ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರವೀಂದ್ರ ಕಲಾಕ್ಷೇತ್ರದಲ್ಲಿ ಎರಡು ದಿನ ‘ಶರತ್ ವೈಭವ’ ನೃತ್ಯೋತ್ಸವ
ಬೆಂಗಳೂರು : ಪ್ರಸಿದ್ಧ ಪ್ರತಿಷ್ಠಾನ ಪ್ರತಿವರ್ಷ ನಗರದಲ್ಲಿ ಆಯೋಜಿಸುವ ‘ಶರತ್ ವೈಭವ’ ಭಾರತೀಯ ನೃತ್ಯ ಕಲೆಗಳ ಉತ್ಸವ ಶನಿವಾರ ಹಾಗೂ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ಕೇರಳದ ಕೂಡಿಯಾಟ್ಟಂ, ಅಸ್ಸಾಂನ ಸತ್ರಿಯಾ, ಕಥಕ್ಕಳಿ, ಭರತನಾಟ್ಯಂ, ಕುಚಿಪುಡಿ, ಕಥಕ್, ಒಡಿಸ್ಸಿ ಮೊದಲಾದ ಭಾರತೀಯ ನೃತ್ಯಗಳ ಪ್ರದರ್ಶನ ನಡೆಯಲಿದೆ. ಈ ವಿಷಯವನ್ನು ಪ್ರತಿಷ್ಠಾನದ ಅಧ್ಯಕ್ಷೆ ಪ್ರತಿಭಾ ಪ್ರಹ್ಲಾದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನೃತ್ಯಕ್ಕೂ ಹಾಗೂ ತಾಳವಾದ್ಯಕ್ಕೂ ಇರುವ ಅವಿನಾಭಾವ ಸಂಬಂಧವನ್ನು ಪರಿಚಯಿಸುವ ದೃಷ್ಟಿಯಿಂದ ಶಬ್ದರೂಪ ಎಂಬ ನೃತ್ಯ ರೂಪಕವನ್ನು ಸಹ ಈ ಉತ್ಸವದಲ್ಲಿ ಸಾದರ ಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ. ಉತ್ಸವವನ್ನು ಕೇಂದ್ರ ವಾರ್ತಾ ಮತ್ತು ಪ್ರಚಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಉದ್ಘಾಟಿಸಲಿದ್ದು, ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಚಿವ ಅನಂತ ಕುಮಾರ್ ಪಾಲ್ಗೊಳ್ಳುವರು ಎಂದೂ ಅವರು ಹೇಳಿದ್ದಾರೆ.
Story first published: Sunday, December 24, 2000, 5:30 [IST]