ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾನುಲಿ ನಾಟಕ : ಮಹಾಲಿಂಗ ಭಟ್‌ಗೆ ಬಹುಮಾನ

By Staff
|
Google Oneindia Kannada News

ಬೆಂಗಳೂರು : ಅಖಿಲ ಭಾರತ ರೇಡಿಯೋ ನಾಟಕ ರಚನಾ ಸ್ಪರ್ಧೆಯಲ್ಲಿ ಮಂಗಳೂರಿನ ಕೆ. ಮಹಾಲಿಂಗ ಭಟ್‌ ಅವರಿಗೆ ಪ್ರಥಮ ಬಹುಮಾನ ಬಂದಿದೆ.

ಸುತ್ತ ಇರುವುದೊಂದು ಪುಟ್ಟ ಜಗ ನಾಟಕಕ್ಕೆ ಪ್ರಥಮ ಬಹುಮಾನ ಬಂದಿದ್ದು, ಪ್ರಶಸ್ತಿ ರೂಪವಾಗಿ 10 ಸಾವಿರ ರೂಪಾಯಿ ನಗದು ಲಭಿಸಲಿದೆ. ಮಂಗಳೂರಿನ ಸೈಂಟ್‌ ಅಲೋಷಿಯಸ್‌ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಮಹಾಲಿಂಗ ಭಟ್‌ ಅವರ ಜರಿವ ಕೋಟೆಯ ಮೇಲೆ ಮಳೆ ನಾಟಕ ಕೂಡ 1997 ನೇ ಸಾಲಿನ ರಾಷ್ಟ್ರೀಯ ರೇಡಿಯೋ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿತ್ತು .

ಎರಡನೇ ಬಹುಮಾನವನ್ನು ತೀರ್ಥ ಹಳ್ಳಿಯ ಎ.ವಿ. ಲಕ್ಷ್ಮಿ ನಾರಾಯಣ ಅವರ ದೇವರ ಹೆಣ್ಣು ನಾಟಕ ಪಡೆದರೆ, ಮೂರನೇ ಬಹುಮಾನ ಧಾರವಾಡದ ಶುಬದಾ ಅಮ್ಮಿನ ಬಾವಿ ಅವರ ಬಾಳು ಲೆತ್ತದಾಟ ನಾಟಕ ಗೆದ್ದು ಕೊಂಡಿದೆ. ಈ ಬಾರಿಯ ಸ್ಪರ್ಧೆಗೆ 167 ನಾಟಕಗಳು ಬಂದಿದ್ದು, ಹಾಸ್ಯ ನಾಟಕಗಳಲ್ಲಿ ಯಾವ ನಾಟಕವೂ ಬಹುಮಾನಕ್ಕೆ ಅರ್ಹವಾಗಿಲ್ಲ ಎಂದು ಆಕಾಶವಾಣಿ ಪ್ರಕಟಣೆ ತಿಳಿಸಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X