ರಾಮ ಸಮುದ್ರದಲ್ಲೊಂದು ಕೈಗಾರಿಕಾ ಷೆಡ್ಡು,ಅಲ್ಲಿ ನಡೆಯುತ್ತಿದೆ ಶಾಲೆ
ರಾಮ ಸಮುದ್ರ : ಏಕೋಪಾಧ್ಯಾಯ ಶಾಲೆ, ಮರದ ಕೆಳಗಿನ ಶಾಲೆಗಳನ್ನು ನೀವು ಕಂಡಿದ್ದೀರಿ ಅಥವಾ ಕೇಳಿದ್ದೀರಿ. ಗುಲ್ಬರ್ಗಾ ಜಿಲ್ಲೆಯ ಯಾದಗಿರಿ ತಾಲ್ಲೂಕಿನ ರಾಮ ಸಮುದ್ರದ ಶಾಲೆಯದ್ದು ಬೇರೆಯೇ ವಿಶೇಷ. ಇಲ್ಲಿ ಶಾಲೆ ನಡೆಯುತ್ತಿರುವುದು ಕೈಗಾರಿಕಾ ಷೆಡ್ಡಿನಲ್ಲಿ . ಅಂದಹಾಗೆ ಅದು ಸರ್ಕಾರಿ ಪ್ರೌಢಶಾಲೆ.
ರಾಮ ಸಮುದ್ರ ಶಾಲೆಯದ್ದು ಕಡಲೆ ಹಾಗೂ ಹಲ್ಲಿನ ಕತೆ. ತಿನ್ನಲು ಕಡಲೆಯಿದ್ದರೂ ಜಗಿಯಲು ಹಲ್ಲೇ ಇಲ್ಲದ ಹಾಗೂ ಕೃತಕ ಹಲ್ಲಿಗಾಗಿ ದಂತ ವೈದ್ಯನ ಬಳಿ ಹೋಗಲಾಗದ ವಿಪರ್ಯಾಸ ಇಲ್ಲಿಯದು. ಶಾಲೆಯ ಸ್ವಂತ ಕಟ್ಟಡಕ್ಕಾಗಿ ಸರ್ಕಾರ ಹಣ ಬಿಡುಗಡೆ ಮಾಡಿ ತುಂಬಾ ದಿನಗಳೇ ಆಗಿವೆ. ಆದರೆ, ಕಟ್ಟಡ ಎದ್ದು ನಿಲ್ಲಲು ನಿವೇಶನವೇ ಇಲ್ಲ . ನಿವೇಶನ ಸಿಗುವವರೆಗೆ ಕಟ್ಟಡವಿಲ್ಲ . ಯಾರಾದರೂ ಸ್ಥಳೀಕರು ಉದಾರ ಮನಸ್ಸಿನಿಂದ ಸ್ಥಳದಾನ ಮಾಡಿದರೆ, ಸ್ವಂತ ಕಟ್ಟಡದ ಶಾಲೆಯ ಕನಸು ನನಸಾದೀತು ಎನ್ನುವ ನಿರೀಕ್ಷೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಿದ್ದಾರೆ.
ಸ್ವಂತ ಕಟ್ಟಡ ಇಲ್ಲ . ಹಾಗೆಂದು ಶಾಲೆಯನ್ನು ನಡೆಸದಿರಲಾದೀತೆ? ಮರದ ಕೆಳಗೆ ಗುರುಕುಲವ ನಡೆಸೋಣವೆಂದರೆ, ಶಾಲೆಯಲ್ಲಿ 216 ವಿದ್ಯಾರ್ಥಿಗಳಿದ್ದಾರೆ. ಅಷ್ಟೂ ಜನಕ್ಕೆ ನೆರಳು ನೀಡುವ ದೊಡ್ಡ ಮರ ಎಲ್ಲಿ ಸಿಗಬೇಕು. ಮರ ಹುಡುಕುತ್ತಾ ಬೆಂಗಳೂರಿನ ರಾಮೋಹಳ್ಳಿಗೆ ಬರಲು ಸಾಧ್ಯವಿಲ್ಲ . ಆದಕ್ಕೆಂದೇ ರಾಮ ಸಮುದ್ರದಲ್ಲಿಯೇ ಸುಲಭವಾಗಿ ಸಿಕ್ಕಿದ ಕೈಗಾರಿಕಾ ಷೆಡ್ಡಿನಲ್ಲಿ ಶಾಲೆಯನ್ನು ನಡೆಸಲಾಗುತ್ತಿದೆ. ಅಲ್ಲಿ ಓದುತ್ತಿರುವ ಕೆಲ ತುಂಟರು, ನಮ್ಮ ಮಕ್ಕಳು ಓದುವ ಕಾಲಕ್ಕಾದರೂ ಶಾಲೆಗೆ ಸ್ವಂತ ಕಟ್ಟಡ ಸಿಕ್ಕೇ ಸಿಗುತ್ತದೆ ಎನ್ನುತ್ತಿದ್ದಾರೆ. ಅವರ ನಿರೀಕ್ಷೆ ನಿಜವಾಗಲಿ ಎಂದು ಹಾರೈಸೋಣವಾ!
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications