ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಇಬ್ಬರು ಗಂಧಗಳ್ಳರ ಬಂಧನ, 14 ಕೆಜಿ ಗಂಧ ವಶ
ಬೆಂಗಳೂರು : ಶ್ರೀಗಂಧ ಕದ್ದು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕೆಂಗೇರಿ ಪೊಲೀಸರು ಬುಧವಾರ ವಶ ಪಡಿಸಿಕೊಂಡಿದ್ದು, ಅವರಿಂದ 14 ಕೆ.ಜಿ. ತೂಕದ ಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಚನ್ನಪಟ್ಟಣದ ವಿಷಕಂಠ (19) ಹಾಗೂ ಚನ್ನಸಂದ್ರದ ಮೂರ್ತಿ (21) ಎಂಬುವರೇ ಆರೋಪಿಗಳು. ಪ್ಲಾಸ್ಟಿಕ್ ಚೀಲವೊಂದರಲ್ಲಿ ಗಂಧದ ತುಂಡುಗಳನ್ನಿಟ್ಟುಕೊಂಡು ದುಬಾಷಿ ಪಾಳ್ಯ ರೈಲು ಕಂಬಿಗಳ ಪಕ್ಕದಲ್ಲಿ ಸಂಶಾಯಾಸ್ಪದವಾಗಿ ಓಡಾಡುತ್ತಿದ್ದ ಇವರನ್ನು ಪೊಲೀಸರು ಬಂಧಿಸಿದ್ದಾರೆ. ಮೂರ್ತಿ ಹತ್ತಿರ ಒಂದು ಗರಗಸವೂ ಇತ್ತೆಂದು ಪೊಲೀಸರು ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
Comments
Story first published: Sunday, December 24, 2000, 5:30 [IST]