ಮಾಹಿತಿ ಮತ್ತು ತಂತ್ರಜ್ಞಾನ : ರಾಜ್ಯದ ಹೆಜ್ಜೆಗಳಿಗೆ ವಿಶ್ವ ನಾಯಕರ ಮೆಚ್ಚುಗೆ
* ಇಮ್ರಾನ್ ಖುರೇಶಿ
ಬೆಂಗಳೂರು : ಮಾಹಿತಿ ತಂತ್ರಜ್ಞಾನದ ಬಗ್ಗೆ ಅರಿವಿರುವ ಮತ್ತು ಅರಿವಿಲ್ಲದಿರುವ ಕ್ಷೇತ್ರಗಳ ನಡುವಿನ ಬಿರುಕು ಮುಚ್ಚುವ ದೃಷ್ಠಿಯಿಂದ ಕರ್ನಾಟಕ ಇಟ್ಟಿರುವ ಹೆಜ್ಜೆಗಳಿಗೆ ವಿಶ್ವದ ವಿವಿಧ ನಾಯಕರಿಂದ ಪ್ರಶಂಸೆ ಲಭಿಸಿದೆ.
ಕಳೆದ ಒಂದು ಸಾಲಿನಲ್ಲಿ ಕರ್ನಾಟಕಕ್ಕೆ ಭೇಟಿ ನೀಡಿದ ವಿಶ್ವದ ವಿವಿಧ ರಾಷ್ಟ್ರ ಗಳ ನಾಯಕರು ರಾಜ್ಯದ ಈ ಪ್ರಯತ್ನ ವನ್ನು ಮೆಚ್ಚಿದ್ದಾರೆ. ಇತ್ತೀಚೆಗೆ ವಿಶ್ವ ಬ್ಯಾಂಕ್ ಅಧ್ಯಕ್ಷ ಜೇಮ್ಸ್ ವೋಫೆನ್ಸನ್ ಐಟಿಯಿಂದಾಗಿ ಉಂಟಾಗುವ ಅಂತರವನ್ನು ಸರಿಪಡಿಸಲು ರಾಜ್ಯ ಸರಕಾರದ ಯತ್ನವನ್ನು ಹೊಗಳಿರುವುದಲ್ಲದೆ, ವಿಶ್ವ ಬ್ಯಾಂಕ್ ಕೂಡ ರಾಜ್ಯದ ಯೋಜನೆಗಳ ಜೊತೆಗೆ ಕೈಜೋಡಿಸಲು ಇಷ್ಟಪಡುತ್ತದೆ ಎಂದಿದ್ದಾರೆ. ಬಡತನ, ಅನಕ್ಷರತೆ ಮತ್ತು ನಿರುದ್ಯೋಗ ಸಮಸ್ಯೆಗಳಿದ್ದರೂ, ಐಟಿ ಕ್ಷೇತ್ರದ ವಿವಿಧ ಆಯಾಮಗಳಲ್ಲಿ , ಭಾರತದಲ್ಲಿ ಮುಖ್ಯವಾಗಿ ಕರ್ನಾಟಕ ವಿಶ್ವದ ಇತರ ರಾಷ್ಟ್ರಗಳಿಗೆ ಪ್ರಾಯೋಗಿಕ ರಾಜ್ಯವಾಗಿದೆ.
ಬೆಂಗಳೂರು ಮೂಲದ ಇನ್ಫೋಸಿಸ್ನ ಎನ್.ಆರ್. ನಾರಾಯಣ ಮೂರ್ತಿ ಹೇಳುವ ಪ್ರಕಾರ, ನಾಡಿನ ಪ್ರತಿಯಾಬ್ಬ ವ್ಯಕ್ತಿಗೂ ಐಟಿಯನ್ನು ತಲುಪುವ ವರೆಗೆ ಕಾಯುವುದು ಸಾಧ್ಯವಿಲ್ಲ. ನಿಧಾನವಾಗಿ ಐಟಿ ನಾಡಿನ ಮೂಲೆಗೆ ತನ್ನಿಂದ ತಾನೇ ತಲುಪುತ್ತದೆ. ವಿಶ್ವ ಬ್ಯಾಂಕ್ ಅಧ್ಯಕ್ಷರು ಇನ್ಫೋಸಿಸ್ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಲಿಲ್ ತಾನೇಜಾ ಎಂಬ ಐಟಿ ಇಂಜಿನಿಯರ್ ನಾರಾಯಣ ಮೂರ್ತಿ ಜೊತೆಗೆ ಅಲ್ಲಿಗೆ ಬಂದಿದ್ದರು.
ತಾನೇಜಾ ಅವರನ್ನು ಕರೆಸಿದ್ದು, ಕೃಷಿ ಮಾಹಿತಿ ನೀಡುವ ಫಾರ್ಮರ್ಸ್ ಡಾಟ್ ಕಾಮ್ ಎಂಬ ಹೊಸ ವೆಬ್ ಸೈಟ್ ಕುರಿತು ವಿವರಿಸಲು ಎಂದು ನಾರಾಯಣ ಮೂರ್ತಿ ಹೇಳುತ್ತಾರೆ. ತಾನೇಜಾ ನೇತೃತ್ವದ ವೆಬ್ ಸೈಟ್ ಹಿಮಾಚಲ ಪ್ರದೇಶದಲ್ಲಿನ ಸೇಬು ಬೆಳೆಗಾರರಿಗೆ ಮಧ್ಯವರ್ತಿಗಳ ಸಹಾಯವಿಲ್ಲದೇ ಸೇಬು ಮಾರಾಟಕ್ಕೆ ಅವಕಾಶ ಮಾಡಿಕೊಡುತ್ತದೆ. ಈ ರೀತಿ ರೈತ ಮತ್ತು ಮಾರಾಟಗಾರರ ನಡುವೆ ನೇರ ಸಂಪರ್ಕ ಕಲ್ಪಿಸುವ ವೆಬ್ ಸೈಟ್ನ ಸೇವೆ ಇತರ ಬೆಳೆಗಾರರಿಗೂ ಸದ್ಯದಲ್ಲಿಯೇ ಲಭಿಸಲಿದೆಯಂತೆ.
ಕಂಪ್ಯೂಟರ್ ಮೂಲಕ ಜನರ ಕೈಯಲ್ಲಿ ಪಾರದರ್ಶಕ ಆಡಳಿತದ ಪ್ರತಿ
ಬೆಳೆಗಳ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡುವ ಜವಾಬ್ದಾರಿಯನ್ನೂ ಸೈಟ್ ಹೊತ್ತುಕೊಳ್ಳಲಿದೆ. ಡಿಜಿಟಲ್ ರೆವಲ್ಯೂಷನ್ ಎಂದು ಕರೆಯುವ ಈ ಹೊಸ ಕಾರ್ಯಕ್ರಮ ನಗರ ಪ್ರದೇಶಕ್ಕಿಂತ ಹೆಚ್ಚಾಗಿ ಗ್ರಾಮೀಣ ಪ್ರದೇಶದ ರೈತರಿಗೇ ಹೆಚ್ಚು ಉಪಯೋಗವಾಗಲಿದೆ ಎಂದು ತಾನೇಜಾ ಐಎಎನ್ಸ್ನೊಡನೆ ಹೇಳಿದ್ದಾರೆ. ಉದಾಹರಣೆಗೆ ಹೇಳುವುದಿದ್ದರೆ, ಬೆಳ್ಳಂದೂರು ಪ್ರಾದೇಶಿಕ ಆಡಳಿತ ಕಂಪ್ಯೂಟರೀಕರಣಗೊಂಡಿದ್ದು, ಗ್ರಾಮಸ್ಥರು ತಮಗೆ ಬೇಕಾದ ದಾಖಲೆಗಳನ್ನು ಕಂಪ್ಯೂಟರ್ ಮೂಲಕ ಗಮನಿಸಬಹುದು. ಒಂದು ಬರ್ತ್ ಸರ್ಟಿಫಿಕೇಟ್ ತರಬೇಕಿದ್ದರೆ, ಮೂರು ದಿನ ಓಡಾಡ ಬೇಕಾಗಿತ್ತು. ಆದರೆ ಈಗ ಅರ್ಧ ಗಂಟೆಯಲ್ಲಿ ಬೇಕಾದ ಸರ್ಟಿಫಿಕೇಟ್ ಪಡೆಯಬಲ್ಲೆ ಎಂದು ಬೆಳ್ಳಂದೂರು ನಿವಾಸಿ ಹೊನ್ನಪ್ಪ ಕಂಪ್ಯೂಟರೀಕರಣದ ಉಪಯೋಗವನ್ನು ಮೆಚ್ಚಿ ಕೊಂಡು ಹೇಳುತ್ತಾರೆ. ಇದರಿಂದ ಸಮಯ ಮತ್ತು ಸುತ್ತಾಡಲು ಬಳಸುವ ಹಣವೂ ಉಳಿತಾಯವಾಗುತ್ತದೆ. ಕೀಟ ನಾಶಕ, ಬೆಳೆ ಕೊಯ್ಲು , ಹವಾಮಾನ ಮತ್ತಿತರ ಕೃಷಿಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಕಂಪ್ಯೂಟರ್ ಮೂಲಕ ಪಡೆಯುವುದು ಸುಲಭ ಎಂದು ಅಲ್ಲಿನ ಇನ್ನೊಬ್ಬ ನಿವಾಸಿ ಜಗನ್ನಾಥ್ ಹೇಳುತ್ತಾರೆ. (ಐಎಎನ್ಎಸ್)-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications