ಗರ್ಭಿಣಿಯ ಏಡ್ಸ್ ಸೋಂಕು ಗರ್ಭದ ಮಗುವಿಗೆತಗುಲದಂತೆ ಚಿಕಿತ್ಸೆ!
ಬೆಂಗಳೂರು : ಭಾರತದಲ್ಲಿ ಆತ್ಮಹತ್ಯೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ನರಶಾಸ್ತ್ರ ತಜ್ಞರು ಇದನ್ನು ತಡೆಗಟ್ಟಲು ಸೂಕ್ತ ರೀತಿಯ ಅಧ್ಯಯನ ಮಾಡಬೇಕಾದುದು ಅತ್ಯಗತ್ಯ ಎಂದು ಕೇಂದ್ರ ಆರೋಗ್ಯ ಮತ್ತು ಸಮಾಜ ಕಲ್ಯಾಣ ಸಚಿವ ಸಿ.ಪಿ.ಠಾಕೂರ್ ಕಳಕಳಿಯ ಮನವಿ ಮಾಡಿದ್ದಾರೆ. ಸಂದರ್ಭ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ಯ 5ನೇ ಘಟಿಕೋತ್ಸವ, ಸೋಮವಾರ.
ಠಾಕೂರ್ ಅಧ್ಯಕ್ಷೀಯ ಭಾಷಣದ್ಲಲಿ ಹೆಕ್ಕಲಾದ ಕೆಲವು ಅಂಶಗಳು ಇಂತಿವೆ :
- ಒಂದು ಡೋಸ್ ಆ್ಯಂಟಿ ರಿಟ್ರೋ ವೈರಸ್ ಔಷಧವನ್ನು ಚುಚ್ಚುಮದ್ದಿನ ಮೂಲಕ ಕೊಡುವುದರಿಂದ ಗರ್ಭಿಣಿ ಸ್ತ್ರೀಯರ ಹೊಟ್ಟೆಯಲ್ಲಿರುವ ಮಗುವಿಗೆ ಏಡ್ಸ್ ಸೋಂಕು ತಗುಲದಂತೆ ತಡೆಯಬಹುದು. ಆದರೆ ಈ ಔಷಧದ ಬೆಲೆಯನ್ನು ಸಾಮಾನ್ಯ ಜನರ ಕೈಗೆಟುಕುವಷ್ಟು ಅಗ್ಗ ಮಾಡುವಂತೆ ಡಬ್ಲ್ಯು ಟಿ ಓ ಗೆ ಸರ್ಕಾರ ಪತ್ರ ಬರೆದಿದೆ.
- ರಾಷ್ಟ್ರೀಯ ಅಪರಾಧ ದಾಖಲಾತಿ ಕೇಂದ್ರದ ಪ್ರಕಾರ ದೇಶದಲ್ಲಿ ಆತ್ಮಹತ್ಯೆ ಸಂಖ್ಯೆ ಪ್ರತಿಶತ 10ಕ್ಕಿಂತಲೂ ಅಧಿಕವಾಗಿದೆ.
- 1998ರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇರಳ ಆತ್ಮಹತ್ಯೆಯಲ್ಲಿ ನಂ.1 ರಾಜ್ಯ. ಬೆಂಗಳೂರು ನಂ. 1 ನಗರ.
- ಬಹುತೇಕ ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಬಿಹಾರದಂಥ ರಾಜ್ಯದಲ್ಲಿ ಆತ್ಮಹತ್ಯೆ ಪ್ರಕರಗಳು ಅತಿ ಕಡಿಮೆ. ಬೆಂಗಳೂರು ಮತ್ತು ಕೇರಳದಲ್ಲೇ ಏಕೆ ಹೆಚ್ಚು ಎಂಬುದಕ್ಕೆ ನರಶಾಸ್ತ್ರ ತಜ್ಞರು ಪಕ್ಕಾ ಅಧ್ಯಯನ ಮಾಡಬೇಕು.
- ಬೆಂಗಳೂರಿನಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಲು ಏನು ಕಾರಣ ಎಂಬುದರ ಕುರಿತು ಇ್ತತೀಚೆಗೆ ನಿಮ್ಹಾನ್ಸ್ ಅಧ್ಯಯನ ನಡೆಸಿ, ಒಂದು ವರದಿಯನ್ನು ಕೊಟ್ಟಿದೆ. ಅದರ ಪ್ರಕಾರ ಆತ್ಮಹತ್ಯಾ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅವು ಯಶಸ್ವಿಯಾದಲ್ಲಿ ಆತ್ಮಹತ್ಯೆ ಅಧಿಕವಾಗಿರುವ ಇತರೆ ಪ್ರದೇಶಗಳಲ್ಲೂ ಅವನ್ನು ಅನುಷ್ಠಾನಕ್ಕೆ ತರಲಾಗುವುದು.
- ಮೂರ್ಛೆರೋಗದ ಬಗ್ಗೆ ಜನರಿಗೆ ತಿಳಿವಳಿಕೆ ಇಲ್ಲ. ಪ್ರತಿ 80 ಲಕ್ಷ ಮೂರ್ಛೆರೋಗಿಗಳಲ್ಲಿ 40 ಲಕ್ಷ ಮಂದಿ ಯಾವುದೇ ಚಿಕಿತ್ಸೆ ಪಡೆದಿಲ್ಲ. ಇದಕ್ಕೆ ಮದ್ದಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್ ಓ) ಯ ನೆರವಿನಿಂದ ಮೂರ್ಛೆರೋಗ ಮಾದರಿ ಜಿಲ್ಲಾ ಚಿಕಿತ್ಸಾ ಕೇಂದ್ರಗಳನ್ನು ನಿಮ್ಹಾನ್ಸ್ ತೆರೆದಿದೆ. ಆದರೂ ಕುಗ್ರಾಮಗಳ ಜನರಲ್ಲಿ ತಿಳಿವಳಿಕೆ ಮೂಡಿಸುವುದು ಅತ್ಯಗತ್ಯ.
- 1996-97ರಲ್ಲಿ ಬಳ್ಳಾರಿಯಲ್ಲಿ ನಿಮ್ಹಾನ್ಸ್ , ಮೊದಲ ಜಿಲ್ಲಾ ಮಾದರಿ ಮಾನಸಿಕ ಆರೋಗ್ಯ ಕೇಂದ್ರ ಸ್ಥಾಪಿಸಿತು. ಈಗ ಕೇಂದ್ರ ಸರ್ಕಾರ ಇದೇ ರೀತಿ ಕನಿಷ್ಠ ರಾಜ್ಯಕ್ಕೊಂದು ಜಿಲ್ಲೆಯಲ್ಲಾದರೂ ಇಂಥ ಕೇಂದ್ರವನ್ನು ಸ್ಥಾಪಿಸಿ, ಪ್ರತಿವರ್ಷ 92 ಲಕ್ಷ ರುಪಾಯಿ ವೆಚ್ಚದಲ್ಲಿ ಅದನ್ನು ನಿರ್ವಹಿಸಲು ನಿರ್ಧರಿಸಿದೆ.
- ಪ್ರತಿ ರಾಜ್ಯದ ಒಂದೊಂದು ವೈದ್ಯಕೀಯ ಕಾಲೇಜುಗಳಿಗೆ 1.5 ಕೋಟಿ ರುಪಾಯಿ ವೆಚ್ಚದಲ್ಲಿ ಕೇಂದ್ರ ಗ್ರಂಥಾಲಯವನ್ನು ಸ್ಥಾಪಿಸಲು ಕೇಂದ್ರ ನಿರ್ಧರಿಸಿದೆ. ಇದರಿಂದ ಆರೋಗ್ಯದ ಬಗೆಗೆ ಸಾಮಾನ್ಯರಿಗೂ ಹೆಚ್ಚಿನ ಮಾಹಿತಿ ಸಿಕ್ಕಂತಾಗುತ್ತದೆ. ಹಂತ ಹಂತಗಳಲ್ಲಿ ಹಮ್ಮಿಕೊಳ್ಳಲಾಗುವ ಈ ಯೋಜನೆಯ ಲಾಭ ಮೊದಲು ಬೆಂಗಳೂರು ವೈದ್ಯಕೀಯ ಕಾಲೇಜಿಗೆ ದೊರೆಯಲಿದೆ.
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications