ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಡಿ. 10 : ಹನುಮ ತಾಯಿತ ಧರಿಸಿ ಚಳವಳಿಕಾರರಿಂದ ಕನ್ನಡ ಪ್ರತಿಜ್ಞೆ
ಬೆಂಗಳೂರು : ಡಿಸೆಂಬರ್ 10 ರಂದು ಕನ್ನಡ ಚಳವಳಿಕಾರರ ರಾಜ್ಯಮಟ್ಟದ ಸಮಾವೇಶವನ್ನು ಕನ್ನಡ ಚಳವಳಿ ಕೇಂದ್ರವು ಏರ್ಪಡಿಸಿದೆ.
ಹನುಮ ಜಯಂತಿ ಸಂದರ್ಭದ ಹನುಮ ತಾಯಿತವನ್ನು ಕಟ್ಟಿಕೊಂಡು ಕಾರ್ಯಕರ್ತರು ಕನ್ನಡ ಪ್ರತಿಜ್ಞೆಯನ್ನು ಸ್ವೀಕರಿಸುವರು. ಕನ್ನಡ ಚಳವಳಿ ಕೇಂದ್ರದ ಅಧ್ಯಕ್ಷ ಜಿ. ನಾರಾಯಣ ಕುಮಾರ್ ಸಮ್ಮೇಳನದ ಬಗೆಗಿನ ವಿವರಗಳನ್ನು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮ್ಮೇಳನದ ಅಂಗವಾಗಿ ಕನ್ನಡ ನಾಡು, ನುಡಿ, ಸಂಸ್ಕೃತಿಗಳನ್ನು ಬಿಂಬಿಸುವ ಮೆರವಣಿಗೆಯನ್ನು ನಗರದ ಪ್ರಮುಖ ಬೀದಿಗಳಲ್ಲಿ ನಡೆಸಲಾಗುವುದು. ನಾಡು ಹಾಗೂ ನುಡಿ ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಹಾಗೂ ಕೊಡಗು ಮತ್ತು ಉತ್ತರ ಕರ್ನಾಟಕಗಳಲ್ಲಿ ಎದ್ದಿರುವ ಪ್ರತ್ಯೇಕ ರಾಜ್ಯಗಳ ಕೂಗಿನ ಬಗ್ಗೆ ಸಮ್ಮೇಳನದಲ್ಲಿ ಚರ್ಚಿಸಲಾಗುವುದು. ಸಮ್ಮೇಳನವನ್ನು ಉದ್ಘಾಟಿಸಲು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರನ್ನು ಆಹ್ವಾನಿಸಲಾಗುವುದು ಎಂದು ನಾರಾಯಣ ಕುಮಾರ್ ಹೇಳಿದರು.
(ಇನ್ಫೋ ವಾರ್ತೆ)
Comments
Story first published: Sunday, December 24, 2000, 5:30 [IST]