರುವುದರಿಂದ ಬೇಸರ ಬೇಡ.

ಕುಂಭ : ಪ್ರಾರ್ಥನೆ, ದೇವರು ಎಂದು ಏಸು ಕಾಲವಾಯಿತು. ಈ ದಿನ ಒಮ್ಮೆಗೇ ಮನಸ್ಸು ಅಧ್ಯಾತ್ಮದತ್ತ ಹೊರಳಿದರೆ ಅದಕ್ಕೆ ನಿಮ್ಮ ಕೆಲಸದ ಒತ್ತಡವೇ ಕಾರಣ.

ಮೀನ : ಹೆಂಡತಿಯಾಂದಿಗೆ ಮನಸ್ತಾಪ. ಮನೆಯಲ್ಲಿ ನೆಮ್ಮದಿ ಕಳವು. ನಿಮ್ಮ ದುಡುಕಿಗೆ ನಿಮ್ಮನ್ನೇ ದೂರಿಕೊಳ್ಳಿ. ಮನಸ್ತಾಪಗಳೇನೇ ಇದ್ದರೂ ನಿಮ್ಮ ಒಳ್ಳೆಯತನ ಅವರಿಗೆ ಅರ್ಥವಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X