Get Updates
Get notified of breaking news, exclusive insights, and must-see stories!

‘ಕ್ರಿಕೆಟ್‌ ಬೇಡ ಮಗ, ಕೆಲಸಮಾಡು’ ಅಂದದ್ದಕ್ಕೆ ನೇಣು ಹಾಕಿಕೊಂಡ ಯುವಕ

*ಜತೀಂದ್ರ ದಶ್‌

ಭುವನೇಶ್ವರ್‌ : ಕ್ರಿಕೆಟ್‌ ಪಂದ್ಯದ ದೂರದರ್ಶನ ನೇರಪ್ರಸಾರವನ್ನು ನೋಡಲು ತಂದೆ ಅವಕಾಶ ಮಾಡಿಕೊಡಲಿಲ್ಲವೆಂದು ಬೇಸತ್ತ 17ವರ್ಷದ ಯುವಕನೊಬ್ಬ ನೇಣು ಹಾಕಿಕೊಂಡ ವರದಿ ಒರಿಸ್ಸಾದ ಹಳ್ಳಿಯಾಂದರಿಂದ ತಡವಾಗಿ ವರದಿಯಾಗಿದೆ.

ಭಾರತ ಮತ್ತು ಜಿಂಬಾಬ್ವೆ ತಂಡಗಳ ನಡುವೆ ಶನಿವಾರ ನಡೆದ ಒಂದು ದಿನದ ಪಂದ್ಯವನ್ನು ನೋಡಲು ಚಂಡಮಾರುತ ಪೀಡಿತ ಜಗತ್‌ಸಿಂಗ್‌ಪುರ ಜಿಲ್ಲೆಯ ನೆಡದ ಗ್ರಾಮದ ಸರತ್‌ ಮಂಡಲ್‌ ತೀರಾ ಕುತೂಹಲಿಯಾಗಿದ್ದ. ಆದರೆ, ಆತನ ತಂದೆ ಪಂದ್ಯವನ್ನು ವೀಕ್ಷಿಸುವ ಬದಲು ಕೆಲಸ ಮಾಡಲು ಒತ್ತಾಯಿಸಿದ್ದರಿಂದ ಬೇಸತ್ತ ಸರತ್‌ ಸೀಲಿಂಗ್‌ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾನೆ.

ಮೃತ ಯುವಕನ ತಂದೆ ಬಿಚ್‌ ಮಂಡಲ್‌ ಅಂದಿನ ದುಡಿಮೆಯಿಂದ ಹೊಟ್ಟೆ ತುಂಬಿಸಿಕೊಳ್ಳುವ ದಿನಗೂಲಿ ಕಾರ್ಮಿಕ. ಕಳೆದ ವರ್ಷ ಅಪ್ಪಳಿಸಿದ ಭೀಕರ ಚಂಡಮಾರುತಕ್ಕೆ ಆತನ ಹೆಂಡತಿ ಬಲಿಯಾಗಿದ್ದಾಳೆ. ಸರತ್‌ ಕೂಡ ಅಪ್ಪನೊಂದಿಗೆ ದುಡಿಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸರತ್‌ನ ಮರಣವನ್ನು ಆಸಹಜ ಸಾವು ಎಂದು ದಾಖಲಿಸಿಕೊಂಡಿರುವ ಪೊಲೀಸರು, ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಮೋಸದಾಟ ಪ್ರಕರಣದಲ್ಲಿ ಭಾರತೀಯ ಕ್ರಿಕೆಟ್‌ನ ಒಂದು ಕಾಲದ ತಾರೆಗಳು ಅಪರಾಧಿ ಸ್ಥಾನದಲ್ಲಿ ನಿಂತಿರುವಾಗಲೂ ಜನತೆಯಲ್ಲಿ ಕ್ರಿಕೆಟ್‌ನ ಹುಚ್ಚು ಮಾಸಿಲ್ಲ ಅನ್ನುವುದನ್ನು ಈ ಘಟನೆ ಸಮರ್ಥಿಸುತ್ತದೆ. ಶನಿವಾರ ಕಟಕ್‌ನಲ್ಲಿ ನಡೆದ ಒಂದು ದಿನದ ಪಂದ್ಯವನ್ನು ವೀಕ್ಷಿಸಲು ಆಸಕ್ತರ ನೂಕು ನುಗ್ಗಲು ಉಂಟಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

(ಐಎಎನ್‌ಎಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+