ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಇರುವುದೆಲ್ಲವ ಬಿಟ್ಟು ಇರುದುದರೆಡೆಗೆ ತುಡಿವುದೆ ಜೀವನ ಅನ್ನುವ ಮಾತು ನಿಮಗೆ ಗೊತ್ತಿಲ್ಲದ್ದೇನೂ ಅಲ್ಲ . ನೆಮ್ಮದಿಯ ನಾಳೆಗಾಗಿ ನೀವು ಆಕಾಶಕ್ಕೆ ಕೈ ಚಾಚಬೇಕಾದ ಅಗತ್ಯವೇನೂ ಇಲ್ಲ .ವೃಷಭ : ಖುಷಿಯ ಲಹರಿ ಮುಂದುವರಿಯಲಿದೆ. ಒಲಿದ ಜೀವ ಜೊತೆಯಲಿರಲು ಬಾಳು ಸುಂದರ ಅನ್ನುವಂತೆ ನೀವು ಜೋಡಿಯಾಗುವ ಕಾಲದ ಶುಭ ಸೂಚನೆ ಇಂದು ಕಾಣುತ್ತೀರಿ.
ಮಿಥುನ : ನೀನೆ ನನ್ನ ಜೀವ ಎಂದು ನೀವು ನಂಬಿರುವುದು ನಿಮ್ಮ ಪ್ರೀತಿಯ ನಿರ್ಮಲತೆಯನ್ನು ಸೂಚಿಸುತ್ತದೆ. ಆದರೆ, ಅವರೂ ನಿಮ್ಮಂತೆ ಏನಲ್ಲ . ಕೆಂಪು ಗುಲಾಬಿಗೆ ಕೈ ಒಡ್ಡುವ ಮುನ್ನ ಯೋಚಿಸಿ.
ಕಟಕ : ಆರೋಗ್ಯ ಮತ್ತೆ ಕೈ ಕೊಡುತ್ತಿದೆ. ದೇಹಸ್ಥಿತಿಗೂ ಗ್ರಹಗತಿಗೂ ಗಂಟು ಹಾಕುವುದು ಬೇಡ. ದೇಹವೇ ದೇಗುಲ ಎನ್ನುವುದನ್ನು ಇನ್ನಾದರೂ ಅರ್ಥ ಮಾಡಿಕೊಂಡಲ್ಲಿ ಆಸ್ಪತ್ರೆಯಿಂದ ದೂರವಿರುತ್ತೀರಿ.
ಸಿಂಹ : ಸಂಜೆ ಷಾಪಿಂಗ್ ಹವೆ ನಿಮ್ಮೀ ದಿನದಲ್ಲಿದೆ. ದಣಿದ ಮನಸ್ಸನ್ನು ಹಗುರಾಗಿಸಿಕೊಳ್ಳಲು ಸದ್ಯಕ್ಕೆ ಇದಕ್ಕಿಂಥಾ ಉತ್ತಮ ಅವಕಾಶ ನಿಮಗೆ ಸಿಕ್ಕುವುದು ಕಷ್ಟ.
ಕನ್ಯಾ : ಸರಸ್ವತಿಯಾಗುವ ಸಮಯ ಸನ್ನಿಹಿತವಾಗಿದೆ. ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವವರು ನೀವಲ್ಲವಾದ್ದರಿಂದ ಸುಮ್ಮನೆ ಉದ್ವೇಗ ಬೇಡ. ಈ ದಿನ ನಿಮ್ಮ ಎಲ್ಲಾ ಪ್ರಯತ್ನಗಳು ಯಶಸ್ವಿಯಾಗುತ್ತವೆ.
ತುಲಾ : ಮಾತು ಬಂಗಾರ ಜಾತಿಯವರು ನೀವು. ಅವರು ನಿಮ್ಮನ್ನು ಅರ್ಥ ಮಾಡಿಕೊಳ್ಳದಿರುವುದಕ್ಕೆ ಇದೂ ಪ್ರಮುಖ ಕಾರಣವಿದ್ದೀತು. ಈ ದಿನ ನಿಮ್ಮ ಮನಸ್ಸನ್ನು ಅವರಲ್ಲಿ ಹಂಚಿಕೊಳ್ಳಬಾರದೇಕೆ.
ವೃಶ್ಚಿಕ : ಮನೆ ಮಂದಿಯನ್ನು ನೆನಪಿಸಿಕೊಳ್ಳುವ ಮುಹೂರ್ತ ಕೂಡಿ ಬಂದಿದೆ. ನೀವು ಬಿಜಿಯಾಗಿದ್ದೀರಿ ಅನ್ನುವುದು ಪೂರ್ಣಸತ್ಯವೇನಲ್ಲ , ಅಲ್ಲವೇ?
ಧನಸ್ಸು : ನೀವು ಹೆತ್ತವರನ್ನು ದೂರುವಂತೆ ನಿಮ್ಮ ಮಕ್ಕಳು ನಿಮ್ಮನ್ನು ದೂರಬಾರದಲ್ಲವೆ ! ಉಳಿತಾಯದ ಯೋಜನೆಗಳನ್ನು ಪಕ್ಕಕ್ಕಿರಿಸಬೇಡಿ. ಈ ಸಂಬಂಧ ಮನದನ್ನೆ ನೀಡುವ ಸಲಹೆಗಳನ್ನು ಮಾನ್ಯ ಮಾಡುವುದು ಒಳ್ಳೆಯದು.
ಮಕರ : ಮತ್ತೆ ಕಾಲಿಗೆ ಚಕ್ರ ಕಟ್ಟಿಕೊಳ್ಳುವ ಹೊತ್ತು ಬಂದಿದೆ. ಇಂದಿನ ತಿರುಗಾಟದಲ್ಲಿ ನಿಮ್ಮ ಸ್ವ ಹಿತಾಸಕ್ತಿಯೂ ಅಡಗಿರುವುದರಿಂದ ಬೇಸರ ಬೇಡ.
ಕುಂಭ : ಪ್ರಾರ್ಥನೆ, ದೇವರು ಎಂದು ಏಸು ಕಾಲವಾಯಿತು. ಈ ದಿನ ಒಮ್ಮೆಗೇ ಮನಸ್ಸು ಅಧ್ಯಾತ್ಮದತ್ತ ಹೊರಳಿದರೆ ಅದಕ್ಕೆ ನಿಮ್ಮ ಕೆಲಸದ ಒತ್ತಡವೇ ಕಾರಣ.
ಮೀನ : ಹೆಂಡತಿಯಾಂದಿಗೆ ಮನಸ್ತಾಪ. ಮನೆಯಲ್ಲಿ ನೆಮ್ಮದಿ ಕಳವು. ನಿಮ್ಮ ದುಡುಕಿಗೆ ನಿಮ್ಮನ್ನೇ ದೂರಿಕೊಳ್ಳಿ. ಮನಸ್ತಾಪಗಳೇನೇ ಇದ್ದರೂ ನಿಮ್ಮ ಒಳ್ಳೆಯತನ ಅವರಿಗೆ ಅರ್ಥವಾಗುತ್ತದೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications