ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪ್ರತಿಭಾ ಆತ್ಮಹತ್ಯೆ ವಿಚಾರಣೆ : ಮ್ಯಾಜಿಸ್ಟ್ರೇಟ್ ನೇಮಕಕ್ಕೆಕೃಷ್ಣ ಮನವಿ
ಬೆಂಗಳೂರು : ಮಂಡ್ಯ ಜಿಲ್ಲೆಯ ಬಿ.ಗೌಡಗೆರೆಯಲ್ಲಿ ಉದ್ರಿಕ್ತ ಸ್ಥಿತಿಗೆ ಕಾರಣವಾದ ವಿದಾರ್ಥಿನಿ ಪ್ರತಿಭಾ ಆತ್ಮಹತ್ಯೆ ಪ್ರಕರಣ ಕುರಿತಂತೆ ಅಲ್ಲಿನ ಡಿಎಸ್ಪಿ ಧೋರಣೆಯ ಬಗೆಗೆ ವಿಚಾರಣೆ ನಡೆಸಲು ಒಬ್ಬ ಮ್ಯಾಜಿಸ್ಟ್ರೇಟ್ರನ್ನು ನೇಮಕ ಮಾಡುವಂತೆ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಲ್ಲಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಶುಕ್ರವಾರ ಮನವಿ ಮಾಡಿದ್ದಾರೆ.
ಮಂತ್ರಿಮಂಡಲದ ಸಭೆಯ ನಂತರ ಸುದ್ದಿಗಾರರೊಡನೆ ಮಾತನಾಡುತ್ತಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಡಿ.ಬಿ.ಚಂದ್ರೇಗೌಡ ಈ ವಿಷಯ ತಿಳಿಸಿದರು. ಅಲ್ಲಿನ ಡಿಎಸ್ಪಿಯ ಆರೋಪಿಗಳ ಪರವಾದ ಧೋರಣೆಯ ಬಗೆಗೆ ಜನ ಚಕಾರ ಎತ್ತಿದ್ದಾರೆ. ಅವರ ಒತ್ತಾಯದ ಮೇರೆಗೆ ಜಿಲ್ಲಾ ನ್ಯಾಯಾಧೀಶರೊಬ್ಬರನ್ನು ವಿಚಾರಣೆಗೆ ಕಳುಹಿಸುವಂತೆ ಮುಖ್ಯ ನ್ಯಾಯಾಧೀಶರಲ್ಲಿ ನಾನು ಮನವಿ ಮಾಡಿದ್ದೇನೆ. ಪ್ರಸ್ತುತ ಗೌಡಗೆರೆ ಗ್ರಾಮ ಶಾಂತ ಸ್ಥಿತಿಗೆ ಮರಳುತ್ತಿದೆ ಎಂದರು.
(ಯುಎನ್ಐ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...
Story first published: Sunday, December 24, 2000, 5:30 [IST]