ಮಾಹಿತಿ ಮತ್ತು ತಂತ್ರಜ್ಞಾನ : ರಾಜ್ಯದ ಹೆಜ್ಜೆಗಳಿಗೆ ವಿಶ್ವ ನಾಯಕರ ಮೆಚ್ಚುಗೆ
* ಇಮ್ರಾನ್ ಖುರೇಶಿ
ಬೆಂಗಳೂರು : ಮಾಹಿತಿ ತಂತ್ರಜ್ಞಾನದ ಬಗ್ಗೆ ಅರಿವಿರುವ ಮತ್ತು ಅರಿವಿಲ್ಲದಿರುವ ಕ್ಷೇತ್ರಗಳ ನಡುವಿನ ಬಿರುಕು ಮುಚ್ಚುವ ದೃಷ್ಠಿಯಿಂದ ಕರ್ನಾಟಕ ಇಟ್ಟಿರುವ ಹೆಜ್ಜೆಗಳಿಗೆ ವಿಶ್ವದ ವಿವಿಧ ನಾಯಕರಿಂದ ಪ್ರಶಂಸೆ ಲಭಿಸಿದೆ.
ಕಳೆದ ಒಂದು ಸಾಲಿನಲ್ಲಿ ಕರ್ನಾಟಕಕ್ಕೆ ಭೇಟಿ ನೀಡಿದ ವಿಶ್ವದ ವಿವಿಧ ರಾಷ್ಟ್ರ ಗಳ ನಾಯಕರು ರಾಜ್ಯದ ಈ ಪ್ರಯತ್ನ ವನ್ನು ಮೆಚ್ಚಿದ್ದಾರೆ. ಇತ್ತೀಚೆಗೆ ವಿಶ್ವ ಬ್ಯಾಂಕ್ ಅಧ್ಯಕ್ಷ ಜೇಮ್ಸ್ ವೋಫೆನ್ಸನ್ ಐಟಿಯಿಂದಾಗಿ ಉಂಟಾಗುವ ಅಂತರವನ್ನು ಸರಿಪಡಿಸಲು ರಾಜ್ಯ ಸರಕಾರದ ಯತ್ನವನ್ನು ಹೊಗಳಿರುವುದಲ್ಲದೆ, ವಿಶ್ವ ಬ್ಯಾಂಕ್ ಕೂಡ ರಾಜ್ಯದ ಯೋಜನೆಗಳ ಜೊತೆಗೆ ಕೈಜೋಡಿಸಲು ಇಷ್ಟಪಡುತ್ತದೆ ಎಂದಿದ್ದಾರೆ. ಬಡತನ, ಅನಕ್ಷರತೆ ಮತ್ತು ನಿರುದ್ಯೋಗ ಸಮಸ್ಯೆಗಳಿದ್ದರೂ, ಐಟಿ ಕ್ಷೇತ್ರದ ವಿವಿಧ ಆಯಾಮಗಳಲ್ಲಿ , ಭಾರತದಲ್ಲಿ ಮುಖ್ಯವಾಗಿ ಕರ್ನಾಟಕ ವಿಶ್ವದ ಇತರ ರಾಷ್ಟ್ರಗಳಿಗೆ ಪ್ರಾಯೋಗಿಕ ರಾಜ್ಯವಾಗಿದೆ.
ಬೆಂಗಳೂರು ಮೂಲದ ಇನ್ಫೋಸಿಸ್ನ ಎನ್.ಆರ್. ನಾರಾಯಣ ಮೂರ್ತಿ ಹೇಳುವ ಪ್ರಕಾರ, ನಾಡಿನ ಪ್ರತಿಯಾಬ್ಬ ವ್ಯಕ್ತಿಗೂ ಐಟಿಯನ್ನು ತಲುಪುವ ವರೆಗೆ ಕಾಯುವುದು ಸಾಧ್ಯವಿಲ್ಲ. ನಿಧಾನವಾಗಿ ಐಟಿ ನಾಡಿನ ಮೂಲೆಗೆ ತನ್ನಿಂದ ತಾನೇ ತಲುಪುತ್ತದೆ. ವಿಶ್ವ ಬ್ಯಾಂಕ್ ಅಧ್ಯಕ್ಷರು ಇನ್ಫೋಸಿಸ್ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಲಿಲ್ ತಾನೇಜಾ ಎಂಬ ಐಟಿ ಇಂಜಿನಿಯರ್ ನಾರಾಯಣ ಮೂರ್ತಿ ಜೊತೆಗೆ ಅಲ್ಲಿಗೆ ಬಂದಿದ್ದರು.
ತಾನೇಜಾ ಅವರನ್ನು ಕರೆಸಿದ್ದು, ಕೃಷಿ ಮಾಹಿತಿ ನೀಡುವ ಫಾರ್ಮರ್ಸ್ ಡಾಟ್ ಕಾಮ್ ಎಂಬ ಹೊಸ ವೆಬ್ ಸೈಟ್ ಕುರಿತು ವಿವರಿಸಲು ಎಂದು ನಾರಾಯಣ ಮೂರ್ತಿ ಹೇಳುತ್ತಾರೆ. ತಾನೇಜಾ ನೇತೃತ್ವದ ವೆಬ್ ಸೈಟ್ ಹಿಮಾಚಲ ಪ್ರದೇಶದಲ್ಲಿನ ಸೇಬು ಬೆಳೆಗಾರರಿಗೆ ಮಧ್ಯವರ್ತಿಗಳ ಸಹಾಯವಿಲ್ಲದೇ ಸೇಬು ಮಾರಾಟಕ್ಕೆ ಅವಕಾಶ ಮಾಡಿಕೊಡುತ್ತದೆ. ಈ ರೀತಿ ರೈತ ಮತ್ತು ಮಾರಾಟಗಾರರ ನಡುವೆ ನೇರ ಸಂಪರ್ಕ ಕಲ್ಪಿಸುವ ವೆಬ್ ಸೈಟ್ನ ಸೇವೆ ಇತರ ಬೆಳೆಗಾರರಿಗೂ ಸದ್ಯದಲ್ಲಿಯೇ ಲಭಿಸಲಿದೆಯಂತೆ.
ಕಂಪ್ಯೂಟರ್ ಮೂಲಕ ಜನರ ಕೈಯಲ್ಲಿ ಪಾರದರ್ಶಕ ಆಡಳಿತದ ಪ್ರತಿ