ಶಿಕ್ಷೆಯಲ್ಲಿ ರಿಯಾಯಿತಿ ಬೇಕೇ... ಹೆಚ್ಚು ಪುಸ್ತಕ ಓದಿ-ಕಾನೂನು ಸಚಿವ
ಬೆಂಗಳೂರು : ಶಿಕ್ಷೆ ಕಡಿತಗೊಳಿಸುವ ಸಂದರ್ಭದಲ್ಲಿ ಸರಕಾರವು ಹೆಚ್ಚು ಪುಸ್ತಕಗಳನ್ನು ಓದುವ ಕೈದಿಗಳಿಗೆ ಮೊದಲ ಪ್ರಾಶಸ್ತ್ಯ ನೀಡುವುದು ಎಂದು ಕಾನೂನು ಸಚಿವ ಡಿ.ಬಿ. ಚಂದ್ರೇ ಗೌಡ ಹೇಳಿದ್ದಾರೆ.
ಅವರು ಸೋಮವಾರ ಪುಸ್ತಕ ಪ್ರಾಧಿಕಾರ ಮತ್ತು ಗಮಕ ಕಲಾ ಪರಿಷತ್ ಆಶ್ರಯಲ್ಲಿ ನಗರದ ಸೆಂಟ್ರಲ್ ಜೈಲ್ ಆವರಣದಲ್ಲಿ ‘ಬಂದಿಖಾನೆಯಲ್ಲಿ ಪುಸ್ತಕ ಪರಿಮಳ ’ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಯಾವ ಕೈದಿ ಹೆಚ್ಚು ಪುಸ್ತಕ ಓದುತ್ತಾನೆ ಎನ್ನುವುದನ್ನು ಮಾನದಂಡವನ್ನಾಗಿಟ್ಟುಕೊಂಡು ಶಿಕ್ಷೆಯನ್ನು ಕಡಿಮೆ ಮಾಡಲಾಗುವುದು ಎಂದು ಅವರು ಹೇಳಿದರು.
ಜೈಲಿನಲ್ಲಿ ಬಾಹ್ಯ ಸಮಾಜದ ಸಂಪರ್ಕವಿಲ್ಲದೆ ಬದುಕುವ ಕೈದಿಗಳು ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಂಡಲ್ಲಿ ಶಿಕ್ಷೆಯಿಂದ ನೊಂದ ಮನಸ್ಸಿಗೆ ತುಸು ನಿರಾಳತೆ ಸಿಗುತ್ತದೆ. ಕೈದಿಗಳಲ್ಲಿ ಉತ್ತಮ ನಡತೆ ಬೆಳೆದಾಗ ಶಿಕ್ಷೆಯಲ್ಲಿಯೂ ರಿಯಾಯಿತಿ ಸಿಗಬಹುದು. ಒಟ್ಟಿನಲ್ಲಿ ಪುಸ್ತಕ ಓದುವಿಕೆ ಬುದ್ಧಿಯನ್ನು ಮೊನಚಾಗಿಸುತ್ತದೆ ಎಂದ ಚಂದ್ರೇಗೌಡರು ಕೈದಿಗಳಿಗೆ ಹೆಚ್ಚು ಪುಸ್ತಕ ಓದುವಂತೆ ಒತ್ತಾಯಿಸಿದರು.
(ಇನ್ಫೋ ವಾರ್ತೆ)